Thursday 30 October 2014

ಗೋಹತ್ಯೆ ನಡೆಸುವುದಕ್ಕೆ ಧರ್ಮದ ಸೋಗೇಕೆ?



ಈ ಘಟನೆ ಬಹಳ ಹಿಂದೆ ನಡೆದದ್ದು. ಚೋಳ ವಂಶದ ರಾಜ ಮನು, ಧರ್ಮರಾಜನೆಂದೇ ಪ್ರಖ್ಯಾತನಾಗಿದ್ದ. ನ್ಯಾಯ ಬೇಡಿ ಬಂದವರನ್ನು ಎಂದಿಗೂ ನಿರಾಸೆಗೊಳಿಸುತ್ತಿರಲಿಲ್ಲ. ಅವನು ತನ್ನ ಆಸ್ಥಾನದಲ್ಲಿ ಒಂದು ದೊಡ್ಡ ಗಂಟೆಯನ್ನು ನೇತುಹಾಕಿದ್ದ. ನ್ಯಾಯ ಬೇಕಾದವರು ಆ ಗಂಟೆಯನ್ನು ಬಾರಿಸಿದರೆ ಸಾಕು, ಅವರ ಅಹವಾಲು ಕೇಳಿ ತಕ್ಕ ಸಮಾಧಾನವನ್ನು ಕೊಟ್ಟು ಕಳಿಸುತ್ತಿದ್ದ. ಒಮ್ಮೆ  ಅವನ ಆಸ್ಥಾನದ ಗಂಟೆ ಜೋರಾಗಿ ಹೊಡೆದುಕೊಂಡಿತಂತೆ. ಯಾರೆಂದು ಬಂದು ನೋಡಿದರೆ ಒಂದು ಗೋವು! ಇದೇಕೆ ಬಂದು ನಿಂತಿದೆ ಎಂದು ವಿಚಾರಿಸಲಾಗಿ, ಆ ಗೋವಿನ ಕರು ರಾಜಕುಮಾರನ ರಥಕ್ಕೆ ಸಿಕ್ಕಿ ಸತ್ತು ಹೋಗಿತ್ತಂತೆ. ನ್ಯಾಯ ಬೇಡಿ ಬಂದ ಗೋವಿನ ಸಲುವಾಗಿ ರಾಜ ಏನು ಮಾಡಿದನಂತೆ ಗೊತ್ತೇ? ಆ ಕರುವಿಗೆ ಆದಂತೆಯೇ ತನ್ನ ಮಗನನ್ನೂ ರಥದಡಿಯಲ್ಲಿ ಮಲಗಿಸಿ ಕೊಲ್ಲಿಸಿದನಂತೆ! ಎಂಥ ಪೆದ್ದನಲ್ಲವೇ ರಾಜ? ಯಃಕಶ್ಚಿತ್ ಒಂದು ಗೋವಿಗೂ ನ್ಯಾಯ ಕೊಡಿಸುವುದೇ? ಅದು ಆ ಕಾಲದ ಮಾತಾಯಿತು ಬಿಡಿ.

ಈಗ ಕಾಲ ಬದಲಾಗಿದೆ. ನ್ಯಾಯ ಕೊಡಿಸುವುದು ಹಾಗಿರಲಿ, ಗೋವನ್ನು ಉಳಿಸಿ ಎನ್ನುವವರನ್ನೇ ತರಿದು ಹಾಕಲಾಗುತ್ತಿದೆ. ಕಳೆದ ಅಕ್ಟೋಬರ್ ಒಂದರಂದು ಗಂಗೊಂಡನಹಳ್ಳಿಯಲ್ಲಿ ಮಹೇಂದ್ರ ಮನೋತ್‍ ಹಲ್ಲೆಗೀಡಾದ ಘಟನೆ ನಿಮಗೆ ತಿಳಿದಿರಬೇಕಲ್ಲವೇ? ಗೋಹತ್ಯೆಯನ್ನು ತಡೆಯಲು ಶ್ರಮಿಸುತ್ತಿರುವವರ ಹತ್ಯೆಗೆ ಮುಂದಾಗುತ್ತಿರುವ ಜನರದ್ದು ಎಂಥ ಸಂಸ್ಕಾರ? ಈ ಪರಿಯ ಅಜ್ಞಾನ, ತಿಕ್ಕಲುತನ ಆವರಿಸಿಕೊಂಡಿದ್ದು ಹೇಗೆ, ತಿಳಿಯೋಣ ಬನ್ನಿ. ಹಿಂದೂ ಧರ್ಮದಲ್ಲಿ ಗೋವಿಗೆ ಮೊದಲಿನಿಂದಲೂ ಪ್ರಾಮುಖ್ಯ, ಪೂಜನೀಯ ಸ್ಥಾನ ಇದ್ದೇ ಇತ್ತು. 16ನೇ ಶತಮಾನದಲ್ಲಿ ಶುರುವಾಯಿತಲ್ಲ ಮುಸ್ಲಿಮರ ದಾಳಿ, ಆಗ ಪರಿಸ್ಥಿತಿ ಬದಲಾಗತೊಡಗಿತು. ಬರೀ ಒಂಟೆ, ಮೇಕೆ, ಕುರಿಗಳಿದ್ದ ನಾಡಿನಿಂದ ಬಂದ ಮುಸ್ಲಿಮರು ಗೋವುಗಳನ್ನು ಮೊದಲಿಗೆ ಕಂಡಿದ್ದೇ ಭಾರತದಲ್ಲಿ! ಮೊಘಲರ ಆಳ್ವಿಕೆ ಶುರುವಾದ ಹೊಸದರಲ್ಲಿ, ಹಿಂದೂಗಳಿಗೆ ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಗೋಹತ್ಯೆಗೆ ಸಮ್ಮತಿಯಿರಲಿಲ್ಲ. ಆದರೆ ನಂತರ ಬಂದನಲ್ಲ ಔರಂಗಜೇಬ್, ಇದನ್ನೇ ಮುಖ್ಯ ಕಸುಬನ್ನಾಗಿಸಿಕೊಂಡುಬಿಟ್ಟ. ದೇಗುಲಗಳನ್ನೆಲ್ಲ ಮಸೀದಿಗಳನ್ನಾಗಿ ಪರಿವರ್ತಿಸುವುದು, ಅದು ಮಸೀದಿಯಾದುದಕ್ಕೆ ಸಾಕ್ಷಿಯಾಗಿ ಒಂದು ಗೋವನ್ನು ಕಡಿಯುವುದು! ಈ ಬರ್ಬರ ಕೃತ್ಯದ ಅಭ್ಯಾಸ ಯಾವ ಮಟ್ಟಕ್ಕೆ ಹೋಯಿತೆಂದರೆ ಮುಸ್ಲಿಮರು ತಮ್ಮ ಹಬ್ಬಗಳಿಗೂ ಗೋವುಗಳ ಬಲಿಯನ್ನೇ ನೀಡತೊಡಗಿದರು. ಜೊತೆಗೆ ಮತ್ತೂ ಒಂದು ತಂತ್ರಗಾರಿಕೆ ನಡೆದಿತ್ತು. ಬಲವಂತದಿಂದ ಮತಾಂತರಗೊಂಡ ಹಿಂದೂಗಳಿಗೆ ಗೋಮಾಂಸ ತಿನ್ನಿಸಿಬಿಡುವುದು. ಒಮ್ಮೆ ತಿಂದುಬಿಟ್ಟರೆ ಮುಗಿಯಿತು. ಧರ್ಮಭ್ರಷ್ಟರಾದೆವೆಂಬ ಅಪರಾಧೀ ಭಾವದಿಂದ ಕುಗ್ಗಿ ಹೋಗುತ್ತಿದ್ದ ಹಿಂದೂಗಳು ಮತ್ತೆ ತಮ್ಮ ಧರ್ಮಕ್ಕೆ ಮರಳುವುದು ಸಾಧ್ಯವೇ ಇರಲಿಲ್ಲ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸುವ ಕನಸು ಕಾಣುತ್ತಿದ್ದವರಿಗೆ ಇಷ್ಟೇ ತಾನೆ ಬೇಕಿದ್ದಿದ್ದು?

ಗೋಹತ್ಯೆಗೆ ಹೈದರಾಲಿ ತಕ್ಕಮಟ್ಟಿಗೆ ಕಡಿವಾಣ ಹಾಕಿದ್ದನಾದರೂ ಬ್ರಿಟಿಷರು ಬಂದ ನಂತರ ಇದು ಮತ್ತೆ ಗರಿಗೆದರಿತು. ಅಷ್ಟೇ ಅಲ್ಲ, ಅವರ ಅಚ್ಚುಮೆಚ್ಚಿನ ಆಹಾರವೂ ಆಯಿತು. ಆಂಗ್ಲ ಭಾಷೆಯಲ್ಲಿ ಬೀಫ್ ಎಂದು ಕರೆಯಲ್ಪಡುವ ಗೋಮಾಂಸವನ್ನು ಚಪ್ಪರಿಸಿ ತಿನ್ನಲು ಬ್ರಿಟಿಷರು ಮೊತ್ತ ಮೊದಲ ಕಸಾಯಿಖಾನೆಯನ್ನು ಕಲ್ಕತ್ತಾದಲ್ಲಿ ಕಟ್ಟಿಸಿದರು. ಅದರ ಹಿಂದೆಯೇ ನೂರಾರು ಕಸಾಯಿಖಾನೆಗಳು ಹುಟ್ಟಿಕೊಂಡವು. ಮುಂದೆ ಸ್ವಾತಂತ್ರ್ಯ ಸಿಕ್ಕ ಮೇಲೆ, ತಿಲಕ್, ಮಾಳವೀಯ ಮುಂತಾದವರು ಪ್ರತಿಭಟಿಸಿದರೂ ಉಪಯೋಗವಾಗಲಿಲ್ಲ. ಉಳಿದವರದ್ದು ಬಿಡಿ, ಮಹಾತ್ಮ ಗಾಂಧಿಯ ಹೋರಾಟಕ್ಕೂ ಕಾಂಗ್ರೆಸ್ ಕ್ಯಾರೇ ಎನ್ನಲಿಲ್ಲ. ಶಾಸ್ತ್ರಕ್ಕೆಂಬಂತೆ ಅನುಚ್ಛೇದ 48ರ ರಚನೆಯಾಯಿತಾದರೂ ಅದು ಗೋಹತ್ಯೆಯನ್ನು ನಿರ್ಬಂಧಿಸಲಿಲ್ಲ. ಜೊತೆಗೆ, ರಾಜ್ಯಗಳಿಗೆಲ್ಲ ಗೋಹತ್ಯೆಯ ಕುರಿತ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೂ ದಯಪಾಲಿಸಿತು. ಪರಿಣಾಮವೇನಾಗಿದೆ ಗೊತ್ತೇ?



ಇಂದು ಕೇರಳ ಹಾಗೂ ಪಶ್ಚಿಮಬಂಗಾಳ ಗೋಹತ್ಯೆಗೆ ಅಧಿಕೃತವಾಗಿ ಒಪ್ಪಿಗೆ ನೀಡಿವೆ. ಉಳಿದ ರಾಜ್ಯಗಳಲ್ಲಿ ಇದು ಅನಧಿಕೃತವಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ, ಯಡಿಯೂರಪ್ಪನವರ ಸರ್ಕಾರ ಇದ್ದಾಗ ಗೋ ಹತ್ಯೆಗೆ ನಿಷೇಧವಿತ್ತು. ಸಿದ್ಧರಾಮಯ್ಯನವರು ಕುರ್ಚಿ ಏರಿದ ತಕ್ಷಣ ಮಾಡಿದ ಮೊದಲ ಕೆಲಸವೇ ನಿಷೇಧವನ್ನು ಹಿಂಪಡೆದದ್ದು! ಅಲ್ಲವೇ ಮತ್ತೆ, ಕಾಂಗ್ರೆಸ್‍ನ ರಾಜಕೀಯ ಎಂದಮೇಲೆ ಅಲ್ಪಸಂಖ್ಯಾತರ ಓಲೈಕೆ ಇರದಿದ್ದರೆ ಹೇಗೆ? ಈಗ ದೇಶದೆಲ್ಲೆಡೆ ಕದ್ದು ಮುಚ್ಚಿ, ಅಪರಾತ್ರಿಯಲ್ಲಿ ಗೋವುಗಳನ್ನು ಸಾಗಿಸಿ ಕಟುಕರ ಕೈಗೆ ಒಪ್ಪಿಸಲಾಗುತ್ತಿದೆ. ಕಳ್ಳಸಾಗಣೆ ದೇಶದೊಳಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಗೋವುಗಳ ಹಿಂಡು ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶವನ್ನೂ ತಲುಪುತ್ತಿವೆ. ಯಾವ ಪ್ರಮಾಣದಲ್ಲೆಂದರೆ, ಆ ದೇಶ ತಾನು ಉಂಡು ಉಳಿದದ್ದನ್ನು ರಫ್ತು ಮಾಡುವಷ್ಟು! ದಿಲ್ಲಿಯೊಂದರಲ್ಲೇ 11ಸಾವಿರಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳಿವೆ ಎಂದರೆ ಇನ್ನು ಉಳಿದ ನಗರಗಳಲ್ಲಿ ಎಷ್ಟಿರಬಹುದು? ನಿಮಗೆ ಗೊತ್ತಿದೆಯೋ ಇಲ್ಲವೋ, ಈ ಕಸಾಯಿಖಾನೆಗಳನ್ನು ಹೆಚ್ಚಾಗಿ ತಲುಪುತ್ತಿರುವವು ಹಾಲು ಕರೆಯುವ ಮತ್ತು ಗಬ್ಬ(ಗರ್ಭಿಣಿ)ವಾದ ಹಸುಗಳೇ. ಅವುಗಳಿಗೆ ಯಾವ ಸ್ಥಿತಿ ಬರುತ್ತದೆ ನೋಡಿ. ಒಂದು ಲಾರಿಯಲ್ಲಿ ನಾಲ್ಕು ಹಸುಗಳನ್ನು ಮಾತ್ರ ಕರೆದೊಯ್ಯಬೇಕೆಂಬುದು ನಿಯಮ. ಆದರೆ ನಲವತ್ತಕ್ಕೂ ಹೆಚ್ಚು ಹಸು, ಕರುಗಳನ್ನು ತುಂಬುತ್ತಾರೆ. ನಿಲ್ಲಲಾಗದೆ ಕೂರಲಾಗದೆ ಚಡಪಡಿಸುವ ಅವುಗಳು ಒಂದನ್ನೊಂದು ತಿವಿದುಕೊಂಡು ಅಲ್ಲೇ ಗಾಯಗೊಳ್ಳುತ್ತವೆ. ಹಲವು ಉಸಿರುಗಟ್ಟಿ ಸತ್ತೂ ಹೋಗುತ್ತವೆ. ಅಪ್ಪಿ ತಪ್ಪಿ ಗಾಯವಾಗದೆ ಉಳಿದವು ಎಂದಿಟ್ಟುಕೊಳ್ಳಿ, ಇಳಿಸುವಾಗ ಲಾರಿಯಿಂದ ಕೆಳಗೆ ರಭಸವಾಗಿ ತಳ್ಳುತ್ತಾರಲ್ಲ, ಆಗ ಕಾಲಿನ ಮೂಳೆಗಳು ಮುರಿದುಹೋಗುತ್ತವೆ. ಅಮೇಲೆ ಅವುಗಳಿಗೆ ಸಿಗುವ ರಾಜಾತಿಥ್ಯವನ್ನು ಹೇಗೆ ವರ್ಣಿಸುವುದು? ಹೇಳಿದ ಹಾಗೆ ಕೇಳುವುದಿಲ್ಲವೆಂದು ಅವುಗಳ ಕಾಲು ಕಟ್ಟಿ, ಬಾಲ ಮುರಿದು, ಕಣ್ಣಿಗೆ ಹಸಿಮೆಣಸನ್ನೋ ತಂಬಾಕನ್ನೋ ತುರುಕುತ್ತಾರೆ. ಅವುಗಳೇನೋ ಅಮ್ಮಾ ಎಂದು ಚೀರುತ್ತವೆ. ಕಟುಕರಿಗೆ ಕೇಳಬೇಕಲ್ಲ? ಹಸುಗಳ ಹಣೆಗೆ ಸುತ್ತಿಗೆಯಿಂದ ಹೊಡೆದು ಅಥವಾ ವಿದ್ಯುತ್ ಶಾಕ್ ಕೊಟ್ಟು ಮೂರ್ಛೆ ಹೋಗುವಂತೆ ಮಾಡುತ್ತಾರೆ. ನಂತರ ಅವುಗಳ ಕತ್ತನ್ನು ಚರಚರನೆ ಕೊಯ್ದು, ರಕ್ತವನ್ನು ಬಸಿಯುತ್ತಾರೆ. ಎಷ್ಟೋ ವೇಳೆ ಅವುಗಳ ಚರ್ಮ ಸುಲಿಯುವಾಗ ಜೀವವೇ ಹೋಗಿರುವುದಿಲ್ಲ. ಇದಕ್ಕಿಂತ ಯಮಯಾತನೆ ಬೇಕೇ? ಗೋವುಗಳ ಪ್ರಾಣ ತೆಗೆಯುವ ಮತ್ತೂ ಒಂದು ವಿಧಕ್ಕೆ ಮುಸ್ಲಿಮರಲ್ಲಿ ಬಹಳ ಬೇಡಿಕೆಯಿದೆ. ಅದೇ ಹಲಾಲ್! ಹರಿತವಾದ ಆಯುಧದಿಂದ ಗೋವಿನ ಕತ್ತನ್ನು (ಒಳಗಿರುವ ಧಮನಿಯನ್ನು) ಕೆಳಗಿನಿಂದ ಮೇಲೆ ಸೀಳುತ್ತಾರೆ. ಆಗ ಅಶುದ್ಧ ರಕ್ತ ಬಸಿದು ಹೋಗುತ್ತದೆ. ರಕ್ತ ಪೂರ್ತಿ ಹೋಗುವವರೆಗೂ ವಿಲವಿಲನೆ ಒದ್ದಾಡುವ ಗೋವು ನಂತರ ಸಾಯುತ್ತದೆ! ಹೀಗೆ ಶುದ್ಧ ಮಾಡಲ್ಪಟ್ಟ ಗೋವಿನ ಮಾಂಸ ಪವಿತ್ರವಂತೆ! ಯಾವ ಪ್ರಾಣಿಯ ಹಾಲು, ಮೊಸರು, ಬೆಣ್ಣೆಗಳನ್ನುಂಡು ಬೆಳೆಯುತ್ತಾರೋ ಅದರ ರಕ್ತವನ್ನೇ ಬಸಿಯುವುದು ಮಾನವೀಯತೆಯ ಅಳತೆಗೋಲಲ್ಲಿ ಪವಿತ್ರವೇ?

ಗೋಮಾಂಸಕ್ಕಾಗಿ ಮುಗಿಬೀಳುತ್ತಿರುವ ಭಾರತೀಯ ಹಾಗೂ ವಿದೇಶೀ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಣಾಮ, ಇಂದು ಭಾರತ ಗೋಮಾಂಸದ ಭಕ್ಷಣೆ ಹಾಗೂ ರಫ್ತಿನಲ್ಲಿ ಅಗ್ರಸ್ಥಾನಕ್ಕೇರುತ್ತಿದೆ. ಆಯಾ ದೇಶದ ಬೇಡಿಕೆಗನುಗುಣವಾಗಿ ಗೋಹತ್ಯೆ ನಡೆಯುತ್ತಿದೆ. ಉದಾಹರಣೆಗೆ, ಅರಬ್ ದೇಶಗಳ ಮುಸ್ಲಿಮರಿಗೆ ಹಾಲು ಕರೆಯುವ ಹಸುವಿನ ಮಾಂಸ ಮಾತ್ರವೇ ಬೇಕು. ಆದ್ದರಿಂದ ಹಸುವನ್ನು ಕಡಿಯುವ ಮೊದಲು ಅದರ ಹಾಲು ಕರೆದು ಆ ವೀಡಿಯೋವನ್ನು ಚಿತ್ರೀಕರಿಸಲಾಗುತ್ತದೆ. ನಂತರ ಅದನ್ನು ಮಾಂಸದೊಡನೆ ಇಟ್ಟು ಕಳಿಸಲಾಗುತ್ತದೆ. ತಿನ್ನುವವನಿಗೆ ಖಾತರಿಯಾಗಬೇಕಲ್ಲ ಅದರ ಕೆಚ್ಚಲಲ್ಲಿ ಹಾಲಿತ್ತು ಎಂಬುದು! ಅಷ್ಟೇ ಅಲ್ಲ, ಕೆಲವೊಮ್ಮೆ ಕೆಚ್ಚಲನ್ನೂ ಹಾಗೇ ಇಟ್ಟು ಕಳಿಸಲಾಗುತ್ತದೆ. ಎಂಥ ಲಜ್ಜೆಗೇಡಿತನ ಇದು?

