Friday 12 December 2014

'ಪವರ್ ಟು ಚೇಂಜ್' - ಏನನ್ನು ಬದಲಾಯಿಸುವ ಹವಣಿಕೆ ಇದು?

ಕೆಲ ದಿನಗಳ ಹಿಂದೆ ಎಲ್ಲ ಪತ್ರಿಕೆಗಳ ಮುಖಪುಟದಲ್ಲೂ ಈ ಜಾಹೀರಾತಿನದ್ದೇ ವೈಭವ! ರಸ್ತೆ ಬದಿಯ ಹೋರ್ಡಿಂಗ್‍ಗಳಲ್ಲೂ ಇದರದ್ದೇ ನರ್ತನ! 'ಪವರ್ ಟು ಚೇಂಜ್' ಎಂಬ ತಲೆಬರಹ ನೋಡಿದೊಡನೆ, ಅದೇನೆಂಬ ಕುತೂಹಲ ಹುಟ್ಟಿಸುವ ಜಾಣತನ. ತಮ್ಮ ಜೀವನವನ್ನು ಬದಲಾಯಿಸಿಕೊಂಡು ನಮ್ಮನ್ನೂ ಬದಲಾಯಿಸಲು ತುದಿಗಾಲಲ್ಲಿ ನಿಂತಿರುವ ಮಂದಸ್ಮಿತ ದೇವದೂತ(ಭೂತ?)ರುಗಳ ದರ್ಶನ. ತಕ್ಷಣವೇ ಗೊತ್ತಾಗಿ ಹೋಯಿತು, ಇದು ಕ್ರೈಸ್ತರ, ಮತಾಂತರದ ಹೊಸ ಅವತಾರ ಎಂದು. ಆದರೆ ಈ ಅವತಾರದಲ್ಲೇನು ವಿಶೇಷ ಎಂಬುದು ಮಾತ್ರ ಅರ್ಥವಾಗಿರಲಿಲ್ಲ. ಈಗ ಅವರಿಗೇ ಫೋನ್ ಮಾಡಿ ಮಾತನಾಡಿದ ಮೇಲೆ ಅರ್ಥವಾಗುತ್ತಿದೆ ಎಲ್ಲಾ. ಆ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಈ ಲೇಖನ. ಜೊತೆಗೇ ಹಲವಾರು ಪ್ರಶ್ನೆಗಳ ಮಂಥನ. ಓದಿದ ಮೇಲೆ ಹೇಳುತ್ತೀರಾ, ನಾವಿಡಬೇಕಾದ ಮುಂದಿನ ಹೆಜ್ಜೆಯನ್ನ?


