ಈ ಘಟನೆ ಬಹಳ ಹಿಂದೆ ನಡೆದದ್ದು. ಚೋಳ ವಂಶದ ರಾಜ ಮನು, ಧರ್ಮರಾಜನೆಂದೇ ಪ್ರಖ್ಯಾತನಾಗಿದ್ದ. ನ್ಯಾಯ ಬೇಡಿ ಬಂದವರನ್ನು ಎಂದಿಗೂ ನಿರಾಸೆಗೊಳಿಸುತ್ತಿರಲಿಲ್ಲ. ಅವನು ತನ್ನ ಆಸ್ಥಾನದಲ್ಲಿ ಒಂದು ದೊಡ್ಡ ಗಂಟೆಯನ್ನು ನೇತುಹಾಕಿದ್ದ. ನ್ಯಾಯ ಬೇಕಾದವರು ಆ ಗಂಟೆಯನ್ನು ಬಾರಿಸಿದರೆ ಸಾಕು, ಅವರ ಅಹವಾಲು ಕೇಳಿ ತಕ್ಕ ಸಮಾಧಾನವನ್ನು ಕೊಟ್ಟು ಕಳಿಸುತ್ತಿದ್ದ. ಒಮ್ಮೆ ಅವನ ಆಸ್ಥಾನದ ಗಂಟೆ ಜೋರಾಗಿ ಹೊಡೆದುಕೊಂಡಿತಂತೆ. ಯಾರೆಂದು ಬಂದು ನೋಡಿದರೆ ಒಂದು ಗೋವು! ಇದೇಕೆ ಬಂದು ನಿಂತಿದೆ ಎಂದು ವಿಚಾರಿಸಲಾಗಿ, ಆ ಗೋವಿನ ಕರು ರಾಜಕುಮಾರನ ರಥಕ್ಕೆ ಸಿಕ್ಕಿ ಸತ್ತು ಹೋಗಿತ್ತಂತೆ. ನ್ಯಾಯ ಬೇಡಿ ಬಂದ ಗೋವಿನ ಸಲುವಾಗಿ ರಾಜ ಏನು ಮಾಡಿದನಂತೆ ಗೊತ್ತೇ? ಆ ಕರುವಿಗೆ ಆದಂತೆಯೇ ತನ್ನ ಮಗನನ್ನೂ ರಥದಡಿಯಲ್ಲಿ ಮಲಗಿಸಿ ಕೊಲ್ಲಿಸಿದನಂತೆ! ಎಂಥ ಪೆದ್ದನಲ್ಲವೇ ರಾಜ? ಯಃಕಶ್ಚಿತ್ ಒಂದು ಗೋವಿಗೂ ನ್ಯಾಯ ಕೊಡಿಸುವುದೇ? ಅದು ಆ ಕಾಲದ ಮಾತಾಯಿತು ಬಿಡಿ.
ಈಗ ಕಾಲ ಬದಲಾಗಿದೆ.
ನ್ಯಾಯ ಕೊಡಿಸುವುದು ಹಾಗಿರಲಿ, ಗೋವನ್ನು ಉಳಿಸಿ ಎನ್ನುವವರನ್ನೇ ತರಿದು ಹಾಕಲಾಗುತ್ತಿದೆ. ಕಳೆದ ಅಕ್ಟೋಬರ್
ಒಂದರಂದು ಗಂಗೊಂಡನಹಳ್ಳಿಯಲ್ಲಿ ಮಹೇಂದ್ರ ಮನೋತ್ ಹಲ್ಲೆಗೀಡಾದ ಘಟನೆ ನಿಮಗೆ ತಿಳಿದಿರಬೇಕಲ್ಲವೇ?
ಗೋಹತ್ಯೆಯನ್ನು ತಡೆಯಲು ಶ್ರಮಿಸುತ್ತಿರುವವರ ಹತ್ಯೆಗೆ ಮುಂದಾಗುತ್ತಿರುವ ಜನರದ್ದು ಎಂಥ ಸಂಸ್ಕಾರ?
