Wednesday 24 September 2014

ಲವ್ ಜಿಹಾದ್ ಎಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?


ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್! ಈ ಪದಗಳನ್ನು ಕೇಳಿದೊಡನೆ ಕಿವಿಗೆ ಕಾದ ಸೀಸೆಯನ್ನು ಸುರಿದ ಅನುಭವವಾಗುತ್ತದೆ. ಇದೊಂದು ಕಡಿಮೆಯಾಗಿತ್ತು ನಮಗೆ. ಧರ್ಮಾಂಧತೆಯ ಪರಾಕಾಷ್ಠೆಯಾದ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಇನ್ನೂ ತಿಣುಕಾಡುತ್ತಲೇ ಇದ್ದೇವೆ. ಅಷ್ಟರಲ್ಲೇ ಇಂಥದ್ದೊಂದು ಸಂಚಿಗೂ ಸನ್ನದ್ಧರಾಗಬೇಕಾಗಿ ಬಂದಿದೆ. ಹಟಕ್ಕೆ ಬಿದ್ದ ಧರ್ಮವೊಂದು ಎಲ್ಲರನ್ನೂ ಆಹುತಿ ತೆಗೆದುಕೊಳ್ಳುವ ಸಲುವಾಗಿ ತನ್ನ ಕಬಂಧ ಬಾಹುಗಳನ್ನು ಅಷ್ಟೂ ದಿಕ್ಕುಗಳಲ್ಲಿ ಚಾಚಿರುವಂತೆ ಭಾಸವಾಗುತ್ತಿದೆ.

ಏನಿದೆ ಲವ್ ಜಿಹಾದ್‍ನಲ್ಲಿ? ಬಾಂಬ್ ಸ್ಫೋಟವಿಲ್ಲ, ರಕ್ತದ ಕೋಡಿ ಹರಿಯುವುದಿಲ್ಲ, ಜೀವಗಳೊಡನೆ ಚೆಲ್ಲಾಟವಂತೂ ಇಲ್ಲವೇ ಇಲ್ಲ. ಆದರೆ ಅದೆಲ್ಲಕ್ಕಿಂತ ಮಿಗಿಲಾದ ಹಾನಿ ಉಂಟಾಗುತ್ತಿದೆ. ನಮ್ಮ ಧರ್ಮ ಉಸಿರುಕಟ್ಟಿ ಸಾಯುತ್ತಿದೆ. ನಮ್ಮ ಚಿಗುರುಗಳನ್ನು ಮೊಳೆಸಬೇಕಾದ ಒಡಲುಗಳು ಅನ್ಯರ ಬಸಿರನ್ನು ಹೊರುತ್ತಿವೆ. ಹೊರಲಾರದೆ ಮುರುಟುತ್ತಿವೆ. ಲವ್ ಜಿಹಾದ್‍ನಲ್ಲಿ ನಡೆಯುವುದೇನೆಂದು ನೋಡೋಣ ಬನ್ನಿ. ಹಿಂದೂಗಳ ಅಡ್ಡ-ಹೆಸರುಗಳನ್ನು ಇಟ್ಟುಕೊಂಡ ಮುಸ್ಲಿಂ ಯುವಕರು ಹಿಂದೂ ಯುವತಿಯರ ಬೆನ್ನು ಬೀಳುತ್ತಾರೆ. ಅವರ ವೇಷವನ್ನು, ಹಣೆಯ ತಿಲಕವನ್ನು ನೋಡುವ ಹುಡುಗಿಯರಿಗೆ ತಾವು ಮರುಳಾಗುತ್ತಿರುವುದು ಧರ್ಮಾಂಧ ದುರುಳರಿಗೆ ಎಂದು ತಿಳಿಯುವುದೇ ಇಲ್ಲ. ಮದುವೆಯಾಗುವ ಸಲುವಾಗಿ ತಂದೆ-ತಾಯಿಯರಿಗೆ ಹೇಳದೆಯೇ ಮನೆಬಿಟ್ಟು ಬರುವ ಹೆಣ್ಣುಮಕ್ಕಳಿಗೆ ಹಿಂದೂ ಹೆಸರಿನ ಹಿಂದಿನ ಮುಸ್ಲಿಂ ಮುಖದ ಕರಾಳತೆ ಅರಿವಾಗುವುದೇ ಆಗ. ತಕ್ಷಣವೇ ಶುರುವಾಗುತ್ತದೆ ಮತಾಂತರದ ವರಾತ. ಹುಡುಗಿಯನ್ನು ತಮ್ಮ ಧರ್ಮಕ್ಕೆ ಬದಲಾಯಿಸಿಕೊಂಡು ಮದುವೆಯಾಗಿಬಿಟ್ಟರೆ ಅಲ್ಲಿಗೆ ಅವರ ಉದ್ದೇಶ ಈಡೇರಿದಂತೆಯೇ. ಹಾಗೆಂದು ಎಲ್ಲ ಪ್ರೇಮ ಪ್ರಕರಣಗಳೂ ಮದುವೆಯಲ್ಲಿ ಮುಕ್ತಾಯವಾಗುವುದಿಲ್ಲ. ತಮ್ಮ ಮುಸ್ಲಿಂ ಪ್ರೇಮಿಗಳ ಹಾಗೂ ಅವರ ಗೆಳೆಯರ ಅತ್ಯಾಚಾರಕ್ಕೆ ಬಲಿಯಾಗುವ ಎಷ್ಟೋ ಹೆಣ್ಣುಮಕ್ಕಳು ಸೂಳೆಕೇರಿಗಳನ್ನು ಸೇರುತ್ತಾರೆ. ಕಳೆದುಹೋದ ಮಾನ, ಕೆಡಿಸಿಕೊಂಡ ಹೆಸರುಗಳು ಅವರನ್ನು ಮತ್ತೆ ಸಮಾಜಮುಖಿಗಳಾಗಲು ಬಿಡುವುದೇ ಇಲ್ಲ. ಕಾಣೆಯಾದವರ ಪಟ್ಟಿಯಲ್ಲಿ ಅವರ ಬದುಕೂ ಕಳೆದು ಹೋಗುತ್ತದೆ.

ವಾಸ್ತವದಲ್ಲಿ ಲವ್ ಜಿಹಾದ್‍ನಂಥ ಯಾವ ಚಟುವಟಿಕೆಗಳೂ ಇಲ್ಲವೇ ಇಲ್ಲ, ಕೋಮುವಾದಿಗಳು ಅಂತರ್ಜಾತೀಯ ಮದುವೆಗಳಿಗೆ ಕೊಟ್ಟಿರುವ ಹೆಸರು ಇದು ಎಂಬುದು ಸೆಕ್ಯುಲರ್‍ವಾದಿಗಳ ವಿತ್ತಂಡ ವಾದ. ಅವರ ಜೊತೆ ದನಿಗೂಡಿಸುವವರು ನಮ್ಮ ರಾಷ್ಟ್ರೀಯ ಚಾನೆಲ್‍ಗಳ ಹೆಸರಾಂತ ಪತ್ರಕರ್ತರು! ಅವರು ಕೊಡುವ ಉದಾಹರಣೆಗಳು ಬಾಲಿವುಡ್‍ ನಟರದ್ದು. ಶಾರುಖ್ ಖಾನ್ ಗೌರಿಯನ್ನು ಮದುವೆಯಾಗಿದ್ದಾನಲ್ಲ ಅದು ಲವ್ ಜಿಹಾದ್‍ನ ಉದಾಹರಣೆಯೇ ಎಂದು ಕೇಳುತ್ತಾರೆ. ಹಿಂದೂ ಪತ್ನಿಯರ ಕೈ ಹಿಡಿದಿರುವ ಅಮೀರ್ ಖಾನ್, ಸೈಫ್ ಅಲಿ ಖಾನ್, ಅರ್‍ಬಾಜ್ ಖಾನ್ ಮುಂತಾದ 'ಖಾನ್'ದಾನಿಗಳು ಜಿಹಾದಿಗಳೇ ಎಂದು ಪ್ರಶ್ನಿಸುತ್ತಾರೆ. ಅಲ್ಲ, ಪ್ರೇಮ ವಿವಾಹಕ್ಕೂ ಲವ್ ಜಿಹಾದ್‍ಗೂ ಇರುವ ವ್ಯತ್ಯಾಸವನ್ನು ಅರಿಯಲಾಗದಷ್ಟು ಬೆಪ್ಪರೇ ನಾವು? ಲವ್ ಜಿಹಾದ್ ಎಂಬುದು ಕಟ್ಟುಕಥೆ ಎನ್ನುವ ಅವರ ವಾದವನ್ನು ಏಕೆ ನಂಬಬೇಕು? ಅದೂ ನಮ್ಮ ಮುಂದೆ ನೂರಾರು ದೃಷ್ಟಾಂತಗಳಿರುವಾಗ?