ಏಕೆ ಹೆಚ್ಚುತ್ತಿದೆ ಈ ಪೈಶಾಚಿಕತೆ? ಧರ್ಮವಂತೂ ಖಂಡಿತ ಕಾರಣವಲ್ಲ. ಗೋಮಾಂಸವನ್ನು ತಿನ್ನಲೇಬೇಕೆಂದು ಯಾವ ಧರ್ಮದಲ್ಲೂ ಹೇಳಿಲ್ಲ. ಹಾಗಿದ್ದ ಮೇಲೆ ಈ ನೆಪವೇಕೆ? ಧರ್ಮದ ಸೋಗು ಹಾಕುವ ಮಂದಿ ತಮ್ಮ ಧರ್ಮದಲ್ಲಿ ಹೇಳಿರುವುದೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆಯೇ? ಇಲ್ಲಿ ಮುಸ್ಲಿಮರು ತಿಳಿಯಲೇಬೇಕಾದ ಕೆಲ ವಿಷಯಗಳಿವೆ. ಹಿಂದೂಗಳು ಗೋವಿನ ಉಳಿವಿಗಾಗಿ ಹಂಬಲಿಸುತ್ತಿರುವುದು ಮೂಢನಂಬಿಕೆಗಳಿಂದಾಗಿ ಅಲ್ಲ, ವೈಜ್ಞಾನಿಕ ಕಾರಣಗಳಿಂದಾಗಿ. ಉದಾಹರಣೆಗೆ, ನಮಗೆ 72ಸಾವಿರ ನಾಡಿಗಳಿವೆಯಲ್ಲ, ಹಾಗೆಯೇ ಗೋವುಗಳಿಗೂ ನಾಡಿಗಳಿವೆ. ಅದರಲ್ಲೂ ಬೆನ್ನಿನ ಮೇಲೆ ಡುಬ್ಬವಿರುತ್ತದೆ ನೋಡಿ, ಬಹಳ ಚಮತ್ಕಾರಿ ಅದರ ಹಿಂದಿರುವ ನಾಡಿ! ಗೋ ಎಂಬ ಪದದ ಮೂಲಾರ್ಥವೇ ಸೂರ್ಯ ರಶ್ಮಿ ಎಂಬುದು. ಸೂರ್ಯನ ಶಕ್ತಿಯನ್ನು ನಾಡಿಗಳ ಮುಖೇನ ತಮ್ಮಲ್ಲಿ ಪ್ರವಹಿಸಿಕೊಳ್ಳುತ್ತವೆ ಗೋವುಗಳು. ಆ ಶಕ್ತಿ ಅವುಗಳ ದೇಹದ ವಿಶಿಷ್ಟ ರಚನೆಯೊಡನೆ ಬೆರೆಯುವುದರಿಂದಲೇ ಔಷಧೀಯ ಗುಣಗಳು ಹೊಮ್ಮುವುದು. ಆದ್ದರಿಂದಲೇ ಮಲ, ಮೂತ್ರಗಳೆಲ್ಲವೂ ಕಲ್ಮಶರಹಿತ. ಅಷ್ಟೇ ಏಕೆ, ಅವುಗಳ ಬೆವರುಗ್ರಂಥಿಗಳಿಂದ ವಸರುವ ದ್ರವ ವಾತಾವರಣದ ವಿಷಕಾರಿ ಅಂಶವನ್ನು ಸಾಯಿಸುತ್ತದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಗೋ ಉತ್ಪತ್ತಿಯಿಲ್ಲದೆ ಯಾವ ಯಜ್ಞ-ಯಾಗಾದಿಗಳೂ, ದಾನ-ಧರ್ಮಗಳೂ ಪೂರೈಸುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾದ ಅಂಶ, ಈ ಎಲ್ಲ ವೈಶಿಷ್ಟ್ಯಗಳೂ ಭಾರತೀಯ ತಳಿಗಳಲ್ಲಿ ಮಾತ್ರ ಲಭ್ಯ ಎಂಬುದು!

ಗೋವಿನ ಉತ್ಪನ್ನಗಳು ಬಹೋಪಯೋಗಿ ಎಂಬುದು ನಮಗೆ ಗೊತ್ತೇ ಇದೆ. ಗೊತ್ತಿರದ ವಿಷಯಗಳೂ ಬಹಳಷ್ಟಿವೆ. ಗೋಮಯ, ವಿಕಿರಣ ಹಾಗೂ ಶಾಖವನ್ನು ತಡೆಗಟ್ಟಬಲ್ಲುದಂತೆ! ಗೋಮೂತ್ರ, ಗೋಮಯ, ಹಾಲು, ಮೊಸರು ಹಾಗೂ ತುಪ್ಪಗಳ ಸಂಗಮವಾದ ಪಂಚಗವ್ಯಕ್ಕೆ ಔಷಧೀಯ ಗುಣಗಳಿರುವುದು ಈಗಾಗಲೇ ರುಜುವಾತಾಗಿದೆ. ಗೋವಿನ ಬೆವರಿನ ವಾಸನೆ ನಮ್ಮ ಮಾನಸಿಕ ಸ್ಥಿಮಿತವನ್ನು ಕಾಪಾಡುತ್ತದೆ ಎನ್ನುತ್ತಾರೆ ಅಮೆರಿಕದ ಸಂಶೋಧಕರು! ನಮ್ಮ ಗೋವುಗಳ ಮಹಿಮೆ 1960ರಷ್ಟು ಹಿಂದೆಯೇ ಬ್ರೆಜಿಲ್‍ಗೆ ತಿಳಿದಿತ್ತು. ಆಗಲೇ ಅದು ಗೀರ, ಕಾಂಕರೇಜ ಹಾಗೂ ಒಂಗೋಳೆ ತಳಿಗಳನ್ನು ಆಮದು ಮಾಡಿಕೊಂಡಿತ್ತು. ಇಂದಿಗೂ ಅಗತ್ಯ ಬಿದ್ದಾಗಲೆಲ್ಲ ಭ್ರೂಣಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ಭಾರತೀಯ ತಳಿಗಳೆಲ್ಲಾ ಅಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಅಲ್ಲಿಂದಲೇ ವಿದೇಶಗಳಿಗೆ ರಫ್ತಾಗುತ್ತಿವೆ! ಹೈನುಗಾರಿಕೆ ಸಮೃದ್ಧವಾಗಿ ನಡೆಯುತ್ತಿದೆ. ನಾವೇನು ಮಾಡುತ್ತಿದ್ದೇವೆ? ಹಿತ್ತಲ ಗಿಡ ಮದ್ದಲ್ಲ ನೋಡಿ, ಅಳಿದುಳಿದ ತಳಿಗಳನ್ನೆಲ್ಲಾ ಕಡಿದು ಹಾಕುತ್ತಿದ್ದೇವೆ. ಸಂಕಟವಾಗುವುದಿಲ್ಲವೇ? ಇಂದು ಕೃಷ್ಣನ ಮಥುರೆಯಲ್ಲಿ ಕರುಗಳೇ ಉಳಿದಿಲ್ಲ. ಬಿಹಾರ ಉತ್ತರಪ್ರದೇಶಗಳಲ್ಲಿ ಹಳ್ಳಿಗರು ಹಸುಗಳನ್ನು ಸಾಕುತ್ತಲೇ ಇಲ್ಲ. ಗೋಶಾಲೆಗಳೆಲ್ಲ ಬಿಕೋ ಎನ್ನುತ್ತಿವೆ. ಹೀಗೇ ಆದರೆ ಮುಂದೆ ಕೊಬ್ಬಿದ ಮೈಯ ವಿದೇಶೀ ಜರ್ಸಿ ಹಸುಗಳೇ ಗತಿ!

ಗೋವು ಅಮೂಲ್ಯವಾದ, ರಾಷ್ಟ್ರೀಯ ಸಂಪತ್ತು ಎಂಬುದು ನಮಗೆ ಅರಿವಾಗುವುದು ಯಾವಾಗ? ಅದರಲ್ಲಿ ಅಡಕವಾಗಿರುವ, ನಮ್ಮ ಪ್ರಗತಿಗೆ ಪೂರಕವಾದ ವೈಜ್ಞಾನಿಕ ಅಂಶಗಳ ಸಂಶೋಧನೆಗೆ ಒತ್ತು ಸಿಗುವಂತೆ ಮಾಡುವುದು ಹೇಗೆ?  ಮುಂದೊಂದು ದಿನ ಮೃಗಾಲಯದಲ್ಲಿ ಗೋವುಗಳನ್ನು ನೋಡಬೇಕಾಗಿ ಬರುವುದು ಎಲ್ಲರಿಗೂ ಸಮ್ಮತವೇ? ಅಲ್ಪ ಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂದು ಗೋಹತ್ಯೆ ಕೈಬಿಡಲು ಎಷ್ಟು ದಿನ ಹಿಂದೇಟು ಹಾಕುವುದು? ಗೋವನ್ನು ಉಳಿಸಿಕೊಂಡರೆ ಹಿಂದೂ ಧರ್ಮೀಯರೊಡನೆ ಸೌಹಾರ್ದ ಹೆಚ್ಚುವುದೇ ಅಲ್ಲದೆ ಅದರ ಪ್ರಯೋಜನಗಳನ್ನು ಅವರೂ ಪಡೆಯಲಿದ್ದಾರೆ ಎಂದು ಮನವರಿಕೆ ಮಾಡಿಕೊಡುವುದು ಇಂದಿನ ಅಗತ್ಯವಲ್ಲವೇ? ಒಂದು ವಿಷಯ ನೆನಪಿಡಿ. ಹೀಗೆ ಹಟಕೆ ಬಿದ್ದು ತಿಂದು ಮುಗಿಸಿದರೆ ಗೋವುಗಳಿಗೆ ಯಾವ ಪರ್ಯಾಯವೂ ಇಲ್ಲ. ಓಲೈಕೆ ಮಾಡುವ ರಾಜಕಾರಣಿಗಳು ಬೆಳಗಾಗೆದ್ದರೆ ಹಾಲು ಕೊಡುವುದಿಲ್ಲ. ಕಲಬೆರಕೆ ಹಾಲನ್ನು ಕುಡಿದು ರೋಗ ಬರಿಸಿಕೊಳ್ಳುವ ದರಿದ್ರ ನಮಗೇನೂ ಬಂದಿಲ್ಲ.

ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಪುಣ್ಯಕೋಟಿಯ ಕಥೆಯನ್ನು ಕೇಳಿದೊಡನೆ ಕಣ್ಣಲ್ಲಿ ನೀರು ತಂದುಕೊಳ್ಳುವ ಹಿಂದೂಗಳಿಗೆ, ಗೋಹತ್ಯೆಯ ಮೂಲಕ ಈ ಪರಿಯ ಹಿಂಸೆಯನ್ನು ನೀಡಲೇಬೇಕೇ? ಧಾರ್ಮಿಕ ಕಾರಣ ಒತ್ತಟ್ಟಿಗಿರಲಿ, ಇದು ವೈಜ್ಞಾನಿಕವಾಗಿ ನಮಗೆ ಸಿಕ್ಕಿರುವ ಉತ್ಕೃಷ್ಟವಾದ ಉಡುಗೊರೆ ಎನ್ನುವ ಕಾರಣಕ್ಕಾದರೂ ಹತ್ಯೆ ನಿಂತೀತೇ? ಅಥವಾ ಅಸಹಾಯಕ ಗೋವುಗಳ ಜಾಗದಲ್ಲಿ, ಹಾಲೂಡಿಸಿದ ತಾಯಂದಿರನ್ನು ಕಲ್ಪಿಸಿಕೊಂಡರೆ ಗೋಮಾಂಸದ ಚಪಲ ಕೊನೆಯಾದೀತೇ?

Monday 20 October 2014

ಹದಗೆಟ್ಟಿದೆ ಬಂಗಾಳ, ದೀದಿಗೆ ದಾದಾಗಿರಿಯೇ ಬಂಡವಾಳ!