ಈ ಪರಿಯ ಅಜ್ಞಾನ, ತಿಕ್ಕಲುತನ ಆವರಿಸಿಕೊಂಡಿದ್ದು ಹೇಗೆ, ತಿಳಿಯೋಣ ಬನ್ನಿ. ಹಿಂದೂ ಧರ್ಮದಲ್ಲಿ ಗೋವಿಗೆ
ಮೊದಲಿನಿಂದಲೂ ಪ್ರಾಮುಖ್ಯ, ಪೂಜನೀಯ ಸ್ಥಾನ ಇದ್ದೇ ಇತ್ತು. 16ನೇ ಶತಮಾನದಲ್ಲಿ ಶುರುವಾಯಿತಲ್ಲ ಮುಸ್ಲಿಮರ
ದಾಳಿ, ಆಗ ಪರಿಸ್ಥಿತಿ ಬದಲಾಗತೊಡಗಿತು. ಬರೀ ಒಂಟೆ, ಮೇಕೆ, ಕುರಿಗಳಿದ್ದ ನಾಡಿನಿಂದ ಬಂದ ಮುಸ್ಲಿಮರು
ಗೋವುಗಳನ್ನು ಮೊದಲಿಗೆ ಕಂಡಿದ್ದೇ ಭಾರತದಲ್ಲಿ! ಮೊಘಲರ ಆಳ್ವಿಕೆ ಶುರುವಾದ ಹೊಸದರಲ್ಲಿ, ಹಿಂದೂಗಳಿಗೆ
ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಗೋಹತ್ಯೆಗೆ ಸಮ್ಮತಿಯಿರಲಿಲ್ಲ. ಆದರೆ ನಂತರ ಬಂದನಲ್ಲ ಔರಂಗಜೇಬ್,
ಇದನ್ನೇ ಮುಖ್ಯ ಕಸುಬನ್ನಾಗಿಸಿಕೊಂಡುಬಿಟ್ಟ. ದೇಗುಲಗಳನ್ನೆಲ್ಲ ಮಸೀದಿಗಳನ್ನಾಗಿ ಪರಿವರ್ತಿಸುವುದು,
ಅದು ಮಸೀದಿಯಾದುದಕ್ಕೆ ಸಾಕ್ಷಿಯಾಗಿ ಒಂದು ಗೋವನ್ನು ಕಡಿಯುವುದು! ಈ ಬರ್ಬರ ಕೃತ್ಯದ ಅಭ್ಯಾಸ ಯಾವ
ಮಟ್ಟಕ್ಕೆ ಹೋಯಿತೆಂದರೆ ಮುಸ್ಲಿಮರು ತಮ್ಮ ಹಬ್ಬಗಳಿಗೂ ಗೋವುಗಳ ಬಲಿಯನ್ನೇ ನೀಡತೊಡಗಿದರು. ಜೊತೆಗೆ
ಮತ್ತೂ ಒಂದು ತಂತ್ರಗಾರಿಕೆ ನಡೆದಿತ್ತು. ಬಲವಂತದಿಂದ ಮತಾಂತರಗೊಂಡ ಹಿಂದೂಗಳಿಗೆ ಗೋಮಾಂಸ ತಿನ್ನಿಸಿಬಿಡುವುದು.
ಒಮ್ಮೆ ತಿಂದುಬಿಟ್ಟರೆ ಮುಗಿಯಿತು. ಧರ್ಮಭ್ರಷ್ಟರಾದೆವೆಂಬ ಅಪರಾಧೀ ಭಾವದಿಂದ ಕುಗ್ಗಿ ಹೋಗುತ್ತಿದ್ದ
ಹಿಂದೂಗಳು ಮತ್ತೆ ತಮ್ಮ ಧರ್ಮಕ್ಕೆ ಮರಳುವುದು ಸಾಧ್ಯವೇ ಇರಲಿಲ್ಲ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ
ಪರಿವರ್ತಿಸುವ ಕನಸು ಕಾಣುತ್ತಿದ್ದವರಿಗೆ ಇಷ್ಟೇ ತಾನೆ ಬೇಕಿದ್ದಿದ್ದು?
ಗೋಹತ್ಯೆಗೆ ಹೈದರಾಲಿ ತಕ್ಕಮಟ್ಟಿಗೆ ಕಡಿವಾಣ ಹಾಕಿದ್ದನಾದರೂ
ಬ್ರಿಟಿಷರು ಬಂದ ನಂತರ ಇದು ಮತ್ತೆ ಗರಿಗೆದರಿತು. ಅಷ್ಟೇ ಅಲ್ಲ, ಅವರ ಅಚ್ಚುಮೆಚ್ಚಿನ ಆಹಾರವೂ ಆಯಿತು.