ಈಗ್ಗೆ ಆರೇಳು ವರ್ಷಗಳಾಗಿವೆ ಲವ್ ಜಿಹಾದ್‍ನ ಅಸ್ತಿತ್ವ ನಮ್ಮ ಗಮನಕ್ಕೆ ಬಂದು. ಮೊತ್ತ ಮೊದಲು, ಅಂದರೆ 2009ರಲ್ಲಿ, ಇದನ್ನು ಎಲ್ಲರ ಗಮನಕ್ಕೆ ತಂದಿದ್ದು ಕೇರಳದ ಕ್ಯಾಥೊಲಿಕ್ ಚರ್ಚ್. ಅಲ್ಲಿನ ಬಿಷಪ್‍ಗಳ ಪ್ರಕಾರ ಅದಾಗಲೇ ಸುಮಾರು 4,500 ಕ್ರೈಸ್ತ ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿತ್ತು. ಅದನ್ನು ಕೇಳಿದ ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕದ ಅಂಕಿ-ಅಂಶಗಳನ್ನು ತಡಕಿದಾಗ ತಿಳಿದುಬಂದದ್ದು, ಕರ್ನಾಟಕದಲ್ಲಿ ಅದಕ್ಕೆ ಬಲಿಯಾದವರ ಸಂಖ್ಯೆ ಸುಮಾರು 30ಸಾವಿರದಷ್ಟು ಎಂಬುದು!  ಈ ಪ್ರಕರಣಗಳನ್ನು ದಾಖಲಿಸಲೆಂದೇ ವಿಶ್ವ ಹಿಂದೂ ಪರಿಷತ್ ಸಹಾಯವಾಣಿಯನ್ನು ಪ್ರಾರಂಭಿಸಿತು. ಮೂರೇ ತಿಂಗಳಲ್ಲಿ ಅದಕ್ಕೆ ಬಂದ ಕರೆಗಳ ಸಂಖ್ಯೆ 1500! ನಿಜವಾಗಿಯೂ ದಿಗಿಲಾದದ್ದೇ ಆಗ. ಒಮ್ಮೆಗೇ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ತನಿಖೆ ಶುರುವಾಯಿತು. ಕರ್ನಾಟಕದಲ್ಲಿ ಸಿ.ಐ.ಡಿ ತನಿಖೆ ನಡೆದರೂ ಲವ್ ಜಿಹಾದ್‍ಅನ್ನು ರುಜುವಾತು ಪಡಿಸುವ ಯಾವ ಸಾಕ್ಷ್ಯಗಳೂ ಸಿಗಲಿಲ್ಲ. ಎಲ್ಲವೂ ಪ್ರೇಮ ವಿವಾಹಗಳೇ, ಎಲ್ಲ ಹೆಣ್ಣುಮಕ್ಕಳೂ ತಮ್ಮಿಚ್ಛೆಯಂತೆಯೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವರದಿ ಕೊಟ್ಟರು ಅಂದಿನ  DIG ಆಗಿದ್ದ ಜೇಕಬ್ ಪುನ್ನೂಸ್. ಆದರೆ ಕೇರಳದಲ್ಲಿ ಹಾಗಾಗಲಿಲ್ಲ. 2009ರ ಡಿಸೆಂಬರ್ 9 ರಂದು, ಕೇರಳದ ಮುಖ್ಯ ನ್ಯಾಯಾಲಯದ ನ್ಯಾಯಾಧೀಶ ಕೆ.