ಬದಲಾವಣೆಯ ಆಶ್ವಾಸನೆ ನೀಡುವ ಜಾಹೀರಾತನ್ನು ನೋಡಿದೊಡನೆ ಅರ್ಥವಾಗುವುದು ಒಂದೇ - ಅಲ್ಲಿ ಕೊಟ್ಟಿರುವ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಉಚಿತ ಪುಸ್ತಕ ಸಿಗುತ್ತದೆಂಬುದು. ಅದರಂತೆಯೇ ಕರೆ ಮಾಡಿದ್ದಾಯಿತು. ಹೆಸರನ್ನು ನೋಂದಣಿ ಮಾಡಿಸಿ ಉಚಿತ ಪುಸ್ತಕಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾಯಿತು. ಪುಸ್ತಕ ಸಿಗಲು ಕಡೇ ಪಕ್ಷ ಹದಿನೈದು ದಿನಗಳಾದರೂ ಬೇಕಾಗುತ್ತವೆಂಬುದು ತಿಳಿದು ಬಂದಾಗ ಆಗಿದ್ದು ಭಾರೀ ನಿರಾಶೆ! ‘ಏನು ಮಾಡುವುದು, ಸಮಸ್ಯೆಗೆ ಸಮಾಧಾನ ಈ ತಕ್ಷಣವೇ ಬೇಕಾಗಿದೆಯಲ್ಲ’ ಎಂದು ಪೇಚಾಡಿಕೊಂಡಿದ್ದಕ್ಕೆ, ಫೋನಿನಲ್ಲಿ ಮಾತನಾಡುತ್ತಿದ್ದ ಅವರ ಪ್ರತಿನಿಧಿ ಸಮಸ್ಯೆಯ ಸ್ವರೂಪವನ್ನು ಕೇಳಿದರು. ಕಛೇರಿಯ ಸಮಸ್ಯೆ, ಸಹೋದ್ಯೋಗಿಗಳೊಂದಿಗೆ ಸರಿಯಾಗಿ ವ್ಯವಹರಿಸಲಾಗದ ಸಮಸ್ಯೆ ಎಂದು ಹೇಳಿದ್ದನ್ನು ಯಥಾವತ್ತಾಗಿ ಬರೆದುಕೊಂಡರು! ಮತ್ತೇನಾದರೂ ಸಮಸ್ಯೆಗಳಿವೆಯಾ ಎಂದು ಕಳಕಳಿಯಿಂದ ವಿಚಾರಿಸಿದರು. ಇಲ್ಲವೆಂದು ಹೇಳಿದಾಗ, 'ನಿಮ್ಮ ಸಮಸ್ಯೆ ಏನೇ ಇದ್ದರೂ ನಿವಾರಣೆಯಾಗುತ್ತದೆ, ನಿಮ್ಮ ಜೀವನ ಬದಲಾಗುತ್ತದೆ, ಯೋಚಿಸಬೇಡಿ. ನಿಮಗೆ ಶುಭವಾಗಲಿ' ಎಂದು ಹೇಳಿದರು. ಹಾಗೇ 'ನಮ್ಮ ಸಲಹೆಗಾರರೊಬ್ಬರು ನಿಮ್ಮನ್ನು ಸದ್ಯದಲ್ಲೇ ಸಂಪರ್ಕಿಸುತ್ತಾರೆ’ ಎಂದೂ ತಿಳಿಸಿದರು'! ಅಲ್ಲಿಗೆ ಒಂದು ಹಂತ ಮುಗಿದಿತ್ತು.

ಇನ್ನು ಅವರು ಸಂಪರ್ಕಿಸುವುದು ಯಾವ ಕಾಲಕ್ಕೋ, ಕಾದು ನೋಡಿದರಾಯಿತು ಎಂದುಕೊಂಡರೆ, ಅರ್ಧ ಘಂಟೆಯೊಳಗೇ ಸಲಹಾಕಾರರ ಕರೆ. ಆತ್ಮೀಯವೆನಿಸುವ, ವಿನಮ್ರ ದನಿ. ತಮ್ಮ ಹೆಸರನ್ನು ಹೇಳಿ ಪರಿಚಯಿಸಿಕೊಂಡು ವಿಷಯಪ್ರವೇಶ ಮಾಡಿಯೇಬಿಟ್ಟರು.  'ಮೊದಲೇ ಹೇಳಿಬಿಡುತ್ತೇನೆ. ನನ್ನ ಸಮಸ್ಯೆ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ನಿಮ್ಮ ಉತ್ತರದಲ್ಲೂ ಧರ್ಮದ ಲೇಪವಿರಕೂಡದು' ಎಂದು ಖಡಕ್ಕಾಗಿ ಹೇಳಿದೊಡನೆಯೇ ಎಚ್ಚೆತ್ತರು ಆತ. 'ಛೆ ಖಂಡಿತಾ ಇಲ್ಲ. ಧರ್ಮ ಹಾಗೂ ದೇವರು ಎರಡೂ ಒಂದೇ ಎಂದು ನೀವು ತಪ್ಪು ತಿಳಿದಿದ್ದೀರ. ಧರ್ಮಕ್ಕೂ ದೇವರಿಗೂ ಇರುವ ವ್ಯತ್ಯಾಸ ನಿಮಗೆ ತಿಳಿದೇ ಇಲ್ಲ. ನಾನು ಧಾರ್ಮಿಕ ವ್ಯಕ್ತಿಯಲ್ಲ, ಆದರೆ ದೇವರನ್ನು ನಂಬುತ್ತೇನೆ. ದೇವರನ್ನು ನೋಡುತ್ತಾ ಅವನೊಂದಿಗೆ ಮಾತನಾಡುತ್ತೇನೆ. ಈಗ ನಿಮಗೆ ಅದರಲ್ಲಿ ಆಸಕ್ತಿ ಇಲ್ಲವಾದ್ದರಿಂದ ಮೊದಲು ನಿಮ್ಮ ಕಛೇರಿಯ ಸಮಸ್ಯೆಯನ್ನು ಪರಿಹರಿಸೋಣ. ನಿಮಗೆ ದೇವರ ವಿಷಯ ಮಾತನಾಡಬೇಕು ಎನಿಸುವವರೆಗೂ ದೇವರಾಣೆಗೂ ನಾನು ಅದನ್ನು ತೆಗೆಯುವುದಿಲ್ಲ' ಎಂದರು! ಆಮೇಲೆ ಕಛೇರಿಯ ಸಮಸ್ಯೆಯ ನೆಪದಲ್ಲಿ ಅವರೊಡನೆ ಸ್ವಲ್ಪ ಹೊತ್ತು ಸಂಭಾಷಿಸಿದ್ದಾಯಿತು. ಕೊನೆಯಲ್ಲಿ ಅವರು 'ನೀವು ಯಾವುದೇ ಸಂಕಷ್ಟಕ್ಕೆ ಸಿಲುಕಿದರೂ, ಯಾವ ಹೊತ್ತಿನಲ್ಲಾದರೂ ನನಗೆ ಕರೆ ಮಾಡಲು ಹಿಂದೆ ಮುಂದೆ ನೋಡಬೇಡಿ. ನಾನೊಂದು ಪಕ್ಷ ಕರೆ ಸ್ವೀಕರಿಸದಿದ್ದರೂ ನಂತರ ನಿಮಗೆ ನಾನೇ ಕರೆ ಮಾಡುತ್ತೇನೆ. ನಿಮ್ಮ ಕಷ್ಟಗಳನ್ನು ಪರಿಹರಿಸಲು ನಾನು ಸದಾ ಸಿದ್ಧ. ದೇವರು ನಿಮಗೆ ಒಳ್ಳೆಯದು ಮಾಡಲಿ' ಎಂದು ಹೇಳಿ ಮಾತು ಮುಗಿಸಿದರು.


