"ನಾವು ಮೊದಲು ಭಾರತೀಯರು, ಆಮೇಲೆ ಐ.ಟಿ., ಬಿ.ಟಿ. ಯವರು. ನಾವು ಮೊದಲು ಭಾರತೀಯರು,
ಆಮೇಲೆ ಸಾಫ್ಟ್ವೇರ್ ದಿಗ್ಗಜರು." ಇತ್ತೀಚೆಗೆ ನಂದನ್ ನಿಲೇಕಣಿಯವರು ಕೆಲವು ಟಿ.ವಿ
ಚಾನೆಲ್ಗಳಲ್ಲಿ ಕೊಟ್ಟ ಸಂದರ್ಶನವನ್ನು ನೋಡಿದ ಮೇಲೆ ಈ ಮೇಲಿನ ಮಾತನ್ನು ಶ್ಲೋಕದಂತೆ ದಿನಕ್ಕೆ ಒಂದೆರಡಲ್ಲ,
ಸಾವಿರಾರು ಬಾರಿಯಾದರೂ ಪಠಿಸಲೇಬೇಕಾಗಿದೆ.
ಮೊದಲೇ ಇನ್ಫೋಸಿಸ್ನಿಂದ ಎಲ್ಲರಿಗೂ ಪರಿಚಿತರಾಗಿದ್ದ ನಿಲೇಕಣಿಯವರು ಭಾರತ ಸರ್ಕಾರಕ್ಕಾಗಿ ಕೈಗೊಂಡ "ಆಧಾರ್" ಎಂಬ, ವಿಶಿಷ್ಟ
ಗುರುತಿನ ಸಂಖ್ಯೆ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿ ತಾಂತ್ರಿಕವಾಗಿ ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದಾಗ
ಐ.ಟಿ ಪ್ರಪಂಚದ ನಮಗೆಲ್ಲರಿಗೂ ವಿಶೇಷ ಅಭಿಮಾನವುಂಟಾಗಿತ್ತು. ಆದರೆ ಈಗ ಅವರ ಮಾತುಗಳನ್ನು ಕೇಳಿ, ಆ ಯೋಜನೆಯ
ಋಣಭಾರದಿಂದ ಅವರು ಅಷ್ಟು ಕುಗ್ಗಿ ಹೋಗಿದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ. ಜೊತೆಜೊತೆಗೇ ಕಳವಳವೂ ಕೂಡ.
ತಮ್ಮ ಕಾರ್ಯಕ್ಷಮತೆಗೆ ತಕ್ಕುದಾದ ಅಂಥ ಯೋಜನೆಯನ್ನು ತಮಗೆ ಕೊಡಮಾಡಿದವರಿಗೆ ಧನ್ಯವಾದ ಅರ್ಪಿಸುವುದರಲ್ಲಿ
ಅರ್ಥ ಇದೆಯೇ ಹೊರತು, ಎಂದೆಂದಿಗೂ ಆಭಾರಿಯಾಗಿ ಅವರ ಹಿಂಬಾಲಕರಾಗುವಂಥ ಯಾವ ಅಗತ್ಯವಿದೆ ಎಂಬ ಜಿಜ್ಞಾಸೆ ಕಾಡುತ್ತದೆ. ಒಳ್ಳೆಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಒಂದು ಯೋಜನೆಯನ್ನು ನಿಭಾಯಿಸಿದ ಮಾತ್ರಕ್ಕೆ
ಆಡಳಿತ ಕ್ಷಮತೆಯೂ ತಾನೇತಾನಾಗಿ ಬಂದುಬಿಡುತ್ತದೆಯೇ? ಹಾಗಿದ್ದ ಪಕ್ಷದಲ್ಲಿ ಆಕ್ಸ್ಫರ್ಡ್ನಿಂದ
ಅರ್ಥಶಾಸ್ತ್ರಕ್ಕಾಗಿ ಡಾಕ್ಟರೇಟ್ ಪಡೆದವರ ಕೈಯಲ್ಲೇ ದೇಶದ ಚುಕ್ಕಾಣಿ ಒಂದು ದಶಕಕ್ಕೂ ಮಿಗಿಲಾಗಿ ಇದ್ದಾಗ್ಯೂ
ನಮ್ಮ ಜಿ.ಡಿ.ಪಿ. ಶೇಕಡ 5ಕ್ಕಿಂತ ಕಡಿಮೆ ಏಕಾಯಿತು? ಹಣದುಬ್ಬರ ಶೇಕಡ 8ಕ್ಕಿಂತ ಹೆಚ್ಚೇಕಾಯಿತು? ಅಂಥ ಅರ್ಥಶಾಸ್ತ್ರಜ್ಞರ ಕಣ್ಣು ತಪ್ಪಿಸಿ
ಜನಸಾಮಾನ್ಯರ ಕೋಟಿಗಟ್ಟಲೆ ಹಣ ಸೋರಿಹೋಗಿ ಹೇಗೆ ಅವರಿವರ ಜೇಬು ಸೇರಿತು?
ಬಾರಿಬಾರಿಗೂ 'ಆಧಾರ್' ಯೋಜನೆಯನ್ನೇ ಒಂದು ಯಶೋಗಾಥೆಯೆಂಬಂತೆ
ಬಿಂಬಿಸುತ್ತಾ ಸಾಗಿರುವ ನಿಲೇಕಣಿಯವರು ಒಂದು ಯೋಜನೆಯ ಅನುಷ್ಠಾನ ಕಾರ್ಯವನ್ನೇ ಅಳತೆಗೋಲಾಗಿ
ಪರಿಗಣಿಸುತ್ತಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೊಡನೆಯೇ ಆಧಾರ್ ಎಂಬ ಅನಾಥ ಶಿಶುವಿನ ಜನನ ಹಾಗೂ
ಅದರ ಲಾಲನೆಪಾಲನೆಗಳಾದ ಬಗೆಯತ್ತ ನಾವು ಕೊಂಚ ಗಮನ ಹರಿಸಬೇಕಾಗುತ್ತದೆ.