ಟಿ.ಸಂಕರನ್ ಇಂಥದೇ ಒಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಹಲವಾರು ಹುಡುಗಿಯರ ಮತಾಂತರ ಮಾಡಿದ್ದ ಮುಸ್ಲಿಂ ಯುವಕ ಜಾಮೀನಿಗಾಗಿ ಅವರ ಮುಂದೆ ನಿಂತಿದ್ದ. ವಿಚಾರಣೆ ಮುಗಿಯುತ್ತಿದ್ದಂತೆಯೇ ಇದು ಬಲವಂತದ ಮತಾಂತರವೇ ಎಂದು ಸ್ಪಷ್ಟ ಭಾಷೆಯಲ್ಲಿ ಹೇಳಿಬಿಟ್ಟರು ಸಂಕರನ್. ಪರಿಣಾಮವೇನಾಯಿತೆಂದರೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಂಬ ಆರೋಪ ಹೊರಿಸಿ, ಲವ್ ಜಿಹಾದ್ ಪ್ರಕರಣಗಳ ತನಿಖೆಯನ್ನೇ ಸ್ಥಗಿತಗೊಳಿಸಲಾಯಿತು! ಸರಿಯೇ, ನೆಹರೂ ಸ್ಥಾಪಿಸಿ ಹೋಗಿರುವ ಓಲೈಕೆ ಪದ್ಧತಿಯಲ್ಲಿ ಅಲ್ಪಸಂಖ್ಯಾತರ ಭಾವನೆಗಳಿಗೆ ಎಲ್ಲಾದರೂ ಘಾಸಿ ಮಾಡುವುದುಂಟೇ?

2010ರಲ್ಲಿ ಪ್ರಕರಣ ಮತ್ತೊಮ್ಮೆ ಗರಿಗೆದರಿತು. ಕೇರಳದ ಅಂದಿನ ಮುಖ್ಯಮಂತ್ರಿ ಅಚ್ಯುತಾನಂದನ್, ಲವ್ ಜಿಹಾದ್‍ಅನ್ನು ಬಳಸಿಕೊಂಡು ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದರು. ಯಥಾಪ್ರಕಾರ ಕಾಂಗ್ರೆಸ್ ಸರ್ಕಾರ ಅವರ ಬಾಯಿ ಮುಚ್ಚಿಸಿತು. ಆ ನಂತರವೂ ಮತಾಂತರ ಅವ್ಯಾಹತವಾಗಿ ಸಾಗಿದೆ. ಹೇಗಿರುತ್ತವೆ ಲವ್ ಜಿಹಾದ್ ಪ್ರಕರಣಗಳು ಎಂಬ ಕುತೂಹಲವಿರುತ್ತದಲ್ಲವೇ ನಿಮಗೆ, ಕೆಲವನ್ನು ನೋಡೋಣ ಬನ್ನಿ.