ಹೌದು. ಮೊದಲ ಸುತ್ತಿನ ಮಾತುಗಳೇನೋ ಮುಗಿದಿವೆ, ಆದರೆ ಆಗಿನಿಂದ ತಲೆಯ ತುಂಬಾ ಅಶಾಂತಿಯೆಂಬ ಜೇನು ಹುಳುಗಳು ಗುಂಯ್‍ಗುಡುತ್ತಿವೆ. ಮನಸ್ಸನ್ನು ಕಚ್ಚಿ ಗಾಯಗೊಳಿಸುತ್ತಿವೆ. ಅವರಿಗೆ ಕರೆ ಮಾಡುವ ಮುನ್ನವೇ ಇದು ಮತಾಂತರದ ಹುನ್ನಾರ ಎಂಬುದು ಗೊತ್ತಿತ್ತು. ಅವರ ವೆಬ್‍ಸೈಟನ್ನು ನೋಡಿ, ಅದರಲ್ಲಿರುವವರು ಹೇಳುವ, ತಮ್ಮ ಜೀವನದಲ್ಲಿ ಏನುಕ್ರಿಸ್ತನಿಂದಾದ ಪವಾಡಗಳ ಕಥೆಗಳನ್ನು ಕೇಳಿದಾಗಲೇ ಎಲ್ಲವೂ ಸ್ಪಷ್ಟವಾಗಿತ್ತು. ಆದರೆ ನಿಜವಾಗಿಯೂ ದಿಗಿಲಾಗಿದ್ದು ಅವರ ನಂಬರಿಗೆ ಕರೆ ಮಾಡಿ ಮಾತನಾಡಿದಾಗ. ಒಂದಿಡೀ ಟೋಲ್‍ಫ್ರೀ ವ್ಯವಸ್ಥೆಯನ್ನು ಎಷ್ಟು ಅಚ್ಚುಕಟ್ಟಾಗಿ ಅಣಿ ಮಾಡಿಕೊಂಡಿದ್ದಾರೆ ಗೊತ್ತೇ? ಏರ್‍ಟೆಲ್ ಅಥವಾ ಬೇರೆ ಕಾಲ್ ಸೆಂಟರಿಗೆ ಕರೆ ಮಾಡಿದಾಗ ಕೇಳುತ್ತದಲ್ಲ ಗೌಜು ಗದ್ದಲ, ಇಲ್ಲೂ ಅದೇ ವಾತಾವರಣ. ನಮ್ಮ ಹೆಸರು, ವಿಳಾಸಗಳನ್ನೆಲ್ಲ ಶೇಖರಿಸಿಡುವ ಡೇಟಾಬೇಸ್! ನಮ್ಮ ಸಮಸ್ಯೆಗಳನ್ನು ಅಲ್ಲೇ ಬರೆದುಕೊಂಡು ತತ್‍ಕ್ಷಣವೇ ಆಪ್ತ ಸಲಹೆಗಾರರಿಗೆ ಮುಟ್ಟಿಸುವ ಚುರುಕು ವ್ಯವಸ್ಥೆ. ನಿಂತನಿಲುವಿನಲ್ಲೇ ಸ್ಪಂದಿಸುವ ಆಪ್ತ ಸಲಹೆಗಾರರು. ಜೊತೆಗೆ, 'ನಿಮ್ಮ ಎಲ್ಲ ಕಷ್ಟಗಳಿಗೂ ನಾನಿದ್ದೇನೆ ಬಿಡಿ, ಚಿಂತಿಸಬೇಡಿ' ಎಂದು ಫೋನಿನಲ್ಲೇ ಕೈಹಿಡಿದು ಹೇಳಿಬಿಡುವ ಅವರ ಅಕ್ಕರೆಯ ಧಾಟಿ! ಇದಕ್ಕಿಂತ ಏನು ಬೇಕು ಅಧೀರವಾದ ಮನಸ್ಸು ಕರಗಲು? ದುಃಖವನ್ನೆಲ್ಲ ಅವರಲ್ಲಿ ತೋಡಿಕೊಂಡು ನೀರಾಗಲು?