ಆಂಗ್ಲ ಭಾಷೆಯಲ್ಲಿ ಬೀಫ್ ಎಂದು ಕರೆಯಲ್ಪಡುವ ಗೋಮಾಂಸವನ್ನು ಚಪ್ಪರಿಸಿ ತಿನ್ನಲು ಬ್ರಿಟಿಷರು ಮೊತ್ತ
ಮೊದಲ ಕಸಾಯಿಖಾನೆಯನ್ನು ಕಲ್ಕತ್ತಾದಲ್ಲಿ ಕಟ್ಟಿಸಿದರು. ಅದರ ಹಿಂದೆಯೇ ನೂರಾರು ಕಸಾಯಿಖಾನೆಗಳು ಹುಟ್ಟಿಕೊಂಡವು.
ಮುಂದೆ ಸ್ವಾತಂತ್ರ್ಯ ಸಿಕ್ಕ ಮೇಲೆ, ತಿಲಕ್, ಮಾಳವೀಯ ಮುಂತಾದವರು ಪ್ರತಿಭಟಿಸಿದರೂ ಉಪಯೋಗವಾಗಲಿಲ್ಲ.
ಉಳಿದವರದ್ದು ಬಿಡಿ, ಮಹಾತ್ಮ ಗಾಂಧಿಯ ಹೋರಾಟಕ್ಕೂ ಕಾಂಗ್ರೆಸ್ ಕ್ಯಾರೇ ಎನ್ನಲಿಲ್ಲ. ಶಾಸ್ತ್ರಕ್ಕೆಂಬಂತೆ
ಅನುಚ್ಛೇದ 48ರ ರಚನೆಯಾಯಿತಾದರೂ ಅದು ಗೋಹತ್ಯೆಯನ್ನು ನಿರ್ಬಂಧಿಸಲಿಲ್ಲ. ಜೊತೆಗೆ, ರಾಜ್ಯಗಳಿಗೆಲ್ಲ
ಗೋಹತ್ಯೆಯ ಕುರಿತ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೂ ದಯಪಾಲಿಸಿತು. ಪರಿಣಾಮವೇನಾಗಿದೆ
ಗೊತ್ತೇ?
ಇಂದು ಕೇರಳ ಹಾಗೂ ಪಶ್ಚಿಮಬಂಗಾಳ ಗೋಹತ್ಯೆಗೆ ಅಧಿಕೃತವಾಗಿ ಒಪ್ಪಿಗೆ
ನೀಡಿವೆ. ಉಳಿದ ರಾಜ್ಯಗಳಲ್ಲಿ ಇದು ಅನಧಿಕೃತವಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ, ಯಡಿಯೂರಪ್ಪನವರ
ಸರ್ಕಾರ ಇದ್ದಾಗ ಗೋ ಹತ್ಯೆಗೆ ನಿಷೇಧವಿತ್ತು. ಸಿದ್ಧರಾಮಯ್ಯನವರು ಕುರ್ಚಿ ಏರಿದ ತಕ್ಷಣ ಮಾಡಿದ ಮೊದಲ
ಕೆಲಸವೇ ನಿಷೇಧವನ್ನು ಹಿಂಪಡೆದದ್ದು! ಅಲ್ಲವೇ ಮತ್ತೆ, ಕಾಂಗ್ರೆಸ್ನ ರಾಜಕೀಯ ಎಂದಮೇಲೆ ಅಲ್ಪಸಂಖ್ಯಾತರ
ಓಲೈಕೆ ಇರದಿದ್ದರೆ ಹೇಗೆ? ಈಗ ದೇಶದೆಲ್ಲೆಡೆ ಕದ್ದು ಮುಚ್ಚಿ, ಅಪರಾತ್ರಿಯಲ್ಲಿ ಗೋವುಗಳನ್ನು ಸಾಗಿಸಿ
ಕಟುಕರ ಕೈಗೆ ಒಪ್ಪಿಸಲಾಗುತ್ತಿದೆ. ಕಳ್ಳಸಾಗಣೆ ದೇಶದೊಳಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಗೋವುಗಳ
ಹಿಂಡು ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶವನ್ನೂ ತಲುಪುತ್ತಿವೆ. ಯಾವ ಪ್ರಮಾಣದಲ್ಲೆಂದರೆ, ಆ ದೇಶ ತಾನು
ಉಂಡು ಉಳಿದದ್ದನ್ನು ರಫ್ತು ಮಾಡುವಷ್ಟು! ದಿಲ್ಲಿಯೊಂದರಲ್ಲೇ 11ಸಾವಿರಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳಿವೆ
ಎಂದರೆ ಇನ್ನು ಉಳಿದ ನಗರಗಳಲ್ಲಿ ಎಷ್ಟಿರಬಹುದು? ನಿಮಗೆ ಗೊತ್ತಿದೆಯೋ ಇಲ್ಲವೋ, ಈ ಕಸಾಯಿಖಾನೆಗಳನ್ನು
ಹೆಚ್ಚಾಗಿ ತಲುಪುತ್ತಿರುವವು ಹಾಲು ಕರೆಯುವ ಮತ್ತು ಗಬ್ಬ(ಗರ್ಭಿಣಿ)ವಾದ ಹಸುಗಳೇ. ಅವುಗಳಿಗೆ ಯಾವ
ಸ್ಥಿತಿ ಬರುತ್ತದೆ ನೋಡಿ. ಒಂದು ಲಾರಿಯಲ್ಲಿ ನಾಲ್ಕು ಹಸುಗಳನ್ನು ಮಾತ್ರ ಕರೆದೊಯ್ಯಬೇಕೆಂಬುದು ನಿಯಮ.
ಆದರೆ ನಲವತ್ತಕ್ಕೂ ಹೆಚ್ಚು ಹಸು, ಕರುಗಳನ್ನು ತುಂಬುತ್ತಾರೆ. ನಿಲ್ಲಲಾಗದೆ ಕೂರಲಾಗದೆ ಚಡಪಡಿಸುವ
ಅವುಗಳು ಒಂದನ್ನೊಂದು ತಿವಿದುಕೊಂಡು ಅಲ್ಲೇ ಗಾಯಗೊಳ್ಳುತ್ತವೆ. ಹಲವು ಉಸಿರುಗಟ್ಟಿ ಸತ್ತೂ ಹೋಗುತ್ತವೆ.
ಅಪ್ಪಿ ತಪ್ಪಿ ಗಾಯವಾಗದೆ ಉಳಿದವು ಎಂದಿಟ್ಟುಕೊಳ್ಳಿ, ಇಳಿಸುವಾಗ ಲಾರಿಯಿಂದ ಕೆಳಗೆ ರಭಸವಾಗಿ ತಳ್ಳುತ್ತಾರಲ್ಲ,
ಆಗ ಕಾಲಿನ ಮೂಳೆಗಳು ಮುರಿದುಹೋಗುತ್ತವೆ. ಅಮೇಲೆ ಅವುಗಳಿಗೆ ಸಿಗುವ ರಾಜಾತಿಥ್ಯವನ್ನು ಹೇಗೆ ವರ್ಣಿಸುವುದು? ಹೇಳಿದ ಹಾಗೆ ಕೇಳುವುದಿಲ್ಲವೆಂದು
ಅವುಗಳ ಕಾಲು ಕಟ್ಟಿ, ಬಾಲ ಮುರಿದು, ಕಣ್ಣಿಗೆ ಹಸಿಮೆಣಸನ್ನೋ ತಂಬಾಕನ್ನೋ ತುರುಕುತ್ತಾರೆ. ಅವುಗಳೇನೋ
ಅಮ್ಮಾ ಎಂದು ಚೀರುತ್ತವೆ. ಕಟುಕರಿಗೆ ಕೇಳಬೇಕಲ್ಲ? ಹಸುಗಳ ಹಣೆಗೆ ಸುತ್ತಿಗೆಯಿಂದ ಹೊಡೆದು ಅಥವಾ ವಿದ್ಯುತ್
ಶಾಕ್ ಕೊಟ್ಟು ಮೂರ್ಛೆ ಹೋಗುವಂತೆ ಮಾಡುತ್ತಾರೆ. ನಂತರ ಅವುಗಳ ಕತ್ತನ್ನು ಚರಚರನೆ ಕೊಯ್ದು, ರಕ್ತವನ್ನು ಬಸಿಯುತ್ತಾರೆ. ಎಷ್ಟೋ ವೇಳೆ ಅವುಗಳ