ಇದು ಚಾಮರಾಜನಗರದಲ್ಲಿ ನಡೆದ ಘಟನೆ. 2009ರ ಆಗಸ್ಟ್ ತಿಂಗಳು. ಬೇಕರಿ ಮಾಲೀಕರಾಗಿದ್ದ ಸೆಲ್ವ‍ರಾಜ್ ಎಂಬುವರ ಹಿರಿಮಗಳು ಸಿಲ್ಜಾ ರಾಜ್ ಅಸ್ಗರ್ ಎಂಬ ಮುಸ್ಲಿಂ ಬಸ್ ಡ್ರೈವರ್‍ನನ್ನು ಪ್ರೀತಿಸುತ್ತಾಳೆ. ಅವನನ್ನೇ ಮದುವೆಯಾಗುವುದಾಗಿ ಹಟ ಹಿಡಿಯುತ್ತಾಳೆ. ಅಪ್ಪ ಮದುವೆಗೆ ಒಪ್ಪುವುದಿಲ್ಲ ಎನ್ನುವುದು ಗೊತ್ತಾದ ತಕ್ಷಣ ಅಸ್ಗರ್‍ನೊಂದಿಗೆ ಓಡಿ ಹೋಗುತ್ತಾಳೆ. ಮಗಳನ್ನು ಹುಡುಕುವಷ್ಟರಲ್ಲಿ ಹೈರಾಣಾಗುತ್ತಾನೆ ಅಪ್ಪ. ವಾಪಸ್ಸು ಬಾ ಎಂದು ಗೋಗರೆಯುತ್ತಾನೆ. ಅದರೆ ಅಸ್ಗರನ ಮನೆಯವರು ಅವಳನ್ನು ಕಳಿಸುವುದಿಲ್ಲ. ಏಕೆಂದರೆ, ಅಷ್ಟು ಹೊತ್ತಿಗೆ ಅಸ್ಗರನೊಂದಿಗೆ ಮದುವೆಯಾಗಿ ಅವಳು ಮತಾಂತರಗೊಂಡಿರುತ್ತಾಳೆ.

ಮತ್ತೊಂದು ಘಟನೆ. 18 ವರ್ಷದ ಬಂಗಾಳಿ ಹುಡುಗಿ ರಿಂಕು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ಪತ್ತೆಯಾಗುವುದು ದೆಹಲಿಯ ಹೋಟೆಲೊಂದರಲ್ಲಿ ಹೆಣವಾಗಿ. ಕಾಸಿಮ್ ಎಂಬ 41 ವರ್ಷದ ಮುಸ್ಲಿಂ ಗೆಳೆಯನೊಂದಿಗೆ ಆ ಹೋಟೆಲ್‍ಗೆ ಹೋದ ರಿಂಕು, ಎರಡು ದಿನಗಳ ನಂತರ ಫ್ಯಾನ್‍ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಿಗುತ್ತಾಳೆ. ಜೊತೆಗಾರ ಕಾಸಿಂ ನಾಪತ್ತೆ!

ಅಸ್ಸಾಂನ ವಿಧಾನಸಭಾ ಸದಸ್ಯೆ ರುಮಿ ನಾಥ್‍ಳ ಕಥೆ ನಿಮಗೆ ಗೊತ್ತೋ ಇಲ್ಲವೋ. ಲಾಯಕ್ಕಾದ ಗಂಡ, ಎರಡು ವರ್ಷದ ಮುದ್ದಾದ ಮಗಳಿದ್ದ ರುಮಿ, ಫೇಸ್‍ಬುಕ್‍ನಲ್ಲಿ ಜಾಕಿರ್ ಎಂಬ ಯುವಕನ ಪ್ರೀತಿಗೆ ಸಿಲುಕುತ್ತಾಳೆ. ಅವನನ್ನು