ಇಲ್ಲಿ ಕೇಳಿ, ಈಗ ಬಂದಿದೆಯಲ್ಲ, ಇದು ಪ್ರಚಂಡ ರೂಪ. ಇಲ್ಲಿಯವರೆಗೂ ಬರೀ ಅನಕ್ಷರಸ್ಥರನ್ನು, ಕಡು ಬಡವರನ್ನು, ಹಿಂದುಳಿದವರನ್ನು ವ್ಯವಸ್ಥಿತವಾಗಿ ಮತಾಂತರಗೊಳಿಸುತ್ತಿದ್ದ ಕ್ರೈಸ್ತ ಮಿಷನರಿಗಳು ಈಗ ಗುರಿಯಾಗಿಸಿಕೊಂಡಿರುವುದು ಹಿಂದೂ ಸಮುದಾಯದ ಬುದ್ಧಿವಂತ, ಪ್ರತಿಭಾವಂತ ಮಧ್ಯಮ ವರ್ಗವನ್ನು! ಹಿಂದುಳಿದವರಲ್ಲಿ ಇವರು ಬದಲಾಯಿಸುವುದು ಬರೀ ಧರ್ಮವನ್ನಾದರೆ ನಮ್ಮ ವಿಷಯದಲ್ಲಿ ಬದುಕನ್ನೇ ಬದಲಾಯಿಸಲು ಹೊರಟಿದ್ದಾರೆ. ಅವಿದ್ಯಾವಂತರಿಗೇನೋ ಧರ್ಮದ ಹೆಸರಿನ ಮಖ್ಮಲ್ ಟೊಪಿ ಹಾಕಬಹುದು. ವಿದ್ಯಾವಂತರಿಗೆ ಹಾಗಲ್ಲವಲ್ಲ, ಆದ್ದರಿಂದ ಅವರಿಗೆ ದೇವರ ಹೆಸರಿನಲ್ಲಿ ಶಾಲು ಹೊದೆಸಿ ಸನ್ಮಾನ ಮಾಡುವ ಹುನ್ನಾರ. ಧರ್ಮವೇ ಬೇರೆ ದೇವರೇ ಬೇರೆ ಎಂಬ ಹೊಸ ವ್ಯಾಖ್ಯಾನದೊಂದಿಗೆ ನಮ್ಮ ಚಿಂತನೆ, ರೀತಿ, ಜೀವನಕ್ರಮಗಳ ಮೇಲೆ ಹಿಡಿತಹೊಂದಲು ಇವರು ಆಪ್ತಮಿತ್ರರಾಗಿ, ಆಪ್ತರಕ್ಷಕರಾಗಿ ಬರುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸಲಹೆಗಾರರಾಗಿ ಶಾಶ್ವತವಾಗಿ ನಮ್ಮ ಬದುಕಿನಲ್ಲಿ, ಮನಸಿನಲ್ಲಿ ನೆಲೆಯೂರುವ ಪ್ರಯತ್ನ ಇವರದ್ದು. ಇವರು ತಮ್ಮ ವೆಬ್‍ಸೈಟಿನಲ್ಲಿ ಹಾಕಿಕೊಂಡಿರುವ ವಿಡಿಯೋಗಳನ್ನು ದಯವಿಟ್ಟು ಒಮ್ಮೆ ನೋಡಿ, ಕೇಳಿ. ಅದರಲ್ಲಿ, ಬ್ರಾಹ್ಮಣನಿದ್ದಾನೆ, ಗೌಡತಿಯಿದ್ದಾಳೆ, ತಮಿಳನಿದ್ದಾನೆ, ಸಂಗೀತಗಾರ, ಹಾಸ್ಯನಟ, ಮಾಜಿ ಪೋಲೀಸ್ ಅಧಿಕಾರಿ ಎಲ್ಲರೂ ಇದ್ದಾರೆ. ಸಮಾಜದಲ್ಲಿ ಉನ್ನತ ಸ್ತರದಲ್ಲಿರುವವರು ಆ ವಿಡಿಯೋದಲ್ಲಿ ಹೀರೋ ಹೀರೋಯಿನ್‍ಗಳಂತೆ ಕುಳಿತು ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾರೆ.