ಚರ್ಮ ಸುಲಿಯುವಾಗ ಜೀವವೇ ಹೋಗಿರುವುದಿಲ್ಲ. ಇದಕ್ಕಿಂತ ಯಮಯಾತನೆ ಬೇಕೇ? ಗೋವುಗಳ ಪ್ರಾಣ ತೆಗೆಯುವ ಮತ್ತೂ ಒಂದು ವಿಧಕ್ಕೆ ಮುಸ್ಲಿಮರಲ್ಲಿ
ಬಹಳ ಬೇಡಿಕೆಯಿದೆ. ಅದೇ ಹಲಾಲ್! ಹರಿತವಾದ ಆಯುಧದಿಂದ ಗೋವಿನ ಕತ್ತನ್ನು (ಒಳಗಿರುವ ಧಮನಿಯನ್ನು) ಕೆಳಗಿನಿಂದ
ಮೇಲೆ ಸೀಳುತ್ತಾರೆ. ಆಗ ಅಶುದ್ಧ ರಕ್ತ ಬಸಿದು ಹೋಗುತ್ತದೆ. ರಕ್ತ ಪೂರ್ತಿ ಹೋಗುವವರೆಗೂ ವಿಲವಿಲನೆ
ಒದ್ದಾಡುವ ಗೋವು ನಂತರ ಸಾಯುತ್ತದೆ! ಹೀಗೆ ಶುದ್ಧ ಮಾಡಲ್ಪಟ್ಟ ಗೋವಿನ ಮಾಂಸ ಪವಿತ್ರವಂತೆ! ಯಾವ ಪ್ರಾಣಿಯ
ಹಾಲು, ಮೊಸರು, ಬೆಣ್ಣೆಗಳನ್ನುಂಡು ಬೆಳೆಯುತ್ತಾರೋ ಅದರ ರಕ್ತವನ್ನೇ ಬಸಿಯುವುದು ಮಾನವೀಯತೆಯ ಅಳತೆಗೋಲಲ್ಲಿ
ಪವಿತ್ರವೇ?
ಗೋಮಾಂಸಕ್ಕಾಗಿ ಮುಗಿಬೀಳುತ್ತಿರುವ ಭಾರತೀಯ ಹಾಗೂ ವಿದೇಶೀ ಮುಸ್ಲಿಮರ
ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಣಾಮ, ಇಂದು ಭಾರತ ಗೋಮಾಂಸದ ಭಕ್ಷಣೆ ಹಾಗೂ ರಫ್ತಿನಲ್ಲಿ ಅಗ್ರಸ್ಥಾನಕ್ಕೇರುತ್ತಿದೆ.
ಆಯಾ ದೇಶದ ಬೇಡಿಕೆಗನುಗುಣವಾಗಿ ಗೋಹತ್ಯೆ ನಡೆಯುತ್ತಿದೆ. ಉದಾಹರಣೆಗೆ, ಅರಬ್ ದೇಶಗಳ ಮುಸ್ಲಿಮರಿಗೆ
ಹಾಲು ಕರೆಯುವ ಹಸುವಿನ ಮಾಂಸ ಮಾತ್ರವೇ ಬೇಕು. ಆದ್ದರಿಂದ ಹಸುವನ್ನು ಕಡಿಯುವ ಮೊದಲು ಅದರ ಹಾಲು ಕರೆದು
ಆ ವೀಡಿಯೋವನ್ನು ಚಿತ್ರೀಕರಿಸಲಾಗುತ್ತದೆ. ನಂತರ ಅದನ್ನು ಮಾಂಸದೊಡನೆ ಇಟ್ಟು ಕಳಿಸಲಾಗುತ್ತದೆ. ತಿನ್ನುವವನಿಗೆ
ಖಾತರಿಯಾಗಬೇಕಲ್ಲ ಅದರ ಕೆಚ್ಚಲಲ್ಲಿ ಹಾಲಿತ್ತು ಎಂಬುದು! ಅಷ್ಟೇ ಅಲ್ಲ, ಕೆಲವೊಮ್ಮೆ ಕೆಚ್ಚಲನ್ನೂ
ಹಾಗೇ ಇಟ್ಟು ಕಳಿಸಲಾಗುತ್ತದೆ. ಎಂಥ ಲಜ್ಜೆಗೇಡಿತನ ಇದು?