ಯೋಜನಾ ಆಯೋಗದಡಿ 2009ರ ಫೆಬ್ರುವರಿಯಲ್ಲಿ ಭಾರತೀಯರಿಗೆಲ್ಲ ವಿಶಿಷ್ಟ ಗುರುತಿನ ಸಂಖ್ಯೆ
ನೀಡುವ ಯು.ಐ.ಡಿ.ಎ.ಐ. ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಆಗ ಅದಕ್ಕೆ ಚೇರ್ಮೆನ್ ಹುದ್ದೆ ನಿಗದಿ ಮಾಡಿ ಕ್ಯಾಬಿನೆಟ್ ಸಚಿವರ ದರ್ಜೆಯನ್ನೂ ನೀಡಲಾಯಿತು. ಆ ಹುದ್ದೆಗೆ ನಿಯುಕ್ತರಾದವರೇ
ನಿಲೇಕಣಿಯವರು. ಅಲ್ಲಿಂದ ಶುರುವಾದ ಆಧಾರ ಯಾತ್ರೆ ಹೊಸದರಲ್ಲಿ
ಮಿಂಚು, ಗುಡುಗು, ಸಿಡಿಲಿನಿಂದ ಕೂಡಿ ಆರ್ಭಟಿಸುತ್ತ ಕೊನೆಗೊಮ್ಮೆ ಶಾಂತವಾಗಿ ಸುಮ್ಮನಾಯಿತು. ಕಳೆದ ಸೆಪ್ಟಂಬರ್ವರೆಗೂ ಈ ಯೋಜನೆಗೆ ವ್ಯಯವಾಗಿದ್ದು ಸುಮಾರು 3,500 ಕೋಟಿ ರೂ.ಗಳು! ನೋಂದಣಿಯಾದವರು ಸುಮಾರು
50 ಕೋಟಿ ಭಾರತೀಯರು!
ಭರ್ಜರಿಯಾಗಿಯೇ ಪ್ರಾರಂಭವಾದ ಇದರ ಭರಾಟೆಗೆ ಡಿಸೆಂಬರ್
2011ರಲ್ಲಿ ಮೊದಲ ಪೆಟ್ಟು ಕೊಟ್ಟಿದ್ದು ಸಂಸತ್ತಿನ ಹಣಕಾಸು ಸಮಿತಿ. ಯಾವ ಕಾನೂನಿನ ವ್ಯಾಪ್ತಿ, ಮಿತಿಗೂ
ಒಳಪಡದೆ ಅನಾಥವಾಗಿದ್ದ್ದ ಆಧಾರ್ ಕುರಿತ ಬಿಲ್ಅನ್ನು ಅಂಗೀಕರಿಸಲು ನಿರಾಕರಿಸಿ, ಈ ಯೋಜನೆಯಿಂದ ದೇಶದ
ಮೇಲಾಗುವ ಒಟ್ಟಾರೆ ಆರ್ಥಿಕ ಪರಿಣಾಮ ಹಾಗೂ ಯೋಜನೆಯ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಯೋಜನಾ ಆಯೋಗಕ್ಕೆ
ಸೂಚಿಸಿದಾಗ ಅದ್ಯಾವುದನ್ನೂ ತಾನು ಪರಿಗಣಿಸಿಯೇ ಇಲ್ಲವೆಂದು ಯೋಜನಾ ಆಯೋಗ ಒಪ್ಪಿಕೊಂಡಿತ್ತು! ಅಷ್ಟೇಅಲ್ಲ, ಗಡಿ ದಾಟಿ ಬಂದಿರುವ ಅಕ್ರಮ ವಲಸೆಗಾರರ ಮಾಹಿತಿ
ನಿರ್ವಹಣೆ ಬಗ್ಗೆ ಹಾಗೂ ದೇಶದ ಪ್ರಜೆಗಳ ಸಂಪೂರ್ಣ ಮಾಹಿತಿಯನ್ನು ಸರ್ಕಾರೇತರ ಕಂಪೆನಿಗಳ ಕೈಗೊಪ್ಪಿಸಿ
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಬಗ್ಗೆ ತನ್ನ ಕಳವಳವನ್ನು ಹಣಕಾಸು ಸಮಿತಿ ಪ್ರಕಟಿಸಿತ್ತು. ಇದಾದ
ವರ್ಷದೊಳಗೇ ಇಂಟಲಿಜೆನ್ಸ್ ಬ್ಯೂರೊ ಹಣ್ಣು, ತರಕಾರಿ, ನಾಯಿ, ಗಿಡಗಳ ಹೆಸರು ಮತ್ತು ಫೋಟೊಗಳಿದ್ದ ಗುರುತಿನ ಚೀಟಿಗಳನ್ನು ಪತ್ತೆ
ಮಾಡಿ, ಈ ಯೋಜನೆ ತಾಂತ್ರಿಕವಾಗಿ ದೋಷಮುಕ್ತ ಹಾಗೂ ಪ್ರಶ್ನಾತೀತ ಎಂಬ ನಂಬಿಕೆಯನ್ನು ಬುಡಮೇಲು ಮಾಡಿತು!
ಮತ್ತೊಂದು ಹೆಜ್ಜೆ ಮುಂದೆ ಹೋದ ಸರ್ವೋಚ್ಚ ನ್ಯಾಯಾಲಯ, 2013 ಸೆಪ್ಟೆಂಬರ್ನಲ್ಲಿ ಇದನ್ನು ಕಡ್ಡಾಯವಲ್ಲವೆಂದು
ಸಾರಿ, ಈ ಗುರುತಿನ ಚೀಟಿ ಇರದ ಮಾತ್ರಕ್ಕೆ ಎಲ್.ಪಿ.ಜಿ. ಮುಂತಾದ ಸೇವೆಗಳನ್ನು ನಿರ್ಬಂಧಿಸಕೂಡದು ಎಂದು
ಮಧ್ಯಂತರ ತೀರ್ಪಿತ್ತಿತು! ಜೊತೆಗೆ ಇದನ್ನು 'ಅಡ್ರೆಸ್ ಪ್ರೂಫ್' ಎಂದು ಪರಿಗಣಿಸಲು ಸಾಧ್ಯವಿಲ್ಲವೆಂಬ
ಅಂಶವನ್ನೂ ಹೊರ ಹಾಕಿತು.