ಎಂಥವು ಎಂದುಕೊಂಡಿರಿ? ಅವೇ ಹಳಸಲು ಕಥೆಗಳು. ಭೂತ ಪ್ರೇತಗಳ ಕಾಟದ ಕಥೆ ಒಬ್ಬಾಕೆಯದ್ದಾದರೆ, ಮತ್ತೊಬ್ಬನದು ಅತೀವ ಮಡಿವಂತಿಕೆಯ ಕುಟುಂಬದ್ದು. ಒಬ್ಬರದ್ದು ಬಡತನ, ಆತ್ಮಹತ್ಯೆಗಳ ವಿಷಯವಾದರೆ ಮತ್ತೊಬ್ಬರದು ಮಾದಕ ವ್ಯಸನಕ್ಕೆ ಅಂಟಿಕೊಂಡ ಕಥೆ. ಇದರಲ್ಲಿ ಹೊಸದೇನಿದೆ? ಏನೂ ಇಲ್ಲ. ಒಳಗೆ ಅದೇ ತಂಗಳು ಚಿತ್ರಾನ್ನ. ಹೊರಗಿನ ಪೇಪರ್ ಮಾತ್ರ ರಂಗು ರಂಗಾಗಿ ನೋಡಲು ಚೆನ್ನ! ಕೊನೆಯಲ್ಲಿ ಎಲ್ಲರೂ ಹೇಳುವುದು ಒಂದೇ. ಏಸುವನ್ನು ಪೂಜಿಸಲು ಶುರುಮಾಡಿದಾಗಿನಿಂದ ಬದುಕಿನಲ್ಲಿ ಖುಷಿಯೋ ಖುಷಿ. ಎಲ್ಲೆಲ್ಲೂ ಪರಮಾನಂದ! ಅವರ ಕೃತಕ ಭಾವ ಭಂಗಿಗಳನ್ನು, ವಿಷಯವನ್ನು ವೈಭವೀಕರಿಸಿ ಹೇಳುವ ರೀತಿಯನ್ನು ನೋಡಿ ವಿಪರೀತ ನಗು ಬರುತ್ತದೆ. ಬದುಕಿನ ಕಷ್ಟದ ಘಳಿಗೆಗಳನ್ನು ನಿಭಾಯಿಸಲು ಬಾರದ ಅಳ್ಳೆದೆಯವರು ಹೆಮ್ಮೆಯಿಂದ ಹೇಳಿಕೊಳ್ಳುವ ಇದು ಖಂಡಿತಾ ಸಾಧನೆ ಅಲ್ಲವೇ ಅಲ್ಲ. ಆದರೆ ದಿಗಿಲೂ ಆಗುತ್ತದೆ. ಇಂಥವೇ ಪರಿಸ್ಥಿತಿಗಳನ್ನು ಎದುರಿಸುತ್ತಿರುವ, ದುರ್ಬಲ ಮನಸ್ಸಿನ ಹಲವರು ನಮ್ಮ-ನಿಮ್ಮ ನಡುವೆಯೇ ಇದ್ದಾರೆ. ಅವರೆಲ್ಲ ಇದೇ ಹಾದಿಯನ್ನು ಹಿಡಿದರೆ? ದೇವರನ್ನು ಮಾತ್ರ ಬದಲಾಯಿಸುವುದು ತಾನೆ, ಧರ್ಮ ಹೇಗೂ ಇದೇ ಆಗಿರುತ್ತದಲ್ಲ ಎಂಬ ವಿಷವ್ಯೂಹಕ್ಕೆ ಸಿಲುಕಿದರೆ? ಉಹೂಂ, ಹೊರಬರಲಾಗುವುದಿಲ್ಲ. ಮೊದಲು ದೇವರನ್ನು ನುಂಗುವ ರಕ್ಕಸ ಕೊನೆಗೆ ಧರ್ಮವನ್ನೂ ತಿಂದು ತೇಗುತ್ತಾನೆ!