ಏಕೆ ಹೆಚ್ಚುತ್ತಿದೆ ಈ ಪೈಶಾಚಿಕತೆ? ಧರ್ಮವಂತೂ ಖಂಡಿತ ಕಾರಣವಲ್ಲ.
ಗೋಮಾಂಸವನ್ನು ತಿನ್ನಲೇಬೇಕೆಂದು ಯಾವ ಧರ್ಮದಲ್ಲೂ ಹೇಳಿಲ್ಲ. ಹಾಗಿದ್ದ ಮೇಲೆ ಈ ನೆಪವೇಕೆ? ಧರ್ಮದ
ಸೋಗು ಹಾಕುವ ಮಂದಿ ತಮ್ಮ ಧರ್ಮದಲ್ಲಿ ಹೇಳಿರುವುದೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆಯೇ?
ಇಲ್ಲಿ ಮುಸ್ಲಿಮರು ತಿಳಿಯಲೇಬೇಕಾದ ಕೆಲ ವಿಷಯಗಳಿವೆ. ಹಿಂದೂಗಳು ಗೋವಿನ ಉಳಿವಿಗಾಗಿ ಹಂಬಲಿಸುತ್ತಿರುವುದು
ಮೂಢನಂಬಿಕೆಗಳಿಂದಾಗಿ ಅಲ್ಲ, ವೈಜ್ಞಾನಿಕ ಕಾರಣಗಳಿಂದಾಗಿ. ಉದಾಹರಣೆಗೆ, ನಮಗೆ 72ಸಾವಿರ ನಾಡಿಗಳಿವೆಯಲ್ಲ,
ಹಾಗೆಯೇ ಗೋವುಗಳಿಗೂ ನಾಡಿಗಳಿವೆ. ಅದರಲ್ಲೂ ಬೆನ್ನಿನ ಮೇಲೆ ಡುಬ್ಬವಿರುತ್ತದೆ ನೋಡಿ, ಬಹಳ ಚಮತ್ಕಾರಿ
ಅದರ ಹಿಂದಿರುವ ನಾಡಿ! ಗೋ ಎಂಬ ಪದದ ಮೂಲಾರ್ಥವೇ ಸೂರ್ಯ ರಶ್ಮಿ ಎಂಬುದು. ಸೂರ್ಯನ ಶಕ್ತಿಯನ್ನು ನಾಡಿಗಳ
ಮುಖೇನ ತಮ್ಮಲ್ಲಿ ಪ್ರವಹಿಸಿಕೊಳ್ಳುತ್ತವೆ ಗೋವುಗಳು. ಆ ಶಕ್ತಿ ಅವುಗಳ ದೇಹದ ವಿಶಿಷ್ಟ ರಚನೆಯೊಡನೆ
ಬೆರೆಯುವುದರಿಂದಲೇ ಔಷಧೀಯ ಗುಣಗಳು ಹೊಮ್ಮುವುದು. ಆದ್ದರಿಂದಲೇ ಮಲ, ಮೂತ್ರಗಳೆಲ್ಲವೂ ಕಲ್ಮಶರಹಿತ.
ಅಷ್ಟೇ ಏಕೆ, ಅವುಗಳ ಬೆವರುಗ್ರಂಥಿಗಳಿಂದ ವಸರುವ ದ್ರವ ವಾತಾವರಣದ ವಿಷಕಾರಿ ಅಂಶವನ್ನು ಸಾಯಿಸುತ್ತದೆ.
ಹಾಗಾಗಿಯೇ ಹಿಂದಿನ ಕಾಲದಲ್ಲಿ ಗೋ ಉತ್ಪತ್ತಿಯಿಲ್ಲದೆ ಯಾವ ಯಜ್ಞ-ಯಾಗಾದಿಗಳೂ, ದಾನ-ಧರ್ಮಗಳೂ ಪೂರೈಸುತ್ತಿರಲಿಲ್ಲ.