ಪ್ರತಿಬಾರಿ ನಮ್ಮ ಘನಸರ್ಕಾರದ ಗರ್ಭದಿಂದ ಇಂಥ ಯೋಜನೆಗಳು ಹೊರಬಂದಾಗಲೂ ಏಕೆ? ಏನು? ಎಂದು ಪ್ರಶ್ನಿಸದೆ
ಬರಿದೇ ಪಾಲಿಸುವ ನಮ್ಮಂಥ 'ಶ್ರೀಸಾಮಾನ್ಯರು' ಈ ಬಾರಿಯೂ
ಪ್ರತಿಕ್ರಿಯಿಸಿದ್ದು ಹೀಗೆಯೇ. ಹೇಳಿದ ದಿನದಂದು ಪುಟಗಟ್ಟಲೆ 'ಪ್ರೂಫ್' ಗಳನ್ನು ಹಿಡಿದು ದೊಡ್ಡ ಕ್ಯೂ ಗಳಲ್ಲಿ
ತಾಸುಗಟ್ಟಲೆನಿಂತು, ಬರದಿದ್ದ ನಗುವನ್ನು ಕೆಮರಾ ಮುಂದೆ ಬರಿಸಿಕೊಂಡು, ಪದೇಪದೇ ಬೆರಳೊತ್ತಿದರೂ ದಾಖಲಾಗದ
ಬಯೊಮೆಟ್ರಿಕ್ ಅನ್ನು ಶಪಿಸಿ, ಕೊನೆಗೆ ಆಪರೇಟರ್ಗಳು ಮುಖ, ವಿಳಾಸಗಳನ್ನು ಕಂಪ್ಯೂಟರ್ನಲ್ಲಿ ತೋರಿಸಿದಾಗ ದೊಡ್ಡ ನಿಟ್ಟುಸಿರು, ನೆಮ್ಮದಿಯೊಂದಿಗೆ
ಹೊರಬಂದೆವು. ಎಲ್ಲ ಮುಗಿಯಿತೆಂದು ನಾವು ಬಂದೆವು. ಆದರೆ ಅಷ್ಟು ಸಲೀಸಾಗಿ ನಮ್ಮ ಗುರುತಿನ ಸಂಖ್ಯೆಗಳು
ಬರಲಿಲ್ಲ!
ತಾತ್ಪರ್ಯವಿಷ್ಟೇ - ಒಂದು ಯೋಜನೆಯ ಫಲಾಫಲಗಳನ್ನು ವಿಶ್ಲೇಷಿಸದೆ
ಜನಸಾಮಾನ್ಯರ ಮೇಲೆ ಹೇರುವ ನಮ್ಮ ಘನ ಸರ್ಕಾರದ ಮನಸ್ಥಿತಿಯ ಬಗ್ಗೆ ಹೆಮ್ಮೆ ಪಡುವಂಥದ್ದೇನಿದೆ? ಯಶಸ್ಸಿನ
ಮಾತಿರಲಿ, ದೇಶಾದ್ಯಂತ ಪೂರ್ಣವಾಗಿ ಅನುಷ್ಠಾನವೇ ಆಗದಿರುವ ಈ ಯೋಜನೆಯ ಭಾಗವಾದ ಮಾತ್ರಕ್ಕ್ಕೆ ಇದೊಂದು
ಸಾಧನೆ ಎಂದು ಸಂಭ್ರಮಿಸುವ ಅಗತ್ಯವೇನಿದೆ? ಬಹಳಷ್ಟು ಜನರ ಬಳಿ ಈಗಾಗಲೇ ಪ್ಯಾನ್ಕಾರ್ಡ್, ಪಾಸ್ಪೋರ್ಟ್ಗಳಿರುವಾಗ ಅದನ್ನೇ ಪರಿಷ್ಕರಿಸಿ ಬಳಸಿಕೊಳ್ಳುವ ಬುದ್ಧಿವಂತಿಕೆ ಮೆರೆಯುವ ಬದಲು ಜನಸಾಮಾನ್ಯರ ತೆರಿಗೆಯ
ದುಡ್ಡಿನಲ್ಲಿ ಈ ಹೊಸ ಸಮಾರಾಧನೆ ಬೇಕಿರಲಿಲ್ಲ ಅಲ್ಲವೆ? ಇಲ್ಲಿಗೆ ಮೀಸಲಿಟ್ಟ ಜನ, ಹಣ, ಹಾಗೂ
ಸಮಯದಲ್ಲಿನ ಸ್ವಲ್ಪ ಭಾಗವನ್ನಾದರೂ ಮೀಸಲಿಟ್ಟಿದ್ದರೆ ನಮ್ಮ ಸೈನಿಕರಿಗೆ ಮತದಾನ
ಮಾಡುವ ಅವಕಾಶವನ್ನು ಧಾರಾಳಾವಾಗಿ ಕಲ್ಪಿಸಬಹುದಾಗಿತ್ತು! ಯಾರ ಆಜ್ಞೆ ಪಾಲಿಸುತ್ತಿದ್ದೇನೆ ಎಂಬ ಅರಿವೇ
ಇಲ್ಲದೆ ಪ್ರಾಣ ಬಿಡುವ ನಮ್ಮ ಯೋಧರೇಕೆ ಈ ಮೂಲಭೂತ ಹಕ್ಕಿನಿಂದ ವಂಚಿತರಾಗಬೇಕು?
ಮೊದಲೇ ಇನ್ಫೋಸಿಸ್ನಿಂದ ಎಲ್ಲರಿಗೂ ಪರಿಚಿತರಾಗಿದ್ದ ನಿಲೇಕಣಿಯವರು ಭಾರತ ಸರ್ಕಾರಕ್ಕಾಗಿ ಕೈಗೊಂಡ "ಆಧಾರ್" ಎಂಬ, ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿ ತಾಂತ್ರಿಕವಾಗಿ ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದಾಗ ಐ.ಟಿ ಪ್ರಪಂಚದ ನಮಗೆಲ್ಲರಿಗೂ ವಿಶೇಷ ಅಭಿಮಾನವುಂಟಾಗಿತ್ತು. ಆದರೆ ಈಗ ಅವರ ಮಾತುಗಳನ್ನು ಕೇಳಿ, ಆ ಯೋಜನೆಯ ಋಣಭಾರದಿಂದ ಅವರು ಅಷ್ಟು ಕುಗ್ಗಿ ಹೋಗಿದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ. ಜೊತೆಜೊತೆಗೇ ಕಳವಳವೂ ಕೂಡ. ತಮ್ಮ ಕಾರ್ಯಕ್ಷಮತೆಗೆ ತಕ್ಕುದಾದ ಅಂಥ ಯೋಜನೆಯನ್ನು ತಮಗೆ ಕೊಡಮಾಡಿದವರಿಗೆ ಧನ್ಯವಾದ ಅರ್ಪಿಸುವುದರಲ್ಲಿ ಅರ್ಥ ಇದೆಯೇ ಹೊರತು, ಎಂದೆಂದಿಗೂ ಆಭಾರಿಯಾಗಿ ಅವರ ಹಿಂಬಾಲಕರಾಗುವಂಥ ಯಾವ ಅಗತ್ಯವಿದೆ ಎಂಬ ಜಿಜ್ಞಾಸೆ ಕಾಡುತ್ತದೆ. ಒಳ್ಳೆಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಒಂದು ಯೋಜನೆಯನ್ನು ನಿಭಾಯಿಸಿದ ಮಾತ್ರಕ್ಕೆ ಆಡಳಿತ ಕ್ಷಮತೆಯೂ ತಾನೇತಾನಾಗಿ ಬಂದುಬಿಡುತ್ತದೆಯೇ? ಹಾಗಿದ್ದ ಪಕ್ಷದಲ್ಲಿ ಆಕ್ಸ್ಫರ್ಡ್ನಿಂದ ಅರ್ಥಶಾಸ್ತ್ರಕ್ಕಾಗಿ ಡಾಕ್ಟರೇಟ್ ಪಡೆದವರ ಕೈಯಲ್ಲೇ ದೇಶದ ಚುಕ್ಕಾಣಿ ಒಂದು ದಶಕಕ್ಕೂ ಮಿಗಿಲಾಗಿ ಇದ್ದಾಗ್ಯೂ ನಮ್ಮ ಜಿ.ಡಿ.ಪಿ. ಶೇಕಡ 5ಕ್ಕಿಂತ ಕಡಿಮೆ ಏಕಾಯಿತು? ಹಣದುಬ್ಬರ ಶೇಕಡ 8ಕ್ಕಿಂತ ಹೆಚ್ಚೇಕಾಯಿತು? ಅಂಥ ಅರ್ಥಶಾಸ್ತ್ರಜ್ಞರ ಕಣ್ಣು ತಪ್ಪಿಸಿ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಸೋರಿಹೋಗಿ ಹೇಗೆ ಅವರಿವರ ಜೇಬು ಸೇರಿತು?