ಇದನ್ನು ಎಲ್ಲರೂ ನೋಡುತ್ತಿದ್ದಾರೆ. ಮಾಧ್ಯಮದವರು, ರಾಜಕಾರಣಿಗಳು, ಸೆಕ್ಯುಲರ್ ಮಂದಿ ಎಲ್ಲರೂ. ಯಾರೂ ತುಟಿಪಿಟಕ್ಕೆನ್ನುತ್ತಿಲ್ಲ. ಅವರ ಪ್ರಕಾರ ಇದು ಮತಾಂತರವಲ್ಲ. ಜನ ತಮ್ಮ ಇಚ್ಛೆಗನುಗುಣವಾಗಿ ಬದಲಾಗುವುದು ಮತಾಂತರ ಹೇಗಾದೀತು? ಅಲ್ಲವೇ ಮತ್ತೆ? ಇವೆಲ್ಲಾ ನಗಣ್ಯ. ಮೊನ್ನೆ ಆಗ್ರಾದಲ್ಲಿ 200 ಮುಸ್ಲಿಮರನ್ನು ಹಿಂದೂಗಳಾಗಿ ಮರುಮತಾಂತರಗೊಳಿಸಿದರಲ್ಲಾ ಅದು, ಅದು ಘೋರ ಅಪರಾಧ! ಮುಸ್ಲಿಮರಾಗಲಿ, ಕ್ರೈಸ್ತರಾಗಲಿ, ವಾಪಸ್ ಹಿಂದೂ ಧರ್ಮಕ್ಕೆ ಮರಳುವ ಹಾಗಿಲ್ಲ. ಸ್ವಇಚ್ಛೆಯಿಂದ ಮರಳಿದರೂ ಅದು ಬಲವಂತಕ್ಕೆ, ಸಾಮೂಹಿಕ ಅತ್ಯಾಚಾರಕ್ಕೆ ಸಮಾನ. ಆದರಿಂದಲೇ ಆ ಘಟನೆ ನಡೆಯುತ್ತಿದ್ದಂತೆಯೇ ಸಮಸ್ತ ಸೆಕ್ಯುಲರ್ ಮಂದಿಯೂ ಕುಂಡೆ ಸುಟ್ಟ ಬೆಕ್ಕಿನಂತೆ ಮಿಯಾಂವ್‍ಗುಡಲು ಶುರು ಮಾಡಿದ್ದು. ಸದನದಲ್ಲಿ ಕೋಲಾಹಲ, ಟಿವಿ ಚರ್ಚೆಗಳಲ್ಲಿ ಬೆಂಕಿಯ ಮಳೆ, ಎಲ್ಲೆಲ್ಲೂ ಕೋಮುವಾದದ ಕಾಡ್ಗಿಚ್ಚು! ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸೋಣ ಎಂದು ವೆಂಕಯ್ಯನಾಯ್ಡುರವರು ಹೇಳುತ್ತಿದ್ದಂತೆಯೇ ಎಲ್ಲರೂ ಸಿಟ್ಟಿನಲ್ಲಿ ದಾಪುಗಾಲು ಹಾಕಿಕೊಂಡು ಸದನದಿಂದ ಪೇರಿ!