ಇದೇ ತಿಂಗಳ ಅಕ್ಟೋಬರ್ 2ನೇ ತಾರೀಖು. ಪಶ್ಚಿಮ ಬಂಗಾಳ ಎಂದಿನಂತೆ ದುರ್ಗಾ ಪೂಜೆಯ ಸಡಗರದಲ್ಲಿ ಮುಳುಗಿತ್ತು. ಅಂದು ಗಾಂಧಿ ಜಯಂತಿ ಬೇರೆ. ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ, ಕಲ್ಕತ್ತಾದಿಂದ 100ಕಿ.ಮೀ ದೂರ ಇರುವ ಬರ್ದ್ವಾನ್ ನಗರದ ಮನೆಯೊಂದರಲ್ಲಿ ದೊಡ್ಡ ಸ್ಫೋಟವಾಯಿತು. ಕುಕ್ಕರ್ ಅಥವಾ ಗ್ಯಾಸ್ ಸಿಲಿಂಡರ್ ಸಿಡಿದಿರಬೇಕು ಎಂದುಕೊಂಡರು ಅಕ್ಕಪಕ್ಕದ ಜನ. ಆದರೆ ಸ್ಥಳೀಯ ಪೋಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನೋಡಿದಾಗ ವಾಸ್ತವ ಬೇರೆಯೇ ಆಗಿತ್ತು. ರಿವಾಲ್ವರ್ ಹಿಡಿದ ಹೆಂಗಸರಿಬ್ಬರು ಮನೆಯೊಳಗೆ ಯಾರನ್ನೂ ಸೇರಿಸಲೇ ಇಲ್ಲ. ಬಲವಂತವಾಗಿ ನುಗ್ಗಲು ಪ್ರಯತ್ನಿಸಿದರೆ ಮನೆಯನ್ನೇ ಸ್ಫೋಟಿಸಿಬಿಡುತ್ತೇವೆ ಎಂದು ಹೆದರಿಸಿದರು. ಹಾಗೆ ಪೋಲೀಸರು ಒಳಬರದಂತೆ ಒಂದು ಘಂಟೆಯ ಕಾಲದವರೆಗೂ ತಡೆದು ಆ ಹೆಂಗಸರು ಮಾಡಿದ್ದೇನು ಗೊತ್ತೇ? ಮನೆಯಲ್ಲಿದ್ದ ದಾಖಲೆಗಳನ್ನು ಸಾಧ್ಯವಾದಷ್ಟೂ ಸುಟ್ಟು ಹಾಕಿದ್ದು. ಕೊನೆಗೊಮ್ಮೆ ಪೋಲೀಸರು ಒಳನುಗ್ಗಿದಾಗ ಅವರಿಗೆ ಕಂಡಿದ್ದು ಸ್ಫೋಟದಿಂದ ಹೆಣವಾಗಿ ಬಿದ್ದಿದ್ದ ಶಕೀಲ್ ಅಹ್ಮದ್, ಸಾವಿನ ದವಡೆಯಲ್ಲಿದ್ದ ಶೋಭನ್ ಮಂಡಲ್ ಹಾಗೂ ಗಾಯಗೊಂಡಿದ್ದ ಅಬ್ದುಲ್ ಹಕೀಮ್ ಎಂಬ ಉಗ್ರರು. ಜೊತೆಗೆ ಅಳಿದುಳಿದ ಸಾಕ್ಷ್ಯಗಳು. ಅದರಲ್ಲಿ ಮುಖ್ಯವಾದದ್ದು ಸುಮಾರು 55 ಬಾಂಬ್‍ಗಳು, 40ಕೆಜಿಯಷ್ಟು ಸ್ಫೋಟಕ, ಹಲವು ಸಿಮ್ ಕಾರ್ಡ್‍ಗಳು, ನಕಲಿ ಗುರುತಿನ ಪತ್ರಗಳು ಹಾಗೂ ಅಲ್-ಕೈದಾಗೆ ಸಂಬಂಧಿಸಿದ ಭಿತ್ತಿ ಪತ್ರಗಳು, ವೀಡಿಯೋಗಳು! ಪೋಲೀಸರನ್ನು ತಡೆದ ಆ ವೀರ ವನಿತೆಯರ ಹೆಸರು ರೂಮಿ ಮತ್ತು ಅಲಿಮಾ ಹಾಗೂ ಆ ಮನೆಯಲ್ಲಿ ನಡೆಯುತ್ತಿದ್ದ ಘನಕಾರ್ಯ ಬಾಂಬ್‍ಗಳ ತಯಾರಿಕೆ! ದೀಪಾವಳಿಯ ಪ್ರಯುಕ್ತ ನಮಗೆ ರಕ್ತದೋಕುಳಿಯ ಉಡುಗೊರೆ ನೀಡಲು ಸಜ್ಜಾಗುತ್ತಿತ್ತು ಆ ತಂಡ. ಅದರೆ ಅವರ ಅದೃಷ್ಟ ಕೆಟ್ಟು ಒಂದು ಬಾಂಬ್ ಅಲ್ಲೇ ಸ್ಫೋಟಿಸಿಬಿಟ್ಟಿತ್ತು.


ಇದು ಘಟನೆಯ ಒಂದು ಮುಖ. ಮತ್ತೊಂದು ಮುಖವನ್ನು ನೋಡೋಣ ಬನ್ನಿ. ಬಾಂಬ್ ತಯಾರಾಗುತ್ತಿತ್ತಲ್ಲ, ಆ ಮನೆಯನ್ನು, 18 ಸಾವಿರ ರೂಪಾಯಿಗಳಿಗೆ ಉಗ್ರರಿಗೆ ಬಾಡಿಗೆಗೆ ನೀಡಿದ್ದಾತ ನೂರುಲ್ ಹಸನ್ ಚೌಧುರಿ. ಅವನು ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ. ಅಷ್ಟೇ ಅಲ್ಲ, ಆ ಮನೆ ಟಿಎಂಸಿ ಪಕ್ಷದ ಕಛೇರಿಯಾಗಿಯೂ ಬಳಕೆಯಾಗುತ್ತಿತ್ತು ಎಂಬ ಸತ್ಯ ಈಗ ಬಯಲಾಗಿದೆ. ಘಟನೆ ನಡೆದ ಮೇಲೆ ಅಲ್ಲಿದ್ದ ಬಾಂಬ್‍ಗಳನ್ನು ವಶಪಡಿಸಿಕೊಂಡ ಪೋಲೀಸರು ತುರಾತುರಿಯಲ್ಲಿ ಅವುಗಳನ್ನು ನಾಶಪಡಿಸಿಬಿಟ್ಟರು. ಅವರು ಹಾಗೆ ಮಾಡಲು ಕಾರಣವೇ ಇರಲಿಲ್ಲ. ಏಕೆಂದರೆ ದೇಶದ ಭದ್ರತೆಯ ವಿಚಾರವಾದ ಇದು ರಾಷ್ಟ್ರೀಯ ತನಿಖಾ ದಳದ ಗಮನಕ್ಕೆ ಬರಲೇ ಬೇಕಿತ್ತು. ಆದರೆ ಕೇಂದ್ರಕ್ಕೆ ತಿಳಿಸದೇ ಸಾಕ್ಷ್ಯಗಳನ್ನು ಹಾಳುಮಾಡಲು ಅಣತಿ ಇತ್ತವರು ಬೇರಾರೂ ಅಲ್ಲ, ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ದೀದಿ! ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆಬರುತ್ತಿರುವ ಸಾವಿರಾರು ಮುಸ್ಲಿಮರನ್ನು ಓಲೈಸುತ್ತಿರುವ ದೀದಿಗೆ ಈ ಘಟನೆಯನ್ನು ಮುಚ್ಚಿಡುವ ತವಕ. ಏಕೆಂದರೆ ಇದರಲ್ಲಿ ಮೃತಪಟ್ಟ ಶಕೀಲ್ ಹೀಗೇ ವಲಸೆ ಬಂದವನು. ಬಾಂಗ್ಲಾದೇಶದಲ್ಲಿರುವ ಉಗ್ರವಾದಿ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್‍ನ ಸದಸ್ಯ! ಇಂಥ ನೂರಾರು ವಲಸಿಗರು ಬಂಗಾಳವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರದ ಅಮಲೇರಿಸಿಕೊಂಡಿರುವ ದೀದಿಯ ಕಣ್ಣಿಗೆ ಅಲ್ಪಸಂಖ್ಯಾತರ ಮತಗಳನ್ನು ಬಿಟ್ಟು ಬೇರೇನೂ ಕಾಣುತ್ತಿಲ್ಲ. ಅವರ ಹಟ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಈ ಸ್ಫೋಟದ ತನಿಖೆಯನ್ನು ಕೇಂದ್ರಕ್ಕೆ ವಹಿಸಿಕೊಡಲು ಅವರು ಸುತರಾಂ ಸಿದ್ಧರಿಲ್ಲ.