ಪ್ರತಿಬಾರಿ ನಮ್ಮ ಘನಸರ್ಕಾರದ ಗರ್ಭದಿಂದ ಇಂಥ ಯೋಜನೆಗಳು ಹೊರಬಂದಾಗಲೂ ಏಕೆ? ಏನು? ಎಂದು ಪ್ರಶ್ನಿಸದೆ ಬರಿದೇ ಪಾಲಿಸುವ ನಮ್ಮಂಥ 'ಶ್ರೀಸಾಮಾನ್ಯರು' ಈ ಬಾರಿಯೂ ಪ್ರತಿಕ್ರಿಯಿಸಿದ್ದು ಹೀಗೆಯೇ. ಹೇಳಿದ ದಿನದಂದು ಪುಟಗಟ್ಟಲೆ 'ಪ್ರೂಫ್' ಗಳನ್ನು ಹಿಡಿದು ದೊಡ್ಡ ಕ್ಯೂ ಗಳಲ್ಲಿ
ತಾಸುಗಟ್ಟಲೆನಿಂತು, ಬರದಿದ್ದ ನಗುವನ್ನು ಕೆಮರಾ ಮುಂದೆ ಬರಿಸಿಕೊಂಡು, ಪದೇಪದೇ ಬೆರಳೊತ್ತಿದರೂ ದಾಖಲಾಗದ ಬಯೊಮೆಟ್ರಿಕ್ ಅನ್ನು ಶಪಿಸಿ, ಕೊನೆಗೆ ಆಪರೇಟರ್ಗಳು ಮುಖ, ವಿಳಾಸಗಳನ್ನು ಕಂಪ್ಯೂಟರ್ನಲ್ಲಿ ತೋರಿಸಿದಾಗ ದೊಡ್ಡ ನಿಟ್ಟುಸಿರು, ನೆಮ್ಮದಿಯೊಂದಿಗೆ ಹೊರಬಂದೆವು. ಎಲ್ಲ ಮುಗಿಯಿತೆಂದು ನಾವು ಬಂದೆವು. ಆದರೆ ಅಷ್ಟು ಸಲೀಸಾಗಿ ನಮ್ಮ ಗುರುತಿನ ಸಂಖ್ಯೆಗಳು ಬರಲಿಲ್ಲ!
ತಾತ್ಪರ್ಯವಿಷ್ಟೇ - ಒಂದು ಯೋಜನೆಯ ಫಲಾಫಲಗಳನ್ನು ವಿಶ್ಲೇಷಿಸದೆ
ಜನಸಾಮಾನ್ಯರ ಮೇಲೆ ಹೇರುವ ನಮ್ಮ ಘನ ಸರ್ಕಾರದ ಮನಸ್ಥಿತಿಯ ಬಗ್ಗೆ ಹೆಮ್ಮೆ ಪಡುವಂಥದ್ದೇನಿದೆ? ಯಶಸ್ಸಿನ
ಮಾತಿರಲಿ, ದೇಶಾದ್ಯಂತ ಪೂರ್ಣವಾಗಿ ಅನುಷ್ಠಾನವೇ ಆಗದಿರುವ ಈ ಯೋಜನೆಯ ಭಾಗವಾದ ಮಾತ್ರಕ್ಕ್ಕೆ ಇದೊಂದು
ಸಾಧನೆ ಎಂದು ಸಂಭ್ರಮಿಸುವ ಅಗತ್ಯವೇನಿದೆ? ಬಹಳಷ್ಟು ಜನರ ಬಳಿ ಈಗಾಗಲೇ ಪ್ಯಾನ್ಕಾರ್ಡ್, ಪಾಸ್ಪೋರ್ಟ್ಗಳಿರುವಾಗ ಅದನ್ನೇ ಪರಿಷ್ಕರಿಸಿ ಬಳಸಿಕೊಳ್ಳುವ ಬುದ್ಧಿವಂತಿಕೆ ಮೆರೆಯುವ ಬದಲು ಜನಸಾಮಾನ್ಯರ ತೆರಿಗೆಯ
ದುಡ್ಡಿನಲ್ಲಿ ಈ ಹೊಸ ಸಮಾರಾಧನೆ ಬೇಕಿರಲಿಲ್ಲ ಅಲ್ಲವೆ? ಇಲ್ಲಿಗೆ ಮೀಸಲಿಟ್ಟ ಜನ, ಹಣ, ಹಾಗೂ
ಸಮಯದಲ್ಲಿನ ಸ್ವಲ್ಪ ಭಾಗವನ್ನಾದರೂ ಮೀಸಲಿಟ್ಟಿದ್ದರೆ ನಮ್ಮ ಸೈನಿಕರಿಗೆ ಮತದಾನ
ಮಾಡುವ ಅವಕಾಶವನ್ನು ಧಾರಾಳಾವಾಗಿ ಕಲ್ಪಿಸಬಹುದಾಗಿತ್ತು! ಯಾರ ಆಜ್ಞೆ ಪಾಲಿಸುತ್ತಿದ್ದೇನೆ ಎಂಬ ಅರಿವೇ
ಇಲ್ಲದೆ ಪ್ರಾಣ ಬಿಡುವ ನಮ್ಮ ಯೋಧರೇಕೆ ಈ ಮೂಲಭೂತ ಹಕ್ಕಿನಿಂದ ವಂಚಿತರಾಗಬೇಕು?
ದಿಗಿಲುಗೊಳಿಸುವ ಮತ್ತೊಂದು ಅಂಶವೆಂದರೆ, ಇದೇ ಮಾದರಿಯ ಎನ್.ಐ.ಡಿ.