ಮುಸ್ಲಿಂ ಪದ್ಧತಿಯಂತೆ ಮದುವೆಯಾಗಿ ರಾತ್ರೋರಾತ್ರಿ ಗಂಡ, ಮಗಳನ್ನು ಬಿಟ್ಟು ಓಡಿ ಹೋಗುತ್ತಾಳೆ. ತನ್ನ ಹೆಸರನ್ನು ರಬಿಯಾ ಸುಲ್ತಾನಾ ಎಂದು ಬದಲಾಯಿಸಿಕೊಳ್ಳುತ್ತಾಳೆ. ಇಷ್ಟೆಲ್ಲಾ ನಡೆಯುವುದು ಅಸ್ಸಾಂನ ಮಂತ್ರಿ ಸಿದ್ದಿಕಿ ಅಹಮದ್‍ನ ನೇತೃತ್ವದಲ್ಲಿ. ಹಾಗೆ ಜಾಕಿರ್‍ನೊಡನೆ ಬಾಂಗ್ಲಾದೇಶಕ್ಕೆ ಓಡಿ ಹೋಗುವ ರುಮಿಗೆ ಅವನು ಅಯೋಗ್ಯ ಎಂಬ ಸತ್ಯ ಗೊತ್ತಾಗಲು ಬಹಳ ದಿನ ಹಿಡಿಯುವುದಿಲ್ಲ. ದುಶ್ಚಟಗಳ ದಾಸನಾದ ಜಾಕಿರ್ ಅವಳನ್ನು ದೈಹಿಕವಾಗಿ ಹಿಂಸಿಸತೊಡಗಿದಾಗ ಅವನಿಂದ ತಪ್ಪಿಸಿಕೊಂಡು ಬಂದು ಅವನ ವಿರುದ್ಧ ದೂರು ದಾಖಲಿಸುತ್ತಾಳೆ.

ಇತ್ತೀಚೆಗೆ ತುಂಬಾ ಸುದ್ದಿಯಾದ ರಾಷ್ಟ್ರ ಮಟ್ಟದ ಶೂಟರ್ ತಾರಾ ಸಹದೇವಳ ಕಥೆ ನಿಮಗೆ ಗೊತ್ತಿರಬಹುದು. ತನ್ನ ಹಿಂದೂ ಗೆಳೆಯ ರಂಜಿತ್ ಕುಮಾರ್ ಕೋಹ್ಲಿಯನ್ನು ಮದುವೆಯಾಗಿ ಸಂತಸವಾಗಿದ್ದ ಅವಳಿಗೆ ಅವನ ನಿಜ ನಾಮಧೇಯ ರಕೀಬುಲ್ ಹಸನ್ ಖಾನ್ ಎಂಬುದು ತಿಳಿದು ಬರುತ್ತಿದ್ದಂತೆ ಆಘಾತವಾಗುತ್ತದೆ. ಅಷ್ಟೇ ಅಲ್ಲ, ಅವಳನ್ನು ಇಸ್ಲಾಂಗೆ ಮತಾಂತರಗೊಳ್ಳಿಸಲು ಯತ್ನಿಸುವ ರಕೀಬುಲ್, ದೈಹಿಕವಾಗಿಯೂ ಬಹಳ ಹಿಂಸೆ ನೀಡುತ್ತಾನೆ. ಗೃಹಬಂಧಿಯಾಗಿಬಿಡುವ ತಾರಾ ಮನೆಕೆಲಸದವಳ ಮೂಲಕ ತನ್ನ ಸಹೋದರನಿಗೆ ವಿಷಯ ಮುಟ್ಟಿಸುತ್ತಾಳೆ. ಮದುವೆಯಾದ ಮೇಲೆ ಮೋಸದ ಅರಿವಾಗಿ ಪ್ರತಿಭಟಿಸುವ ಇಂಥ ಪ್ರಕರಣಗಳು ಒಂದೆಡೆಯಾದರೆ,  ಅತ್ಯಾಚಾರಕ್ಕೆ ಬಲಿಯಾಗುವ ಪ್ರಕರಣಗಳೂ ಬಹಳಷ್ಟಿವೆ. ಅದೇ ರೇಪ್ ಜಿಹಾದ್!