ನಿಮಗೆ ಗೊತ್ತಿರಲಿ, ದಿನವೊಂದಕ್ಕೆ ಸಾವಿರಾರು ಬಾಂಗ್ಲಾದೇಶೀ ಮುಸ್ಲಿಮರು ವಲಸೆ ಬರುತ್ತಿದ್ದಾರೆ. ಯಾವ ಅಧಿಕೃತ ದಾಖಲೆಗಳೂ ಇಲ್ಲದ ಅವರಿಗೆ ನಕಲಿ ದಾಖಲೆಗಳನ್ನು ಎಗ್ಗಿಲ್ಲದೇ ಸರಬರಾಜು ಮಾಡಲಾಗುತ್ತಿದೆ. ಅವರ ಹಿನ್ನೆಲೆಯ ಕುರಿತ ಯಾವ ವಿಚಾರಣೆ ಅಥವಾ ಪರಿಶೀಲನೆಯೂ ನಡೆಯುತ್ತಿಲ್ಲ. ಪರಿಣಾಮ, ಬಂಗಾಳದಲ್ಲಿ ಮುಸ್ಲಿಮರ ಜನಸಂಖ್ಯೆ ಮಿತಿ ಮೀರುತ್ತಿದೆ. ಮತ್ತೊಂದೆಡೆ ದೇಶದ್ರೋಹಿ ಚಟುವಟಿಕೆಗಳೂ ಹೆಚ್ಚುತ್ತಿವೆ. ನುಸುಳಿ ಬರುತ್ತಿರುವ ಉಗ್ರರು ಬುರ್ಖಾ ತಯಾರಿಸುವುದಾಗಿ ಹೇಳಿ ಮನೆಗಳನ್ನು ಬಾಡಿಗೆಗೆ ಪಡೆದು ಬಾಂಬ್ ತಯಾರಿಗೆ ತೊಡಗುತ್ತಾರೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಬಂಗಾಳವನ್ನು ಪ್ರತ್ಯೇಕಿಸುವ ಬೇಡಿಕೆ ಇಡದೆ ಇರುತ್ತಾರೆಯೇ? ಇದನ್ನೆಲ್ಲ ದೀದಿ ಏಕೆ ಮಟ್ಟ ಹಾಕುತ್ತಿಲ್ಲ? ಇಸ್ಲಾಂನ ಇತಿಹಾಸದ ವಿಷಯದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದದ್ದು ಹೀಗೆ ಓಲೈಕೆ ಮಾಡಲೆಂದೇ? ಹೋಗಲಿ, ಪರಿಸ್ಥಿತಿಯ ಸೂಕ್ಷ್ಮತೆ ಅವರಿಗೆ ಅರ್ಥವಾಗಿಲ್ಲ ಎಂದುಕೊಳ್ಳೋಣವೆಂದರೆ ಅದೂ ಸಾಧ್ಯವಿಲ್ಲ. ಏಕೆಂದರೆ 2006ರಲ್ಲಿ ಸಾಕ್ಷಾತ್ ಇದೇ ದೀದಿ ಸಂಸತ್ತಿನಲ್ಲಿ ಕೆಂಡಾಮಂಡಲವಾಗಿ ತಮ್ಮ ರಾಜೀನಾಮೆ ಪತ್ರವನ್ನು ಡೆಪ್ಯೂಟಿ ಸ್ಪೀಕರ್‍ರ ಮುಖದ ಮೇಲೆಸೆದಿದ್ದರು. ಆಗ ಬಾಂಗ್ಲಾದೇಶದ ಅಕ್ರಮ ವಲಸಿಗರು ಬಂಗಾಳಕ್ಕೆ ನುಸುಳುತ್ತಿರುವುದನ್ನು ಪ್ರತಿಭಟಿಸಿ ಸದನವನ್ನು ಮುಂದೂಡಲು ಅನುಮತಿ ಕೇಳಿದ್ದರು. ಅನುಮತಿ ನಿರಾಕರಿಸಿದ ಸ್ಪೀಕರ್ ಸೋಮನಾಥ ಚಾಟರ್ಜಿ ಅವರ ಮೇಲೆ ಸಿಟ್ಟಾಗಿ ಮೈಮೇಲೆ ದೇವರು ಬಂದಂತೆ ವರ್ತಿಸಿದ್ದರು! ಅಂದು ಅಕ್ರಮ ವಲಸೆಯನ್ನು ವಿರೋಧಿಸಿದ್ದ ದೀದಿ ಇಂದು ಅದರ ಪರವಾಗಿ ಯುದ್ಧಕ್ಕೆ ನಿಲ್ಲುತ್ತಾರೆ. ‘ಒಬ್ಬ ವಲಸಿಗನನ್ನು ಯಾರಾದರೂ ಮುಟ್ಟಿ ನೋಡಿ, ನಾನು ದಿಲ್ಲಿಗೆ ಮುತ್ತಿಗೆ ಹಾಕುತ್ತೇನೆ’ ಎಂದು ಘರ್ಜಿಸುತ್ತಾರೆ. ಹಾಗೆ ಮಾಡಬೇಕಾದ್ದೇ. ಎಷ್ಟೇ ಆದರೂ ವಿಧಾನಸಭೆಯ, ಲೋಕಸಭೆಯ ಎಲ್ಲ ಚುನಾವಣೆಗಳನ್ನೂ ಗೆಲ್ಲಿಸುತ್ತಿರುವವರು ಈ ಮುಸ್ಲಿಂ 'ಮತ'ಬಾಂಧವರೇ ಅಲ್ಲವೇ?

ಓಲೈಕೆಗೂ ಮಿತಿ ಇರಬೇಕು. ರಾಜ್ಯದಲ್ಲಿ 30ಸಾವಿರಕ್ಕೂ ಹೆಚ್ಚಿನ ಇಮಾಮರಿಗೆ ಭತ್ಯೆ ಕೊಟ್ಟಿದ್ದೇನು, ಹೆಣ್ಣುಮಕ್ಕಳಿಗೆ ಸೈಕಲ್ ಕೊಡಿಸಿದ್ದೇನು. ಕೊಡಿಸಬಾರದು ಎಂದಲ್ಲ, ಆದರೆ ಯಾವುದೇ ಕೊಡುಗೆ ಅಪಾತ್ರ ದಾನವಾಗಬಾರದು. ಅರ್ಹರೋ ಅಲ್ಲವೋ, ಉಗ್ರರೋ ಅಲ್ಲವೋ ಎಂಬುದನ್ನೂ ನೋಡದೆ ಹೀಗೆ ಕೊಟ್ಟು ಕೆಡಿಸುವುದು ಎಷ್ಟು ಸಮಂಜಸ? ಹೋಗಲಿ, ಸೈಕಲ್‍ಗಳನ್ನು ಕೊಡಿಸುವಾಗ, ಪ್ರತಿಭಾ ಪುರಸ್ಕಾರಗಳನ್ನು ಕೊಡುವಾಗ ಇವರಿಗೆ ಹಿಂದುಳಿದ ಹಿಂದೂಗಳು ಕಣ್ಣಿಗೆ ಕಾಣುತ್ತಾರೆಯೇ? ಇಲ್ಲ. ಬಡಪಾಯಿಗಳು ಅಲ್ಪ ಸಂಖ್ಯಾತರಲ್ಲವಲ್ಲ! ಆದ್ದರಿಂದಲೇ ಬಾಂಗ್ಲಾದೇಶದಿಂದ ಬರುವ ಹಿಂದೂ ಹಾಗೂ ಬೌದ್ಧ ವಲಸಿಗರಿಗೆ ಇವರ ರಾಜಾಶ್ರಯ ದೊರಕುವುದೇ ಇಲ್ಲ. ಅಲ್ಪ ಸಂಖ್ಯಾತರ ಕುರಿತ ನಿರ್ಣಯಗಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡಿರುವ ದೀದಿ, ಗೋಮಾಂಸ ಭಕ್ಷಣೆ ಮೂಲಭೂತ ಹಕ್ಕಾಗಬೇಕು ಎಂದು ಸಂಸತ್ತಿನಲ್ಲಿ ಈ ಹಿಂದೆಯೇ ಹೇಳಿಬಿಟ್ಟಿದ್ದಾರೆ. ಬಂಗಾಳದಲ್ಲಿ 34 ವರ್ಷಗಳ ಕಮ್ಯೂನಿಸ್ಟ್ ಆಡಳಿತಕ್ಕೆ ಕೊನೆ ಹಾಡಿ ತನ್ನನ್ನು ಅಧಿಕಾರಕ್ಕೆ ತಂದ ಮುಸ್ಲಿಂ ಲಾಬಿಯ ಋಣಸಂದಾಯವನ್ನು ತಮ್ಮ ಶಕ್ತ್ಯಾನುಸಾರ ಮಾಡುತ್ತಿದ್ದಾರೆ! ಯಾವ ಹಿನ್ನೆಲೆಯನ್ನೂ ವಿಚಾರಿಸದೆ 22 ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರಿಗೆ ಸಾಲ ನೀಡುತ್ತಿರುವುದು, ಅಲ್ಪಸಂಖ್ಯಾತರಿಗೆ ಮೀಸಲಿರುವ ಹಣದ ಪ್ರಮಾಣವನ್ನು 1000 ಕೋಟಿ ದಾಟಿಸಿರುವುದು ಹಾಗೂ ಸಾವಿರಾರು ಮದರಸಾಗಳನ್ನು ತೆರೆಯಲು ಒಪ್ಪಿಗೆ ನೀಡಿರುವುದೂ ಋಣಸಂದಾಯದ ಕೆಲ ವಿಧಾನಗಳೇ.

ದೀದಿಯ ಅತಿರೇಕ ಇಲ್ಲಿಗೇ ಮುಗಿಯುವುದಿಲ್ಲ. ಶಾರದಾ ಚಿಟ್ ಫಂಡ್ ಹಗರಣದ ಬಗ್ಗೆ ನೀವು ಕೇಳಿರಬೇಕು. ಅದರಲ್ಲಿ ಬಂಗಾಳದ ಲಕ್ಷಾಂತರ ಮಧ್ಯಮ, ಕೆಳ-ಮಧ್ಯಮ ವರ್ಗದ ಜನ ತಮ್ಮ ಹಣವನ್ನು ಹೂಡಿದ್ದರು. ಕೋಟಿಗಟ್ಟಳೆ ಹಣಕ್ಕೆ ಮೇಲ್ವಿಚಾರಕರಾಗಿ ಸಂಸದ ಸುದೀಪ್ತೋ ಸೇನ್‍ರನ್ನು ನೇಮಿಸಲಾಯಿತು. ಜವಾಬ್ದಾರಿಯಿಲ್ಲದೆ ಜನರ ಹಣವನ್ನು ಕಂಡ ಕಂಡಲ್ಲಿ ಹೂಡಿದ ಪರಿಣಾಮ ಸಂಸ್ಥೆ ದಿವಾಳಿಯೆದ್ದಿತು. ದೀದಿಯನ್ನು ವಿಚಾರಿಸಿದಾಗ 'ಹೋದದ್ದು ಹೋಯಿತು ಬಿಡಿ' ಎಂದು ಬಿಟ್ಟರು ಸಲೀಸಾಗಿ. ತಾವೇ ಒಂದು ತನಿಖಾ ತಂಡವನ್ನು ರಚಿಸಿ ವಿಚಾರಣೆಗೆ ಆದೇಶಿಸಿದರೇ ಹೊರತು ಸಿ.ಬಿ.ಐಯನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಆದರೆ ಹೂಡಿಕೆದಾರರು ಬಿಡಬೇಕಲ್ಲ? ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿದು ಪ್ರಕರಣವನ್ನು ಸಿ.ಬಿ.ಐಗೆ ಒಪಿಸಿದ್ದಾರೆ. ಸುದೀಪ್ತೋರನ್ನು ಒಳಗೆ ಹಾಕಿದ ಮೇಲೆ ಹುಳುಕುಗಳು ಹೊರ ಬರುತ್ತಿವೆ. ತೃಣಮೂಲ ಪಕ್ಷದ ಹಲವರು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಉಳಿದವರದ್ದು ಬಿಡಿ, ಈ ಅವ್ಯವಹಾರದ ಕಳಂಕ ದೀದಿಯನ್ನೂ ಸುತ್ತಿಕೊಳ್ಳುವ ಲಕ್ಷಣಗಳಿವೆ. ದೀದಿಗೆ ಚಿತ್ರಕಲೆಯ ಹವ್ಯಾಸವಿದೆ. ಕಳೆದ ವರ್ಷ ಅವರ ಪೇಂಟಿಂಗ್ ಒಂದನ್ನು ಬರೋಬ್ಬರಿ 1.8ಕೋಟಿ ರೂಗಳಿಗೆ ಕೊಂಡಿದ್ದರು ಸುದೀಪ್ತೋ ಸೇನ್. ಹವ್ಯಾಸಿ ಚಿತ್ರಕಲೆಗೆ ಇಷ್ಟೊಂದು ಬೆಲೆಯೇ ಎಂದು ಅಚ್ಚರಿಪಟ್ಟಿದ್ದೆವು ನಾವು. ಆ ದುಡ್ಡು ಶಾರದಾ ಫಂಡ್‍ನದೇ ಎಂದು ಈಗ ಬಾಯಿ ಬಿಡುತ್ತಿದ್ದಾರೆ ಸುದೀಪ್ತೋ. ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡಲು ಇವರೇ ಆಗಬೇಕೇ? ಮೋದಿಯವರು ಚುನಾವಣೆಯ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೇ ಸಿಟ್ಟಾಗಿದ್ದರು ದೀದಿ, ಈಗ ಸಿ.ಬಿ.ಐನ ಕೆಂಗಣ್ಣನ್ನು ಹೇಗೆ ಎದುರಿಸುತ್ತಾರೋ. ಇದಕ್ಕಿಂತ ಆಘಾತಕಾರಿಯಾದ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಉಗ್ರ ಸಂಘಟನೆಗಳಿಗೆ ಶಾರದಾ ಫಂಡ್‍ನದೇ ದುಡ್ಡು ಸರಬರಾಜಾಗಿದೆಯಂತೆ. ಸುದೀಪ್ತೋ ಸೇನ್‍ರ ನೆರವಿನೊಂದಿಗೆ ಕೋಟಿಗಟ್ಟಳೆ ಹಣವನ್ನು ಹೊತ್ತ ಆಂಬುಲೆನ್ಸ್ ಗಳು ರಾತ್ರೋರಾತ್ರಿ ಬಂಗಾಳದ ಗಡಿಯನ್ನು ದಾಟಿದವು ಎಂಬ ಅಂಶವನ್ನು ಸಿ.ಬಿ.ಐ ಹೊರಹಾಕಿದೆ. ಹಾಗೆ ಹಣವನ್ನು ದಾಟಿಸಿದವನು ಇಸ್ಲಾಮಿಕ್ ಉಗ್ರ ಸಂಘಟನೆ ಸಿಮಿಯ ಮುಖಂಡ ಇಮ್ರಾನ್‍. ಇದೇ ಇಮ್ರಾನ್‍ನನ್ನೇ ದೀದಿ ತಲೆಯ ಮೇಲೆ ಕೂರಿಸಿಕೊಂಡು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದ್ದು! 2001ರಲ್ಲೇ ಸಿಮಿಯ ಮೇಲೆ ನಿರ್ಬಂಧ ಹೇರಿರುವುದು ಗೊತ್ತಿದ್ದೂ ಆವನನ್ನು ಆರಿಸುವ ಅಗತ್ಯವೇನಿತ್ತು? ದೇಶದ್ರೋಹಿಗಳನ್ನು ಅಧಿಕಾರ ಕೇಂದ್ರದಲ್ಲಿ ಕೂಡಿಸುವುದೂ ಅಲ್ಲದೇ, ನಮ್ಮದೇ ಜನರ ದುಡ್ಡನ್ನು ಉಗ್ರವಾದಿ ಚಟುವಟಿಕೆಗಳಿಗೆ ಬಳಸುವುದನ್ನು ಹೇಗೆ ಸಮರ್ಥಿಸಿಕೊಳ್ಳಲಾದೀತು?