ಅವರದ್ದು ಹಾಳಾಗಲಿ, ಈಗ ನಾವೇನು ಮಾಡಬೇಕು ಹೇಳಿ? ಒಂದೆಡೆ ರಕ್ತ ಪಿಪಾಸು ಮುಸ್ಲಿಂ ಭಯೋತ್ಪಾದಕರ ಹಾವಳಿಯಾದರೆ ಮತ್ತೊಂದೆಡೆ ನಯಗಾರಿಕೆಯಿಂದಲೇ ಬುಡಕ್ಕೆ ಕೊಡಲಿ ಹಾಕುವ ಕ್ರೈಸ್ತರು. ಇವರುಗಳು ಸಾಲದು ಎಂಬಂತೆ ಹಿಂದೂಗಳಲ್ಲೇ ಸೆಕ್ಯುಲರ್‍ಗಳು, ಬುದ್ಧಿಜೀವಿಗಳು ಹಾಗೂ ನಾಸ್ತಿಕರು. ಇನ್ನುಳಿದವರು ಯಾರು? ಕೋಮುವಾದಿಗಳ ಹಣೆಪಟ್ಟಿ ಹೊತ್ತ ಅಭಾಗ್ಯರು.

ಹಿಂದೂಗಳಾಗಿಯೇ ಇರಿ, ಆದರೆ ಏಸುವನ್ನು ಪ್ರೀತಿಸಿ ಎಂಬ ಈ 'ದೇವರನ್ನು ಬದಲಾಯಿಸುವ’ ಹೊಸ ತಂತ್ರಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು? ಈಗಾಗಲೇ ತಲೆಯ ಮೇಲಿರುವ ವಿಶಾಲಹೃದಯಿಗಳೆಂಬ ಕಿರೀಟವನ್ನು ಮತ್ತೊಮ್ಮೆ ಸರಿಮಾಡಿಕೊಂಡು ಕುಳಿತುಬಿಡಬೇಕಾ? ಹೀಗಾದರೆ ಹೇಗೆ ಉಳಿದೀತು ನಮ್ಮ ಧರ್ಮ, ದೇವರು? ನಾವಾಯಿತು ನಮ್ಮ ಕುಟುಂಬವಾಯಿತು ಎಂಬ ಧೋರಣೆಯನ್ನು ಬಿಡದಿದ್ದರೆ ನಮ್ಮತನವನ್ನು ಜತನ ಮಾಡುವವರು ಯಾರು? ನಮಗೇಕೆ ಈ ಉಸಾಬರಿ ಎಂದು ಈಗ ದೂರ ಉಳಿದರೆ ನಾಳೆ ಮನೆಯೊಳಗೆ ಬರದಿರುತ್ತಾಳೆಯೇ ಈ ಮಾರಿ? 'ಏಳಿ ಎದ್ದೇಳಿ' ಎಂದು ಸ್ವಾಮಿ ವಿವೇಕಾನಂದರು ಸ್ವಾಭಿಮಾನವನ್ನು ಬಡಿದೆಬ್ಬಿಸಲು ಅಂದು ಆಡಿದ್ದ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತಿಲ್ಲವೇ?

ವ್ಹಾರೆವ್ಹಾ ಏಸುಕ್ರಿಸ್ತ, ಒಟ್ಟಿನಲ್ಲಿ ನೀನೇ ಪುಣ್ಯವಂತ! 



1 comment:

  1. ಏಸು ಕ್ರಿಸ್ತ ದೇವರು ಹೇಗಾಗುತ್ತಾನೆ?
    ಮೈ ತುಂಬಾ ಮೊಳೆ ಹಿಡಿದುಕೊಂಡು ಹೀನಾತಿಹೀನವಾಗಿ ಸತ್ತ ನಾಯಿ ಯಾರನ್ನು ರಕ್ಷಿಸಬಲ್ಲದು? ಓ ಅಮಾಯಕ ಜನಗಳೆಲ್ಲ "ಅರ್ಧ ರೊಟ್ಟಿ ಕೊಡಿ,ಹಸಿವಾಗದ ಮಂತ್ರ ಕಲಿಸುತ್ತೇನೆ "ಎನ್ನುವ ಆ ಕ್ರೈಸ್ತ ಮಿಷನರಿಗಳು ಅಪ್ಪಟ ಗುಳ್ಳೇನರಿಗಳು! ಅವರು ನಿಮ್ಮ ಊರುಗಳಲ್ಲಿ ಬಂದರೆ ನಾಯಿಗೆ ಹೊಡೆದಂತೆ ಹೊಡೆದು ಕಳಿಸಿ!

    ReplyDelete