ಲವ್ ಜಿಹಾದ್‍ಗೆ ಪ್ರೀತಿಯ ಪರದೆಯಾದರೆ ರೇಪ್ ಜಿಹಾದ್‍ಗೆ ಅತ್ಯಾಚಾರದ ಆಸರೆ. ಉದಾಹರಣೆಗೆ, ಕಾಸರಗೋಡಿನ ಹತ್ತಿರ ಬಯರ್ ಎಂಬ ರಬ್ಬರ್ ಬೆಳೆಯುವ ಪ್ರದೇಶವಿದೆ. ಅಲ್ಲಿ, ಕಳೆದ ಆಗಸ್ಟ್ ಏಳರಂದು ಜಕಾರಿಯಾ ಎಂಬ 27ರ ಹರೆಯದ ಮುಸ್ಲಿಂ ಯುವಕ 21ರ ಹರೆಯದ ಹಿಂದೂ ಹುಡುಗಿಯೊಬ್ಬಳನ್ನು ತನ್ನ ಗೆಳೆಯರೊಡನೆ ಸೇರಿ ಅತ್ಯಾಚಾರ ಮಾಡಿದ. ವಿರೋಧಿಸಿದ ಆವಳ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ಮಾಡಿದ. ಇವನಷ್ಟೇ ಅಲ್ಲ, ಹಲವು ನಗರಗಳಲ್ಲಿ ರೇಪ್ ಜಿಹಾದಿಗಳು ಹೀಗೇ ಕಾರ್ಯತತ್ಪರರಾಗಿದ್ದಾರೆ.ಗಾಜಿಯಾಬಾದ್‍ನ ಫರ್ಖಾನ್, ಮೀರತ್‍ನ ಇದ್ರಿಶ್ ಕುಖ್ಯಾತರು. ಉತ್ತರಪ್ರದೇಶದ ಹತ್ರಾಸ್‍ನಲ್ಲಿ 22 ವರ್ಷದ ದಲಿತ ಯುವತಿಯ ಮೇಲೆ ಏಳು ಮುಸ್ಲಿಂ ಯುವಕರ ಗುಂಪೊಂದು ಅತ್ಯಾಚಾರವೆಸಗಿತು. ಅಷ್ಟೇ ಸಾಲದು ಎಂಬಂತೆ ಅವಳನ್ನು ಸಜೀವವಾಗಿ ದಹಿಸಿತು. ಕಳೆದ ವರ್ಷ ಬಂಟ್ವಾಳದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ. ಬಿ.ಎಡ್ ಮುಗಿಸಿದ್ದ ಸ್ನೇಹಾ ಸರ್ಕಾರಿ ನೌಕರಿ ಸಿಕ್ಕ ಖುಷಿಯಲ್ಲಿದ್ದಳು. ಶಿಕ್ಷಕಿಯಾಗಿ ಬದುಕು ಆರಂಭಿಸುವ ಉತ್ಸಾಹದಲ್ಲಿದ್ದವಳನ್ನು ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಬೆಳ್ತಂಗಡಿಯ ಹತ್ತಿರ ಕೊಲೆಯಾದ ಸೌಜನ್ಯಳದ್ದೂ ಬರ್ಬರ ಅತ್ಯಾಚಾರದ ಕಥೆಯೇ. ಈ ಘಟನೆಗಳಲ್ಲಿ ಆಪಾದಿತರು ಮುಸ್ಲಿಂ ಯುವಕರೇ.