ಜಾರಿಗೊಳಿಸ ಹೊರಟ ಬ್ರಿಟನ್ ಸರ್ಕಾರ ಸುಮಾರು 8 ವರ್ಷಗಳ ಕಾಲ 250 ಮಿಲಿಯನ್ ಪೌಂಡ್ಗಳಷ್ಟು ದುಡ್ಡು ವೆಚ್ಚ ಮಾಡಿದ ಮೇಲೆ ಇಡೀ ಯೋಜನೆಯನ್ನೇ ರದ್ದುಗೊಳಿಸಿತು! ಹೆಚ್ಚುತ್ತಲೇ ಹೋದ ಅನುಷ್ಠಾನ ವೆಚ್ಚವನ್ನು ಸರಿತೂಗಿಸಲಾಗದೆ ಅದು ಈ ನಿರ್ಧಾರಕ್ಕೆ ಬರಬೇಕಾಯಿತು.
ಅಲ್ಲಿಯ ಕಥೆಯೇ ಹಾಗಾದರೆ ನಮ್ಮಲ್ಲಿ ಇನ್ನೆಷ್ಟು ಅಧ್ವಾನವಾಗಬಹುದು
ಊಹಿಸಿ. ಈಗ ನಿಲೇಕಣಿಯವರ ಸ್ಥಾನಕ್ಕೆ ಬರುವ ಮತ್ತೊಬ್ಬರು ಇದನ್ನು ಪರಿಷ್ಕರಿಸಹೊರಟರೆ ಅಥವಾ ನಿರ್ವಹಣಾ
ವೆಚ್ಚ ಅತಿಯಾಯಿತೆಂದು ಸರ್ಕಾರ ಇದನ್ನು ಇಷ್ಟಕ್ಕೇ ಕೈಬಿಟ್ಟರೆ ಏನು ಸಾಧಿಸಿದ ಹಾಗಾಗುತ್ತದೆ? ಇದುವರೆಗೂ
ವ್ಯಯಿಸಿರುವ ಹಣಕ್ಕೆ ಯಾರು ಹೊಣೆ? ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಘನ ಸರ್ಕಾರ ಶುರು ಮಾಡುವ
ಬಹು ಕೋಟಿ ಯೋಜನೆಗಳೆಲ್ಲಾ ಕೊನೆಗೆ ಹಗರಣಗಳಾಗೇ ಮುಗಿಯುತ್ತಿವೆ. ಹೀಗಿರುವಾಗ 'ಆಧಾರ್ ಹಗರಣ' ಎಂಬುದೂ
ಒಂದಿಲ್ಲೊಂದು ದಿನ ನಮ್ಮೆದುರು ಧುತ್ತೆಂದು ಪ್ರತ್ಯಕ್ಷವಾಗುವುದಿಲ್ಲ ಎಂಬುದಕ್ಕೆ ‘ಆಧಾರ’ವೇನು?
ಎಲ್ಲವನ್ನೂ ಸಮೀಕರಿಸಿ ನೋಡಿದಾಗ ಇವರು ಪದೇಪದೇ ಉದಾಹರಿಸುವ
'ಆಧಾರ್' ಯೋಜನೆ ಓರ್ವ ವ್ಯಕ್ತಿಯನ್ನು ಆಡಳಿತಾತ್ಮಕವಾಗಿ ಅಳೆಯಲು ಸೂಕ್ತ ಮಾಪಕವಲ್ಲ ಎಂಬುದು ವೇದ್ಯವಾಗುವುದಿಲ್ಲವೇ?
ಹಾಗೇ ಮಾತನಾಡುತ್ತಾ ನಿಲೇಕಣಿಯವರು ಈಗಿರುವ ಸಮಸ್ಯೆಗಳಿಗೆಲ್ಲ
ಪರ್ಯಾಯವಾಗಿ 'ಸಿಸ್ಟಂ'ಗಳನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಾರೆ. ಇವರು ಸಿಸ್ಟಂ ನಿರ್ಮಾಣದಲ್ಲಿ ಸಿದ್ಧಹಸ್ತರು ಎಂಬುದು ನಮಗೆಲ್ಲ ಗೊತ್ತಿರುವ ವಿಚಾರವೇ. ಇವರಷ್ಟೇ ಏಕೆ, ಸಿಸ್ಟಂಗಳನ್ನು ನಿರ್ಮಿಸಬಲ್ಲ
ಭಾರತದ ಚತುರರ ಒಂದು ಹಿಂಡೇ ಜಗತ್ತಿನಾದ್ಯಂತ ಇದೆ. ಆದರೆ ನಮಗೆ ಈಗ ತುರ್ತಾಗಿ ಬೇಕಾಗಿರುವುದು ತಂತ್ರಜ್ಞಾನ
ಆಧಾರಿತ, ವಿದ್ಯುತ್ಚಾಲಿತ ಎಲೆಕ್ಟ್ರಾನಿಕ್ ಸಿಸ್ಟಂಗಳಲ್ಲ.
ಮಲಗಿರುವ ನಮ್ಮ ಸ್ವಾಭಿಮಾನವನ್ನು ಬಡಿದೆಬ್ಬಿಸಬಲ್ಲ, ದೇಶಭಕ್ತಿಯನ್ನು ಪ್ರೇರೇಪಿಸಬಲ್ಲ, ಒಗ್ಗಟ್ಟು
ಮೂಡಿಸಿ ಹೃದಯಗಳನ್ನು ಬೆಸೆಯಬಲ್ಲ ಸಧೃಢ ಮಾನವ ಸಿಸ್ಟಂಗಳು. ಒಂದು ದೇಶದ್ರೋಹಿ ಮನಸಿನ ಪಾಶವೀತನಕ್ಕೆ
ಕ್ಷಣಮಾತ್ರದಲ್ಲಿ ಸುಟ್ಟು ಕರಕಾಗಬಲ್ಲ ಕಂಪ್ಯೂಟರ್ ಸಿಸ್ಟಂಗಳು ನಮ್ಮ ಬಳಿ ಬೇಕಾದಷ್ಟಿವೆ. ಆದರೆ ಹಬ್ಬ
ಹರಿದಿನಗಳಲ್ಲಿ ಜನನಿಬಿಡ ಜಾಗಗಳಿಗೆ ಹೋದರೂ ಕೈ, ಕಾಲು, ಜೀವಗಳೊಂದಿಗೆ ಕ್ಷೇಮವಾಗಿ ಹಿಂತಿರುಗುತ್ತೇವೆಂಬ
ಭರವಸೆ ನೀಡುವ ಜೀವರಕ್ಷಕ ಮಾನವ ಸಿಸ್ಟಂಗಳು ನಮ್ಮ
ಬಳಿಯಿಲ್ಲ. ಇಂಥ ಸಿಸ್ಟಂಗಳನ್ನು ತಯಾರಿಸಬೇಕಾಗಿದೆ ನಿಲೇಕಣಿಯವರೆ. ಇವುಗಳನ್ನು 'ಟೆಕ್ ಪಾರ್ಕ್'ಗಳ
ಎ.ಸಿ.ರೂಮಿನಲ್ಲಿ ತಯಾರು ಮಾಡಲಾಗುವುದಿಲ್ಲ. ಪ್ರತಿ ಮನೆಯೂ ಇದನ್ನು ತಯಾರಿಸುವ ಕಾರ್ಖಾನೆಯಾಗಬೇಕು.