ಅರ್ಧ ಬೆಂದ ಆಹಾರ ವಿಷಕ್ಕೆ ಸಮಾನವಂತೆ. ಹಾಗೆಯೇ ರಾಜಕಾರಣಿಗಳ ಅಪಕ್ವ ಚಿಂತನೆಗಳು ಕಾರ್ಯರೂಪಕ್ಕಿಳಿಯುವುದು ದೇಶದ ಸ್ವಾಸ್ಥ್ಯಕ್ಕೆ ಮಾರಕ. ಅತಿಯಾದ ಓಲೈಕೆ, ಮಿತಿಮೀರಿದ ದ್ವೇಷಸಾಧನೆಗಳು ಸಮಾಜದ ಸಮತೋಲನವನ್ನು ಹಾಳುಗೆಡವುತ್ತವೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಯಾವತಿ, ಜಯಲಲಿತಾ ಹಾಗೂ ಮಮತಾಗಳೆಂಬ ತ್ರಿಮೂರ್ತಿಗಳು ಆಡುತ್ತಿದ್ದ ರೀತಿ ನೆನಪಿದೆಯಲ್ಲವೇ? ಅಧಿಕಾರಕ್ಕೇರಲು ತಮ್ಮ ಬೆಂಬಲ ಬೇಕೇ ಬೇಕಾಗುತ್ತದೆಂಬ ದುರಹಂಕಾರದಿಂದ ಬೀಗುತ್ತಿದ್ದ ಅವರನ್ನು ಹಿಡಿಯಲು ಸಾಧ್ಯವಿತ್ತೇ? ಮಾಯಾವತಿಯ ಸೊಲ್ಲು ಸೋತ ಮೇಲೆ ಅಡಗಿತು. ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಜಯಲಲಿತಾ ಜೈಲ್‍ಲಲಿತಾ ಆಗಿದ್ದಾಯಿತು. ಇನ್ನುಳಿದಿರುವುದು ದೀದಿಯ ಸರದಿ. ‘ಅಮ್ಮ’ಳನ್ನೇ ಬಿಡದ ಕಾನೂನು ದೀದಿಯನ್ನು ಬಿಟ್ಟೀತೇ? ಮೇರೆ ಮೀರುತ್ತಿರುವ ಆಕೆಯ ನಿರಂಕುಶ ಪ್ರಭುತ್ವಕ್ಕೂ ಕಡಿವಾಣ ಬೀಳಬೇಕಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಲ್ಲವೇ?

Wednesday 8 October 2014

ಪ್ರಮಾಣ ಪತ್ರ ಬೇಡ, ಧೋರಣೆ ಬದಲಾದರೆ ಸಾಕು!



ಇತ್ತೀಚೆಗೆ ಸಾದಿಯಾರವರು ತಮ್ಮ ಅಂಕಣದಲ್ಲಿ, 'ಮುಸ್ಲಿಮರು ದೇಶಪ್ರೇಮಕ್ಕೆ ಪ್ರಮಾಣಪತ್ರ ಇಟ್ಟುಕೊಂಡಿರಬೇಕೇ?' ಎಂಬ ಸಮಯೋಚಿತ ಪ್ರಶ್ನೆಯನ್ನು ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸುವ ಮುನ್ನ, ನಮ್ಮ ಪ್ರಶ್ನೆಗಳನ್ನು ಅವರ ಮುಂದಿಡುವ ಮುನ್ನ ಒಂದು ಘಟನೆಯನ್ನು ಹೇಳಬೇಕು. ಕೆಲ ದಿನಗಳ ಹಿಂದೆ, ಹಿಂದೂ ಮುಸ್ಲಿಂ ಸಂವಾದವೊಂದರಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ಅದನ್ನು ಏರ್ಪಡಿಸಿದ್ದು ಮೆಟಾ-ಕಲ್ಚರ್ ಎಂಬ ಸಂಸ್ಥೆ. ಯಾವ ರಾಜಕೀಯ ವ್ಯಕ್ತಿ ಅಥವಾ ಪಕ್ಷಗಳೊಂದಿಗೂ ಗುರುತಿಸಿಕೊಳ್ಳದ ಆ ಸಂಸ್ಥೆಯ ಮುಖ್ಯ ಉದ್ದೇಶ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣೆಯಲ್ಲಿ ಸಹಕರಿಸುವುದು. ಈ ಬಾರಿ ಅದು ಆಯ್ದುಕೊಂಡಿದ್ದು ಹಿಂದೂ-ಮುಸ್ಲಿಮರ ವಿಷಯವನ್ನು. ಅದನ್ನು ಪ್ರಾಯೋಜಿಸಿದ್ದು ದೆಹಲಿಯಲ್ಲಿರುವ ಹಾಲೆಂಡ್‍ನ ದೂತಾವಾಸ ಕಛೇರಿ. ಅಲ್ಲಿ ಬೆರಳೆಣಿಕೆಯಷ್ಟು ಹಿಂದೂಗಳನ್ನು ಆಯ್ದು, ಅಷ್ಟೇ ಮುಸ್ಲಿಮರನ್ನೂ ಆಯ್ದು ಇಬ್ಬರಿಗೂ ಪರಸ್ಪರರೊಡನೆ ಮಾತನಾಡುವ ಅವಕಾಶ ಮಾಡಿಕೊಡಲಾಗುತ್ತದೆ. ಮೊದಲ ಸುತ್ತಿನ ಮಾತುಕತೆ ನಡೆಯುವುದು ಗುಂಪಿನಲ್ಲೇ. ನಂತರ ಓರ್ವ ಹಿಂದೂವಿಗೆ ಓರ್ವ ಮುಸ್ಲಿಂ ಅನ್ನು ಜತೆಗಾರರನ್ನಾಗಿ ಮಾಡಿ ಸಂವಾದಕ್ಕೆ ಕಾಲಾವಕಾಶ ನೀಡಲಾಗುತ್ತದೆ. ಅದು ಚರ್ಚೆ ಖಂಡಿತ ಅಲ್ಲ. ಆದ್ದರಿಂದಲೇ, ನಾವು ಮಾತನಾಡುವಾಗ ಇರುವಷ್ಟೇ ಉತ್ಸಾಹ ಎದುರಿನವರ ಮಾತನ್ನು ಕೇಳುವಾಗಲೂ ಇರಬೇಕು. ಒಬ್ಬರು ಮತ್ತೊಬ್ಬರನ್ನು ಯಾವ ಪ್ರಶ್ನೆಯನ್ನಾದರೂ ಕೇಳಬಹುದು. ಧರ್ಮ, ಆಚಾರ-ವಿಚಾರ, ಉಡುಗೆ-ತೊಡುಗೆಗಳಿಗೆ ಸಂಬಂಧಿಸಿದ ಎಷ್ಟೇ ಸೂಕ್ಷ್ಮ ವಿಷಯವನ್ನಾದರೂ ನಿರ್ಭಿಡೆಯಿಂದ ಮಾತಿಗೆ ಎಳೆದು ತರಬಹುದು. ಏಕೆಂದರೆ, ಕೇಳಿದ ಪ್ರಶ್ನೆಗಳನ್ನು ತಿರುಚುವುದಕ್ಕೆ, ಇಲ್ಲದ ಅರ್ಥ ಕಲ್ಪಿಸುವುದಕ್ಕೆ ಅಲ್ಲಿ ಅರ್ಣಬ್ ಗೋಸ್ವಾಮಿ, ಬರ್ಖಾ ದತ್‍ರಂಥ ಬುದ್ಧಿಗೇಡಿಗಳಿರುವುದಿಲ್ಲ. ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಅರಿತು ನಿವಾರಿಸಿಕೊಂಡು ಸಾಮರಸ್ಯ ಕಂಡುಕೊಳ್ಳುವ ನಿಟ್ಟಿನ ಪ್ರಯತ್ನವದು ಅಷ್ಟೇ. ಅಲ್ಲಿಗೆ ಬಂದಿದ್ದ ಮುಸ್ಲಿಮರಲ್ಲಿ ಬಹುತೇಕರು ವಿದೇಶಗಳಲ್ಲಿ ಓದಿದವರು. ನಮ್ಮ ಮಾತುಗಳನ್ನು ಕೇಳುವ ತಾಳ್ಮೆ ಹಾಗೂ ಅರ್ಥಮಾಡಿಕೊಳ್ಳುವ ಮನಸ್ಥಿತಿ ಇದ್ದವರು.