ಎಲ್ಲಕ್ಕಿಂತ ಮುಖ್ಯವಾದ ಅಂಶ, ಈ ಎಲ್ಲ ವೈಶಿಷ್ಟ್ಯಗಳೂ ಭಾರತೀಯ ತಳಿಗಳಲ್ಲಿ ಮಾತ್ರ ಲಭ್ಯ ಎಂಬುದು!
ಗೋವಿನ ಉತ್ಪನ್ನಗಳು ಬಹೋಪಯೋಗಿ ಎಂಬುದು ನಮಗೆ ಗೊತ್ತೇ ಇದೆ.
ಗೊತ್ತಿರದ ವಿಷಯಗಳೂ ಬಹಳಷ್ಟಿವೆ. ಗೋಮಯ, ವಿಕಿರಣ ಹಾಗೂ ಶಾಖವನ್ನು ತಡೆಗಟ್ಟಬಲ್ಲುದಂತೆ! ಗೋಮೂತ್ರ,
ಗೋಮಯ, ಹಾಲು, ಮೊಸರು ಹಾಗೂ ತುಪ್ಪಗಳ ಸಂಗಮವಾದ ಪಂಚಗವ್ಯಕ್ಕೆ ಔಷಧೀಯ ಗುಣಗಳಿರುವುದು ಈಗಾಗಲೇ ರುಜುವಾತಾಗಿದೆ.
ಗೋವಿನ ಬೆವರಿನ ವಾಸನೆ ನಮ್ಮ ಮಾನಸಿಕ ಸ್ಥಿಮಿತವನ್ನು ಕಾಪಾಡುತ್ತದೆ ಎನ್ನುತ್ತಾರೆ ಅಮೆರಿಕದ ಸಂಶೋಧಕರು!
ನಮ್ಮ ಗೋವುಗಳ ಮಹಿಮೆ 1960ರಷ್ಟು ಹಿಂದೆಯೇ ಬ್ರೆಜಿಲ್ಗೆ ತಿಳಿದಿತ್ತು. ಆಗಲೇ ಅದು ಗೀರ, ಕಾಂಕರೇಜ
ಹಾಗೂ ಒಂಗೋಳೆ ತಳಿಗಳನ್ನು ಆಮದು ಮಾಡಿಕೊಂಡಿತ್ತು. ಇಂದಿಗೂ ಅಗತ್ಯ ಬಿದ್ದಾಗಲೆಲ್ಲ ಭ್ರೂಣಗಳನ್ನು
ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ಭಾರತೀಯ ತಳಿಗಳೆಲ್ಲಾ ಅಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಅಲ್ಲಿಂದಲೇ ವಿದೇಶಗಳಿಗೆ ರಫ್ತಾಗುತ್ತಿವೆ!
ಹೈನುಗಾರಿಕೆ ಸಮೃದ್ಧವಾಗಿ ನಡೆಯುತ್ತಿದೆ. ನಾವೇನು ಮಾಡುತ್ತಿದ್ದೇವೆ? ಹಿತ್ತಲ ಗಿಡ ಮದ್ದಲ್ಲ ನೋಡಿ,
ಅಳಿದುಳಿದ ತಳಿಗಳನ್ನೆಲ್ಲಾ ಕಡಿದು ಹಾಕುತ್ತಿದ್ದೇವೆ. ಸಂಕಟವಾಗುವುದಿಲ್ಲವೇ? ಇಂದು ಕೃಷ್ಣನ ಮಥುರೆಯಲ್ಲಿ
ಕರುಗಳೇ ಉಳಿದಿಲ್ಲ. ಬಿಹಾರ ಉತ್ತರಪ್ರದೇಶಗಳಲ್ಲಿ ಹಳ್ಳಿಗರು ಹಸುಗಳನ್ನು ಸಾಕುತ್ತಲೇ ಇಲ್ಲ. ಗೋಶಾಲೆಗಳೆಲ್ಲ
ಬಿಕೋ ಎನ್ನುತ್ತಿವೆ. ಹೀಗೇ ಆದರೆ ಮುಂದೆ ಕೊಬ್ಬಿದ ಮೈಯ ವಿದೇಶೀ ಜರ್ಸಿ ಹಸುಗಳೇ ಗತಿ!