ಪ್ರತಿ ಹೃದಯದಲ್ಲೂ ಇದಕ್ಕೆ ಬೇಕಾದ ಸಾಫ್ಟ್ ವೇರ್ ಇನ್ಸ್ಟಾಲ್ ಆಗಬೇಕು. ಇಂದು ವಿಶ್ವ ದರ್ಜೆಯ ಕಂಪ್ಯೂಟರ್ ಸಿಸ್ಟಂಗಳನ್ನು ನಿರ್ಮಿಸಬಲ್ಲ,
ಅನಾಯಾಸವಾಗಿ ಅದನ್ನು ನಿಯಂತ್ರಿಸಬಲ್ಲ ಚತುರರು ನೀವಿರಬಹುದು.
ಆದರೆ ವಿಶ್ವದ ಮುಂದೆ ಭಾರತೀಯರ ದರ್ಜೆಯನ್ನು ಏರಿಸಬಲ್ಲ, ಮಾನವ ಸಿಸ್ಟಂಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಲ್ಲ
ಅನುಭವ, ಜಾಣ್ಮೆ, ಚಾತುರ್ಯ ನಿಮಗಿದೆಯೇ ಹೇಳಿ?
ಅಧಿಕಾರಾವಧಿ ಮುಗಿಯುತ್ತಿದ್ದಂತೆ ಬದಲಾವಣೆ ತರುತ್ತೇವೆ ಎಂದು ಬೊಬ್ಬಿಡುತ್ತಿರುವ
ನಮ್ಮ ಘನ ಸರ್ಕಾರ ಅರ್ಥಮಾಡಿಕೊಳ್ಳಬೇಕಾದ ಒಂದು ಮುಖ್ಯ ಅಂಶವಿದೆ. ಬದಲಾವಣೆಯೆಂಬುದು ಒಂದು ಟಿ.ವಿ.ಚಾನೆಲ್ನ ಸಂದರ್ಶನದಲ್ಲಿ ಹೇಳಿದರೆ ಬರುವುದಿಲ್ಲ. ಆಕ್ಸ್ಫರ್ಡ್ ವಿವಿಯಲ್ಲಿ ಓದಿ ಬಂದು ಎಲ್ಲಕ್ಕೂ ಮೌನಕ್ಕೆ ಶರಣಾದರೂ ಬರುವುದಿಲ್ಲ. ಶುಗರ್, ಬಿ.ಪಿ.ಯಂತೆ ವಂಶಪಾರಂಪರ್ಯವಾಗಿಯಂತೂ ಬರುವುದೇ ಇಲ್ಲ! ಅದೊಂದು ಸಣ್ಣ ಅಲೆಯಾಗಿ ಹುಟ್ಟಿ, ತನ್ನಿರವನ್ನೂ
ಸೂಚಿಸದೆ, ಕಾಲಕ್ರಮೇಣ ಎಲ್ಲವನ್ನೂ, ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ನಂಬಿಕೆ, ವಿಶ್ವಾಸ, ಯಶಸ್ಸನ್ನುಗಳಿಸಿಕೊಳ್ಳುವ ದೊಡ್ಡ ಅಲೆಯಾಗಿ ಭೋರ್ಗರೆಯುತ್ತಾ ಬರುತ್ತದೆ.
ಆ ಬದಲಾವಣೆಯ ಅಲೆಯ ನಿರೀಕ್ಷೆಯಲ್ಲಿರುವ ನಮಗೀಗ 'ದೂರದೃಷ್ಟಿ'ಯ ರೋಗ
ಬಡಿದಿದೆ ನಿಲೇಕಣಿಯವರೆ. ಹತ್ತಿರದ್ದು ಯಾವುದೂ ಕಾಣುತ್ತಿಲ್ಲ. ನಮ್ಮ ಊರು, ಕೇರಿಗಳಲ್ಲಿ ಯಾರು ಯಾವ
ಸಿಸ್ಟಂ ನಿರ್ಮಿಸುವ ಭರವಸೆ ಕೊಡುತ್ತಿದ್ದಾರೆ, ಯಾವ 'ಆಧಾರ'ದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದಾರೆ
ಎಂದು ನಾವು ನೋಡುತ್ತಿಲ್ಲ. ಏಕೆಂದರೆ, ‘ಸಾಫ್ಟ್ವೇರ್’ ನವರೇ
ಆದ ನಾವು ಅರಿಯಲೇಬೇಕಾದ ಸತ್ಯವೊಂದಿದೆ. ಮೊದಲು ದೇಶ,
ನಂತರ ಬೆಂಗಳೂರು, ಆಮೇಲಷ್ಟೇ ನಮ್ಮ ಎ.ಸಿ. ರೂಮಿನ ಸಾಫ್ಟ್ವೇರ್ ಸಿಸ್ಟಂಗಳು. ನಾಳೆ ದೇಶಕ್ಕೇ ಕುತ್ತು
ಬಂದರೆ ಬೆಂಗಳೂರು ಹೊರತಾಗುವುದಿಲ್ಲ. ಬೆಂಗಳೂರು ನಲುಗಿದರೆ ಸಿಸ್ಟಂಗಳು ನಮ್ಮನ್ನುಳಿಸುವುದಿಲ್ಲ! ಆದ್ದರಿಂದ “ನಾವು
ಮೊದಲು ಭಾರತೀಯರು, ಆಮೇಲೆ ಐಟಿ, ಬಿಟಿ ಯವರು”. ಸಧೃಢ ದೇಶ, ಸಮರ್ಥ ನಾಯಕತ್ವ ನಮ್ಮ ಮೊದಲ ಆದ್ಯತೆ.