ನಾವು ಅವರನ್ನು ಕೇಳಿದ ಕೆಲ ಪ್ರಶ್ನೆಗಳು ಹೀಗಿದ್ದವು: 'ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ಆಕ್ರಮಣವನ್ನು ಪ್ರತಿಭಟಿಸಲು ಬೆಂಗಳೂರೊಂದರಲ್ಲೇ ಸುಮಾರು ಐದು ಸಾವಿರ ಮಂದಿ ಸೇರಿದ್ದಿರಲ್ಲ, ದಶಕಗಳಿಂದ ನಮ್ಮ ಮೇಲೆ ನಿರಂತರವಾಗಿ ನಡೆದಿರುವ ಪಾಕಿಸ್ತಾನದ ಉಗ್ರರ ಹಾವಳಿಯನ್ನು ಪ್ರತಿಭಟಿಸಲು ಇಲ್ಲಿಯವರೆಗೆ ಎಷ್ಟು ಬಾರಿ, ಎಷ್ಟು ಸಂಖ್ಯೆಯಲ್ಲಿ ಸೇರಿದ್ದೀರಿ? ಈ ಆರು ದಶಕಗಳಲ್ಲಿ ಒಮ್ಮೆಯಾದರೂ ಭಾರತ ಸರ್ಕಾರಕ್ಕೆ, 'ನಾವೆಂದಿಗೂ ನಿಮ್ಮ ಪರ' ಎಂದು ಘಂಟಾಘೋಷವಾಗಿ ಹೇಳಿದ್ದೀರಾ? ‘ಈ ದೇಶದ ತಂಟೆಗೆ ಬಂದರೆ ಹುಷಾರ್' ಎಂದು ಪಾಕ್ ಉಗ್ರರಿಗೆ ಖಡಕ್ಕಾದ ಸಂದೇಶವನ್ನು ಒಮ್ಮೆಯಾದರೂ ರವಾನಿಸಿದ್ದೀರಾ? ನಿಮ್ಮ ಧರ್ಮಕ್ಕೇ ಸೇರಿದ ಅವರ ಅಟ್ಟಹಾಸಕ್ಕೆ ಬಲಿಯಾಗಿರುವ ಹಿಂದೂಗಳ, ಭಾರತೀಯರ ಕ್ಷಮೆಯಾಚಿಸಿದ್ದೀರಾ? ನಿಮ್ಮ ಹಾಗೇ ಪೇಟ ಧರಿಸಿ ಗಡ್ಡ ಬಿಡುವ ಸಿಖ್ಖರನ್ನು ಕಂಡರೆ ಆಗದ ಭಯ ನಿಮ್ಮನ್ನು ಕಂಡರೆ ಆಗುತ್ತದಲ್ಲ. ನಿಮಗೆ ಅದರ ಅರಿವಿದೆಯೇ? ಪ್ರತಿ ಭಯೋತ್ಪಾದಕನೂ ಮದರಸಾದಿಂದ ಬಂದವನೇ ಆಗಿರುತ್ತಾನಲ್ಲ ಏಕೆ? ವಿದೇಶಗಳಲ್ಲಿ ಓದಿಕೊಂಡು ಬಂದ ನೀವು ಕೆಳವರ್ಗದ ಮುಸ್ಲಿಮರ ಶಿಕ್ಷಣ, ಜೀವನಮಟ್ಟದ ಕುರಿತು ಎಂದಾದರೂ ಯೋಚಿಸಿದ್ದೀರಾ? ಯಾವುದು ದೊಡ್ಡದು ನಿಮಗೆ, ದೇಶವೋ ಧರ್ಮವೋ?' ಈ ಪ್ರಶ್ನೆಗಳಿಗೆ ನಿಂತ ನಿಲುವಿನಲ್ಲೇ ಸಮಂಜಸ ಉತ್ತರಗಳು ದೊರಕಲಿಲ್ಲ. ಆದರೆ ನಮ್ಮ ಪ್ರಾಮಾಣಿಕ ಕಳಕಳಿ ಅವರಲ್ಲಿ ಕೆಲವರಿಗಂತೂ ಅರ್ಥವಾಯಿತು. ಅಂತಲೇ ಅವರು ಆರ್‍ಎಸ್‍ಎಸ್‍ ಆಯೋಜಿಸಿದ್ದ 'ಸಮರ್ಥ ಭಾರತ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿಸ್ವಾರ್ಥ ಸ್ವಯಂಸೇವೆಯ ಇತಿಹಾಸ ಹಾಗೂ ಪರಿಕಲ್ಪನೆಗಳನ್ನು ನೋಡಿ ಅಚ್ಚರಿಪಟ್ಟು, ಅಭಿನಂದಿಸಿ ಹಿಂದಿರುಗಿದರು.

ಈಗ ಅವೇ ಪ್ರಶ್ನೆಗಳು ಸಾದಿಯಾರಿಗೂ ಅನ್ವಯಿಸುತ್ತವೆ. ಭಾರತೀಯ ಮುಸ್ಲಿಮರು ಪಾಕಿಸ್ತಾನವನ್ನೇ ಬೆಂಬಲಿಸುತ್ತಾರೆ ಎಂಬ ಭಾವನೆ ನಮ್ಮಲ್ಲಿ ಮೊಳೆಯಲು ಆಸ್ಪದ ಏಕೆ ಕೊಟ್ಟಿರಿ? ಒಂದು ಕ್ರಿಕೆಟ್ ಆಟದ ಫಲಿತಾಂಶದಿಂದ ನಿಮಗೆ ಅಷ್ಟು ನೋವಾಗಿದೆ ಎನ್ನುವುದಾದರೆ, ದಶಕಗಳಿಂದ ಮುಸ್ಲಿಂ ಉಗ್ರವಾದಕ್ಕೆ ಬಲಿಯಾಗಿ ಜೀವಗಳನ್ನೇ ಕಳೆದುಕೊಳ್ಳುತ್ತಿರುವ ನಮಗೆಷ್ಟು ನೋವಾಗಿರಬಹುದು ಅರಿವಿದೆಯೇ? ಅಷ್ಟಾಗಿಯೂ ದೇಶದ ಅತ್ಯುನ್ನತ ಹುದ್ದೆಗೆ ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂರನ್ನು ಆರಿಸಿದಾಗ ನಾವು ಸಂಭ್ರಮಿಸಲಿಲ್ಲವೇ? ಬದಲಿಗೆ ನಿಮ್ಮಿಂದ ನಮಗೆಷ್ಟು ಬೆಂಬಲ ಸಿಕ್ಕಿದೆ?
ಇತ್ತೀಚಿನ ಆಘಾತಕಾರಿ ಬೆಳವಣಿಗೆಯನ್ನೇ ನೋಡಿ. ಪಾಕಿಸ್ತಾನ ಪ್ರಾಯೋಜಿತ ಕೈದತ್-ಅಲ್-ಜಿಹಾದ್ ಭಾರತಕ್ಕೆ ಬರಲಿದೆ ಎಂದು ಅಲ್-ಕೈದಾ ಸಂಘಟನೆಯ ಮುಖ್ಯಸ್ಥ ಅಯಮಾನ್-ಅಲ್-ಜವಾಹಿರಿ ಅಧಿಕೃತವಾಗಿ ಘೋಷಿಸಿದ್ದಾನೆ. ಇಂಥ ಹೇಳಿಕೆಗಳು ಬಂದ ತಕ್ಷಣ ನೀವೇಕೆ ಖಂಡಿಸುವುದಿಲ್ಲ? ಈ ಹಿಂದೆ ಹೈದರಾಬಾದಿನ ಸಂಸದ ಅಸಾದುದ್ದೀನ್ ಒವೈಸಿ 'ಒಂದು ಪಕ್ಷ ಭಾರತ ಹಾಗೂ ಪಾಕ್ ಯುದ್ಧವಾದರೆ ಭಾರತದ ಮುಸ್ಲಿಮರೆಲ್ಲ ಬೆಂಬಲಿಸುವುದು ಪಾಕಿಸ್ತಾನವನ್ನೇ' ಎಂದು ಹೇಳಿದ್ದಾಗಲೂ ನೀವೇಕೆ ಮೌನವಾಗಿದ್ದಿರಿ? ಈ ಮೌನದ ಅರ್ಥ ಸಮ್ಮತಿಯೆಂದೇ? ಹಾಗಿದ್ದರೆ ಭಾರತದಲ್ಲಿದ್ದು ಬೆಂಬಲಿಸುವ ಬದಲು ಪಾಕಿಸ್ತಾನಕ್ಕೇ ಹೋಗಿಬಿಡಿ ಎಂದರೆ ಎಲ್ಲರೂ ಅಲ್ಲಿಗೆ ಹೋಗಲು ಸಿದ್ಧರೇ? ಹುಚ್ಚು ನೆರೆ ಉಕ್ಕಿ ಹರಿದ ಜಮ್ಮು-ಕಾಶ್ಮೀರದಲ್ಲಿ ಲಕ್ಷಾಂತರ ಮುಸ್ಲಿಮರನ್ನು ಜೀವದ ಹಂಗು ತೊರೆದು ರಕ್ಷಿಸಿದ ಭಾರತೀಯ ಸೇನೆಯನ್ನು ಎಷ್ಟು ಜನ ಮುಕ್ತವಾಗಿ ಶ್ಲಾಘಿಸಿದ್ದೀರಿ? ಅದು ಬರಿದೇ ಅವರ ಕರ್ತವ್ಯ ಎಂದರೆ ಈ ದೇಶದ ಸಲುವಾಗಿ ನಿಮ್ಮ ಕರ್ತವ್ಯಗಳೇನೂ ಇಲ್ಲವೇ?