ಗೋವು ಅಮೂಲ್ಯವಾದ, ರಾಷ್ಟ್ರೀಯ ಸಂಪತ್ತು ಎಂಬುದು ನಮಗೆ ಅರಿವಾಗುವುದು
ಯಾವಾಗ? ಅದರಲ್ಲಿ ಅಡಕವಾಗಿರುವ, ನಮ್ಮ ಪ್ರಗತಿಗೆ ಪೂರಕವಾದ ವೈಜ್ಞಾನಿಕ ಅಂಶಗಳ ಸಂಶೋಧನೆಗೆ ಒತ್ತು ಸಿಗುವಂತೆ ಮಾಡುವುದು ಹೇಗೆ? ಮುಂದೊಂದು ದಿನ ಮೃಗಾಲಯದಲ್ಲಿ ಗೋವುಗಳನ್ನು ನೋಡಬೇಕಾಗಿ
ಬರುವುದು ಎಲ್ಲರಿಗೂ ಸಮ್ಮತವೇ? ಅಲ್ಪ ಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂದು ಗೋಹತ್ಯೆ ಕೈಬಿಡಲು
ಎಷ್ಟು ದಿನ ಹಿಂದೇಟು ಹಾಕುವುದು? ಗೋವನ್ನು ಉಳಿಸಿಕೊಂಡರೆ ಹಿಂದೂ ಧರ್ಮೀಯರೊಡನೆ ಸೌಹಾರ್ದ ಹೆಚ್ಚುವುದೇ
ಅಲ್ಲದೆ ಅದರ ಪ್ರಯೋಜನಗಳನ್ನು ಅವರೂ ಪಡೆಯಲಿದ್ದಾರೆ ಎಂದು ಮನವರಿಕೆ ಮಾಡಿಕೊಡುವುದು ಇಂದಿನ ಅಗತ್ಯವಲ್ಲವೇ?
ಒಂದು ವಿಷಯ ನೆನಪಿಡಿ. ಹೀಗೆ ಹಟಕೆ ಬಿದ್ದು ತಿಂದು ಮುಗಿಸಿದರೆ ಗೋವುಗಳಿಗೆ ಯಾವ ಪರ್ಯಾಯವೂ ಇಲ್ಲ.
ಓಲೈಕೆ ಮಾಡುವ ರಾಜಕಾರಣಿಗಳು ಬೆಳಗಾಗೆದ್ದರೆ ಹಾಲು ಕೊಡುವುದಿಲ್ಲ. ಕಲಬೆರಕೆ ಹಾಲನ್ನು ಕುಡಿದು ರೋಗ
ಬರಿಸಿಕೊಳ್ಳುವ ದರಿದ್ರ ನಮಗೇನೂ ಬಂದಿಲ್ಲ.
ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಪುಣ್ಯಕೋಟಿಯ
ಕಥೆಯನ್ನು ಕೇಳಿದೊಡನೆ ಕಣ್ಣಲ್ಲಿ ನೀರು ತಂದುಕೊಳ್ಳುವ ಹಿಂದೂಗಳಿಗೆ, ಗೋಹತ್ಯೆಯ ಮೂಲಕ ಈ ಪರಿಯ ಹಿಂಸೆಯನ್ನು
ನೀಡಲೇಬೇಕೇ? ಧಾರ್ಮಿಕ ಕಾರಣ ಒತ್ತಟ್ಟಿಗಿರಲಿ, ಇದು ವೈಜ್ಞಾನಿಕವಾಗಿ ನಮಗೆ ಸಿಕ್ಕಿರುವ ಉತ್ಕೃಷ್ಟವಾದ
ಉಡುಗೊರೆ ಎನ್ನುವ ಕಾರಣಕ್ಕಾದರೂ ಹತ್ಯೆ ನಿಂತೀತೇ? ಅಥವಾ ಅಸಹಾಯಕ ಗೋವುಗಳ ಜಾಗದಲ್ಲಿ, ಹಾಲೂಡಿಸಿದ
ತಾಯಂದಿರನ್ನು ಕಲ್ಪಿಸಿಕೊಂಡರೆ ಗೋಮಾಂಸದ ಚಪಲ ಕೊನೆಯಾದೀತೇ?
No comments:
Post a Comment