ಇಲ್ಲಿ ನೀವು ಯಾರು ಬೇಕಾದರೂ ನಿಲ್ಲಿ, ನಮಗೆ ಬೇಕಾಗಿರುವುದು ದಿಲ್ಲಿ, ದಿಲ್ಲಿ, ದಿಲ್ಲಿ! ನಮ್ಮ
ಸದಾಶಯ, ಹಾರೈಕೆಗಳೆಲ್ಲಾ ದಿಲ್ಲಿಯ ಗದ್ದುಗೆ ಹಿಡಿಯುವ ಕ್ಷಮತೆ ಇರುವವರ ಮನೋಬಲ, ಶಕ್ತಿಯನ್ನು ಹೆಚ್ಚಿಸುವುದಕ್ಕೆ
ಮಾತ್ರ ಮೀಸಲು!
ಕಂಪ್ಯೂಟರ್ ಸಿಸ್ಟಂಗಳನ್ನು ನಿರ್ಮಿಸಲು ಬರದಿದ್ದರೂ ಸರಿಯೆ,
ಗದ್ದುಗೆಯನ್ನೇರಿ, ಈ ದೇಶದ ಹಿತವನ್ನು ಕಾಯ್ದು, ಯಶಸ್ಸಿನ ರೂವಾರಿಯಾಗಿ, ನಿಜವಾದ ಬದಲಾವಣೆಯ ಹರಿಕಾರರಾಗುವವರು
ಬೇಕು. ಸಂದರ್ಭಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ದೇಶದ ಒಳಹೊಕ್ಕಿರುವ ವೈರಸ್ಗಳನ್ನು ನಿವಾರಿಸಬಲ್ಲ ಎದೆಗಾರಿಕೆ ಎಂಬ 'ಆಂಟಿವೈರಸ್' ಇರುವ ಅಪ್ಪಟ ಭಾರತೀಯ ಬೇಕು. ಒಟ್ಟಿನಲ್ಲಿ
ಹೇಳುವುದಾದರೆ ಭಾರತಮಾತೆಗೆ 'ನಮೋ' ಎನ್ನುವವರಿಗೇ ನಾವೂ 'ನಮೋ' ಎನ್ನುವುದು. ನಾವು ಬೇರೆಯದೇ ಅಲೆಯಲ್ಲಿ
ತೇಲಿಹೋಗುತ್ತಿದ್ದೇವೆ. ಕ್ಷಮಿಸಿ, ಈಗ ಯಾವುದೇ 'ಕಣಿ' ಕೇಳುವ ಸ್ಥಿತಿಯಲ್ಲಿ ನಾವಿಲ್ಲ!
* * *
* * *
nimma adhara sahith baraha tuba chennagide..hagu keni kanivege beddanall yemba besar..nammli...
ReplyDelete7 ಸಾವಿರ ಕೋಟಿಯ ಸರದಾರ 1 ರೂ ಸಂಬಳಕ್ಕಾಗಿ ದುಡಿಯದೆ ಕ್ಯಾಬಿನೆಟ್ ದರ್ಜೆಯ ಸಂಬಳವನ್ನೇಕೆ ಸ್ವೀಕರಿಸಿದರು. ಆ ರೀತಿ ದೇಶಸೇವೆ ಮಾಡಿದ್ದರೆ ಅವರಿಗೆ ನಾವು ಮತ ನೀಡಬಹುದಿತ್ತೆನೊ.
ReplyDeleteAdbhuta vaagi moodi bandide nimmee lekhana :) munduvaresi
ReplyDeleteದೇಶವನ್ನು ಉದ್ಧಾರ ಮಾಡಲು ರಾಜಕಾರಣವೊಂದೇ ಮಾರ್ಗವೇ? ನಿಜವಾಗಿಯೂ ಮನಸ್ಸಿದ್ದರೆ ವೋಟಿಗೆ ನಿಲ್ಲದೇ ಸ್ವಂತಿಕೆಯಲ್ಲೇ ದೇಶಸೇವೆ ಮಾಡಬಹುದಲ್ಲವೇ?
ReplyDeleteI have been writing a series on Aadhar in HosaDigantha from 28 March 2014. I have asked 10 questions in my article (dated 31 March). Probably Mr.Nilekani has no answer to even one.
ReplyDeleteThat is expected. Waiting for the 'scam' underneath it to uncover!
DeleteIt needs people like Subramanian swamy to do it.
DeleteVery apt writing. Aadhar was always a high profile scam in the making, even when it was at the conceptual stage. It's our apathy that we taxpayers pay for their misdeeds.
ReplyDeleteಒಳ್ಳೆಯ ಲೇಖನ ಸಮಯೋಚಿತ.... ಚೆಂದ ಬರೆದಿದ್ದೀರಿ. ನೀಲೆಕಣಿ ಅವರ ವೆಬ್ ಸೈಟ್ ನೋಡಿದ್ರೆ ಬರಿ ಅವರ ಬೆನ್ನು ಅವರನ್ನೇ ತಟ್ಟುಕೊಳ್ಳುತ್ತಿದ್ದಾರೆ ಎಂದೆನಿಸುತ್ತೆ. ರಾಜಕೀಯಕ್ಕೆ ಎಂತಹವರು ಹೋದ್ರೂ ಅಲ್ಲಿನ ಬುದ್ಧಿ ಬಂದುಬಿಡುತ್ತೇನೋ ಎಂದೆನಿಸುತ್ತೆ.
ReplyDeleteAdbbhuta mattu mana muttuva lekhana
ReplyDeleteಈ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಓದಬೇಕಾದುದು.
ReplyDeleteSimply Super ... !
ReplyDeleteThanks for informative article
Joshi
Really a nice article. Well written.
ReplyDeleteThe total spend on the UIDAI project is claimed to be 3500 cr to cover 50 cr population. That works about to Rs.70 per head. I seriously doubt the calculation methodology. It was said that the agency that captures the data would be paid by UIDAI an amount of Rs.100 per head! Even if that by itself was Rs.70 and not 100, what about the expenses on the administrative, marketing, advertising and various other costs? It would be interesting if this angle alone can be investigated to find out if there is more than what meets the eye. To this day, the sub-contractors are charging Rs.50 for each citizen for capturing and uploading the profile? Mr.Nilekani goes around saying that Aadhar is an extremely powerful tool for eradicating corruption.
Too much of rubbing shoulders with pappu and mama has made a sincere person talk like this or was it always there to be discovered?
ಶ್ರೀವತ್ಸ ಜೋಷಿ ಅವರಿಗೆ ಮೊದಲಿಗೆ ವಂದನೆಗಳು ಇಲ್ಲಿಗೆ ಕರೆತಂದಿದ್ದಕ್ಕೆ..,
ReplyDeleteಸಹನಾ ಅವರೇ....
ಕತ್ತಿಯ ಮೊನೆಯಂತೆ ಹರಿತವಾದ ಬರಹ...