ಕಾಶ್ಮೀರವೆಂದೊಡನೆ ಮುಟ್ಟಿದರೆ-ಮುನಿಯಂತಾಡಲು ಮುಸ್ಲಿಮರಿಗೆ ಯಾವ ಕಾರಣವೂ ಇಲ್ಲ. ಏಕೆಂದರೆ, 1947ರ ಅಕ್ಟೋಬರ್ 26ರಂದು ಮಹಾರಾಜ ಹರಿಸಿಂಗ್‍ರ ಆಳ್ವಿಕೆಯಲ್ಲಿದ್ದ ಜಮ್ಮು-ಕಾಶ್ಮೀರ ರಾಜ್ಯ ಅವರ ಇಚ್ಛೆಗನುಗುಣವಾಗಿ, ಸಾಂವಿಧಾನಿಕವಾಗಿ, ಕಾನೂನುಬದ್ಧವಾಗಿ ಭಾರತದೊಂದಿಗೆ ವಿಲೀನಗೊಂಡಿತು. ಆಗ ಯಾವ ಪ್ರತ್ಯೇಕತಾವಾದದ ಕೂಗೂ ಇರಲಿಲ್ಲ. ತಕ್ಷಣವೇ ತನ್ನ ಜನರನ್ನು ಛೂಬಿಟ್ಟು ಗಲಾಟೆ ಎಬ್ಬಿಸಿತು ‘ಪಾಪಿ’ಸ್ತಾನ. ಈಗಲೂ ಅಷ್ಟೇ. ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಶೇಕಡಾ 85ರಷ್ಟು ವಿಸ್ತೀರ್ಣವಿರುವುದು ಜಮ್ಮು ಹಾಗೂ ಲಡಾಖ್‍ಗಳದ್ದೇ. ಕಾಶ್ಮೀರದ ವ್ಯಾಪ್ತಿ ಶೇಕಡಾ 15 ಮಾತ್ರ! ಜಮ್ಮುವಿನಲ್ಲಿರುವವರಲ್ಲಿ ಶೇಕಡಾ 70ರಷ್ಟು ಹಿಂದೂಗಳೇ. ಲಡಾಖಿನಲ್ಲಿರುವವರು ಬೌದ್ಧರು ಹಾಗೂ ಶಿಯಾ ಮುಸ್ಲಿಮರು. ಇಲ್ಲಿಯವರೆಗೂ ಅವರುಗಳು ಒಂದೇ ಒಂದು ಬಾರಿಯೂ ಪ್ರತ್ಯೇಕತಾವಾದಕ್ಕೆ ಬೆಂಬಲ ಸೂಚಿಸಿಲ್ಲ. ಅಫ್ಜಲ್ ಗುರುವನ್ನು ನೇಣಿಗೇರಿಸಿದಾಗಲೂ ಅಲ್ಲಿ ಒಂದೂ ಬಂದ್ ಅಥವಾ ಪ್ರತಿಭಟನೆ ನಡೆದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಜಮ್ಮು-ಕಾಶ್ಮೀರ ನಮ್ಮೊಡನೆ ಬೆಸೆದುಕೊಂಡಿರುವುದೇ ಆ ಜನರ ನಿಷ್ಠೆಯಿಂದಾಗಿ! ಕಿರಿಕಿರಿಯೇನಿದ್ದರೂ ಗಾತ್ರದಲ್ಲಿ ಕಿರಿದಾದ ಕಾಶ್ಮೀರದ್ದೇ. ಸುನ್ನಿ ಮುಸ್ಲಿಮರ ಪ್ರಾಬಲ್ಯ ಇರುವ ಇಲ್ಲಿ ಮಾತ್ರವೇ ಗದ್ದಲ, ಹೋರಾಟ. ಒಟ್ಟಾರೆ ರಾಜ್ಯದ 22 ಜಿಲ್ಲೆಗಳಲ್ಲಿ 17 ಜಿಲ್ಲೆಗಳು ಸದಾ ಶಾಂತ. ಇನ್ನೈದು ಜಿಲ್ಲೆಗಳ ಪ್ರತಿಭಟನೆ, ಹಿಂಸಾಚಾರ ಸಂಪೂರ್ಣವಾಗಿ ಪಾಕ್ ಪ್ರೇರಿತ! ಇಲ್ಲಿ ಮತ್ತೊಂದು ವಿಷಯ ಹೇಳಲೇಬೇಕು. ಅನುಚ್ಛೇದ (article) 370ರ ಬಗ್ಗೆ ನಮಗೆ ಇರುವುದೂ ತಪ್ಪು ತಿಳುವಳಿಕೆಯೇ. ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಎರಡು ರೀತಿಯ ಆಳ್ವಿಕೆಯಲ್ಲಿ ಹಂಚಿಹೋಗಿತ್ತು. ಒಂದು ಬ್ರಿಟಿಷರದ್ದಾದರೆ ಮತ್ತೊಂದು ಸ್ವತಂತ್ರ ರಾಜರದ್ದು. ಸ್ವಾತಂತ್ರ್ಯದ ಬಳಿಕ ಆ ರಾಜರ ಆಳ್ವಿಕೆಯಲ್ಲಿದ್ದ ರಾಜ್ಯಗಳನ್ನೆಲ್ಲ ನಮ್ಮ ಸಂವಿಧಾನದೊಂದಿಗೆ ವಿಲೀನಗೊಳಿಸಲಾಯಿತು. ಮೈಸೂರು, ಕೊಚ್ಚಿನ್ ಮುಂತಾದ ರಾಜ್ಯಗಳು ಸುಲಭವಾಗಿ ಭಾರತದ ತೆಕ್ಕೆ ಸೇರಿದವು. ಆದರೆ ಪಾಕಿಸ್ತಾನ ಹುಟ್ಟುಹಾಕಿದ್ದ ಗಲಭೆಯಿಂದಾಗಿ ಜಮ್ಮು-ಕಾಶ್ಮೀರದ ವಿಲೀನ ಗೊಂದಲಮಯವಾಯಿತು. ಆದ್ದರಿಂದ ತಾತ್ಕಾಲಿಕವಾಗಿ 370ಯನ್ನು ಜಾರಿಗೆ ತರಲಾಯಿತು. ಮೂಲತಃ ಯಾವ ವಿಶೇಷ ಸವಲತ್ತುಗಳನ್ನೂ ಅದು ಒಳಗೊಂಡಿರಲಿಲ್ಲ. ಅವುಗಳನ್ನು ಬರಿದೇ ಬಾಯಿ ಮಾತಿನಲ್ಲಿ ದಯಪಾಲಿಸಿದವರು ‘I am the last Englishman to rule in India’ ಎಂದು ನಾಚಿಕೆಯಿಲ್ಲದೆ ಹೇಳಿಕೊಂಡಿದ್ದ ಹೊಣೆಗೇಡಿ ನೆಹರೂ! ಅಂದಿನಿಂದಲೂ ಆ ಗೊಂದಲ, ಸವಲತ್ತುಗಳು ಹಾಗೇ ಮುಂದುವರೆಯುತ್ತಾ ಬಂದಿವೆ.

ಈಗ ಹೇಳಿ, ಕಾನೂನುಬದ್ಧವಾಗಿ ಕಾಶ್ಮೀರದ ವಿಷಯದಲ್ಲಿ ಯಾವ ಸಮಸ್ಯೆಯಿದೆ? ಹಾಗಿದ್ದಿದ್ದರೆ ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಪಾಕಿಸ್ತಾನಕ್ಕೆ ಛೀಮಾರಿ ಹಾಕಿ ಏಕೆ ಕಳಿಸುತ್ತಿತ್ತು? ಅಲ್ಪಸಂಖ್ಯಾತರು ಎಂಬ ಹಣೆಪಟ್ಟಿ ಹಚ್ಚಿ ಓಲೈಕೆ ರಾಜಕಾರಣ ಮಾಡುತ್ತಿರುವವರೇ ಇಂದಿನ ನಿಜವಾದ ಸಮಸ್ಯೆ ಎನಿಸುವುದಿಲ್ಲವೇ? ಅನುಚ್ಛೇದ 370ಯನ್ನು ತಪ್ಪಾಗಿ ಬಿಂಬಿಸುತ್ತಿರುವ ಮಾಧ್ಯಮಗಳು, ಆಗಿಯೇ ಇಲ್ಲದ ಅನ್ಯಾಯವನ್ನು ಸರಿಪಡಿಸಲು ಹೋರಾಟದ ಸೋಗು ಹಾಕುತ್ತಿರುವ ಸೆಕ್ಯುಲರ್ ಮಂದಿಗಿಂತ ದೊಡ್ಡ ಸಮಸ್ಯೆ ಯಾವುದಿದೆ? ಇದೆಲ್ಲ ಮುಸ್ಲಿಮರಿಗೆ ಅರ್ಥವಾಗುತ್ತಲೇ ಇಲ್ಲವೆಂದರೆ ಹೇಗೆ ನಂಬುವುದು?
ಸಾದಿಯಾರವರಿಗೆ ಮತ್ತೂ ಒಂದು ಮುಖ್ಯವಾದ ಪ್ರಶ್ನೆಯಿದೆ. 'ನಮ್ಮ ದೇಗುಲಗಳ ಅರ್ಚಕರು ಹಾಗೂ ಧರ್ಮಗುರುಗಳದ್ದು ತುಂಬಾ ಸೀಮಿತ ಪಾತ್ರ. ಧರ್ಮವನ್ನು ನಮ್ಮ ಮೇಲೆ ಹೇರುವ ಸ್ವಾತಂತ್ರ್ಯವನ್ನು ನಾವು ಅವರಿಗೆ ಯಾವತ್ತೂ ಕೊಟ್ಟಿಲ್ಲ. ಹಾಗೆಯೇ, ನಮ್ಮ ಸಾಮಾಜಿಕ ಬದ್ಧತೆಗಳಿಗೆ, ಧರ್ಮವನ್ನೇ ನೆಪಮಾಡಿಕೊಂಡು ಅವರು ಯಾವತ್ತೂ ಅಡ್ಡಗಾಲು ಹಾಕಿಯೂ ಇಲ್ಲ. ನಿಮ್ಮ ಧರ್ಮಗುರುಗಳಿಗೆ ಮಾತ್ರ ಏಕೆ ಇಡೀ ಸಮುದಾಯದ ಸಾಮಾಜಿಕ ಚಿಂತನೆ, ವಿಚಾರಗಳ ಮೇಲೆಲ್ಲ ಅಷ್ಟೊಂದು ಹಿಡಿತ? ನೀವೇ ನೋಡಿ. ಮುಸ್ಲಿಮರಲ್ಲಿ ಧರ್ಮಗುರುಗಳಿಗೆ ಹೊರತಾಗಿರುವ ಬಲಿಷ್ಠ ಸಾಮಾಜಿಕ ನಾಯಕತ್ವವಿಲ್ಲ. ಆ ಪೊರೆ ಕಳಚಿ ಹೊರಬಂದರಷ್ಟೇ ಅವರಿಗೆ ಶಿಕ್ಷಣ, ಸ್ವಾಸ್ಥ್ಯ, ರಾಷ್ಟ್ರೀಯತೆ, ಸೌಹಾರ್ದ, ಬದುಕಿನ ಗುಣಮಟ್ಟ, ಸಮಾಜದ ಆಗು-ಹೋಗುಗಳ ಬಗೆಗಿನ ಅರಿವು ಮೂಡಲು ಸಾಧ್ಯ. ಧರ್ಮವೆಂಬುದು ಬದುಕಿನ ನಡಿಗೆಯನ್ನು ಸುಗಮಗೊಳಿಸುವ ದಾರಿದೀಪವಾಗಬೇಕೇ ಹೊರತು, ನಡೆಯುವವನ ಕಣ್ಣಿಗೇ ಬಟ್ಟೆ ಕಟ್ಟಿ ಅವನನ್ನು ತನ್ನ ಹೆಗಲ ಮೇಲೆ ಹೊತ್ತೊಯ್ಯಬಾರದು.

ಭಾರತದ ಸಮಗ್ರತೆಯ ಅಗತ್ಯ ಹಿಂದೂಗಳಿಗೆಷ್ಟಿದೆಯೋ, ಮುಸ್ಲಿಮರಿಗೂ ಅಷ್ಟೇ ಇದೆ. ಇಲ್ಲಿ ಸಿಗುವ ಸ್ಥಾನ-ಮಾನ ಅವರಿಗೆ ಬೇರೆಲ್ಲಿಯೂ ಸಿಗುವುದಿಲ್ಲ. ವಾಸ್ತವವನ್ನು ಅರಿತು ಅದಕ್ಕೆ ಸ್ಪಂದಿಸುವ ಪ್ರಯತ್ನವಾಗಬೇಕು ಅಷ್ಟೇ. ಕಡೇಪಕ್ಷ ಸಾದಿಯಾರಂಥ ಸುಶಿಕ್ಷಿತ ಮುಸ್ಲಿಮರಾದರೂ ಬದಲಾವಣೆಯ ಪ್ರಕ್ರಿಯೆಗೆ ನಾಂದಿ ಹಾಡುತ್ತಾರೆ ಎಂದು ಆಶಿಸೋಣವೇ?