ನಮೋ ನಮಃ
ಧನ್ಯವಾದ..ಪ್ರತಾಪ್ ರ ಮೇಲಿನ ಬರಹವೂ ಒಂದಿದೆ..ಓದಿ ತಿಳಿಸಿ ಹೇಗನಿಸುತ್ತೆ ಅಂತ :)
DeleteIn spite of so many facts and figures about Adhar scam has unveiled, certain percentage of well educated population is yet to believe this. This is truly unfortunate.. They still hold the same opinion, which the whole country perhaps have had, when Adhar was introduced for the first time..
ReplyDeleteThis comment has been removed by the author.
ReplyDeleteAgree
DeleteI am not a great fan of NN but the fact remains NN is head & shoulder above Ananthkumar. What's Ananth's contribution to his constituency or for that matter to indian polity?. I as a person will vote for a person who has basic honesty on that count Ananth has failed.
DeletePlease read the article again. This is not Ananth Vs. Nilekani. For once we have to ignore who is contesting locally and focus on the national leadership. If we fail to bring about immediate and effective changes to our Foreign, Defense, Educational & Economic policies, we as a country will deteriorate further!!
DeleteThis comment has been removed by the author.
ReplyDeletewonderful!!
ReplyDeleteಧನ್ಯವಾದಗಳು ಮೇಡಮ್ ಒಂದಿಷ್ಟು ಮಾಹಿತಿಗಾಗಿ :)
ReplyDeleteನೀವು ಬರೆದ ರೀತಿ ತುಂಬಾ ಮೆಚ್ಚುಗೆಯಾಯಿತು. ಮುಂದುವರೆಸಿ.
ReplyDeleteout of 50 crore AADHAR CARDS 19483 errors..!! what is the % of error?
ReplyDeleteIf Nilekani contested from BJP....................?
Nivu bekadare NAMO Bhajane maadi..
aadare Nilekaniyanthavara saamarthya aleyuva reethi idalla...
Does the small percentage of errors justify voting for NN? A system should not have any chance of errors, that too after so many trial runs! What is great about a system which cannot be corrected after so much of delay? And what purpose the AADHAR card has served when it cannot be accepted as a proof for date of birth & address, which are the basic necessities of such a card? Remember, in computer systems 99.99% 'RIGHT' and 0.o1% 'WRONG' is WRONG only!
DeleteA beautiful article on the joke of India.......Superb writeup madam...! He wanted to come out of wrecked boat...so he started a drama baazi called Aadhaar...a project which opens the can of pandora box...
ReplyDeleteDuring his tenure in infosys never bothered about karnataka and bangalore at all. Never said i am a kannadiga proudly not heard speaking in kannada at that time. Surprised to see his love towards bangalore once entered to politics. Do you know why he follow congress..? that because his grandfather was a follower of Nehru it seems so he loves congress and their agenda. As absorbed, most of the corporates are against reservation but congress has mentioned in their manifesto that we will bring in reservation even in private sector if we comes to power. How come the people like Nilekani support this..? Its all about POLITICS. No love, concern towards society...!!
ReplyDeleteIn the initial days of Aadhaar, nobody in the government accepted it as an identity proof. We in Kochi were some of the earliest to get this card. But the passport office refused to accept it even in 2012.
ReplyDeleteThere remains no doubt about the fact that Aadhaar is a huge scam. THe election commission of India started an initiative for new Voter ID cards within 7 months of our getting Aadhaar card and I was wondering what was the use.
When people started murmuring, the new Voter ID card project was put on the back burner and Aadhaar suddenly became all important.
So there is definitely something serious underneath and also the talk of a large number of illegal Bangladeshis and even Pakistanis have acquired these cards is a scary thought !
tumba chennagide..... nimma lekhani heege haritavaagirali.
ReplyDeletebaravnigeyalli satvavirali, endu aashisuva....
Superb article, appreciates the way you have narrated the current situation along with the AADHAR blunder. Atleast now it should open everyones eye who does not support NAMO and especially still who supports Congress.
ReplyDelete''ಆಧಾರ್" ಹಿಂದಿನ ತೆರೆ-ಮರೆಯ ಕೆಲವು ವಿಷಯಗಳು ಮತ್ತು ಸರ್ವೋಚ್ಚ್ಹನ್ಯಾಯಾಲಯದ ತೀರ್ಪು 'ಆಧಾರ್"ನ್ನೇ ಅನಾಧಾರವೆನ್ನುವಂತಿದ್ದರೆ ಇನ್ನೊಂದೆಡೆ ಆ 'ಆಧಾರ್'ಅನ್ನು ಆಧರಿಸಿಕೊಂಡು ಆರಾಧಿಸುತ್ತಿರುವಾಗ, ''ಆಧಾರ್"ನ ಆಧಾರ ಮತ್ತು ದೇಶದ ಇಂದಿನ ಅಗತ್ಯತೆಯನ್ನು ವಿಶ್ಲೇಶಿಸುವ ಈ ಲೇಖನ ಚೆನ್ನಾಗಿದೆ. ಧನ್ಯವಾದಗಳು ಸಹನಾಜಿ.
ReplyDeleteಬಹಳ ಉಪಯುಕ್ತವಾದ ಮಾಹಿತಿ ನೀಡಿದಿರಿ, ಅಕ್ಕಾ... "ಆಧಾರ್ ಕಾರ್ಡ್ ಹೊಂದ ಮಾತ್ರಕ್ಕೆ ಯಾರಿಗೂ ಈ ದೇಶದ ಪೌರತ್ವ ದೊರಕಿತೆಂದು ತಿಳಿಯಬಾರದು" ಎಂದು, ಅನಧಿಕೃತ ಬಾಂಗ್ಲಾದೆಶಿಗರ ವಲಸೆಗೆ ಸಂಬಂಧಿಸಿದ ಹಾಗೆ ಫೇಸ್ಬುಕ್ಕಿನಲ್ಲೊಮ್ಮೆ ಬರೆದಿದ್ದರು... ಅರ್ಜಿ ಹಾಕುತ್ತಿರುವವರು ಭಾರತೀಯರೋ ಅಲ್ಲವೋ ಎಂಬುದನ್ನು ಪರಿಶೀಲಿಸದೆ ಅದ್ಯಾವ "ಆಧಾರದ" ಮೇಲೆ ಕಾರ್ಡ್ಗಳನ್ನು ವಿತರಿಸಲಾಯಿತೋ ಆ ದೇವರಿಗೆ ಗೊತ್ತು!!!
ReplyDeletekarnataka people are most immature low IQ people in this country. you don't need enemy from outside. you cheap guys are enough to pull one another legs.
ReplyDeleteTumba chennaagide
ReplyDeleteGood and very informative column.Nandan is a person of great excellence and calibre but his talent was completely misused by congress.
ReplyDeleteYou are blessed with good skills and boldness of squarely condemning what you dnt like..Keep the work going