ಇಲ್ಲೇ ಈ ಗತಿಯಾದರೆ ಇನ್ನು ಪಾಕಿಸ್ತಾನದಲ್ಲಿರುವ ಹಿಂದೂಗಳ ಪರಿಸ್ಥಿತಿ ಎಷ್ಟು ದುಸ್ತರವಿರಬಹುದು ಊಹಿಸಿ. ಎಳೆಯ ಕಂದಮ್ಮಗಳು ನಾಪತ್ತೆಯಾಗಿಬಿಡುತ್ತವೆ. ವಯಸ್ಸಿಗೆ ಬಂದಿರುವ ಹುಡುಗಿಯರು ಅಪಹೃತರಾಗುತ್ತಾರೆ. ಕಳೆದ ಜನವರಿಯಲ್ಲಿ ಸಪ್ನಾ ರಾಣಿ ಎಂಬ ಶಿಕ್ಷಕಿಯ ಅಪಹರಣವಾಗಿತ್ತು. ಅವಳ ಮೊಬೈಲ್ ಫೋನ್‍ನಿಂದ ದೊರೆತ ಸುಳಿವಿನ ಜಾಡು ಹಿಡಿದು ಪೋಲೀಸರು ಆವಳನ್ನು ಪಾರು ಮಾಡಿದ್ದರು. ಅವಳದ್ದೂ ಅದೇ ಕಥೆ. ಇಸ್ಲಾಂ ಸೇರುವಂತೆ, ತನ್ನನ್ನು ಮದುವೆಯಾಗುವಂತೆ ಅಪಹರಣಕಾರನ ಒತ್ತಾಯ. ಹೀಗೇ ಪಟ್ಟಿ ಮಾಡುತ್ತಾ ಹೋದರೆ ಬೆಚ್ಚಿ ಬೀಳುವಷ್ಟು ಪ್ರಕರಣಗಳು ಸಿಗುತ್ತವೆ. ಲವ್ ಜಿಹಾದ್‍ನ ಇರುವಿಕೆಯನ್ನೇ ಅಲ್ಲಗಳೆಯುವ ರಾಜಕಾರಣಿಗಳು ಒಂದೆಡೆಯಾದರೆ, ಹಿಂದುತ್ವವನ್ನು ಕೋಮುವಾದ ಎಂದು ಬಿಂಬಿಸಿ ಬೊಬ್ಬೆ ಹೊಡೆಯುವ ರಾಷ್ಟ್ರೀಯ ಮಾಧ್ಯಮಗಳು ಮತ್ತೊಂದೆಡೆ. ಯಾರು ಬೆಳಕಿಗೆ ತರಬೇಕು ಈ ವ್ಯವಸ್ಥಿತ ಸಂಚನ್ನು? ಇದೇ ಕೆಲಸವನ್ನು ಹಿಂದೂಗಳು ಮಾಡಿದ್ದರೆ ಈ ಜನ ಸುಮ್ಮನಿರುತ್ತಿದ್ದರೇ?

ಲವ್ ಜಿಹಾದ್‍ ಎಂಬ ಬೆಂಕಿ ನಮ್ಮ ಕಣ್ಣಿಗೆ ಕಾಣುವಂತೆ ಧಗಧಗನೆ ಉರಿಯುತ್ತಿಲ್ಲ. ಆದರೆ ಕೆಂಡವಾಗಿ ಒಳಗಿನಿಂದಲೇ ನಮ್ಮ ಬೇರುಗಳನ್ನು ಸುಡುತ್ತಿದೆ. ಪ್ರೀತಿಯೆಂಬ ಬೂದಿಯನ್ನು ಮುಚ್ಚಿಕೊಂಡಿರುವ ಇದಕ್ಕೆ ಬಲಿಯಾಗದಂತೆ ನಮ್ಮ ಯುವ ಪೀಳಿಗೆಯನ್ನು ತಡೆಯಬೇಕಾಗಿದೆ. ಬಾಲಿವುಡ್ ಚಿತ್ರಗಳ, ಚಿತ್ರನಟರ ಮೋಡಿಗೆ ಬಲಿಯಾಗಿ ಮನಸ್ಸನ್ನು ಲಂಗು ಲಗಾಮಿಲ್ಲದೆ ಹರಿಯಬಿಡುವ ಮಂದಿಯನ್ನು ವಾಸ್ತವಕ್ಕೆ ಎಳೆದು ತರಬೇಕಾಗಿದೆ. ಸದ್ಯದ ಮಟ್ಟಿಗೆ ಪ್ರೀತಿಯನ್ನು ಧರ್ಮದ ತಳಹದಿಯ ಮೇಲೇ ಹುಡುಕಿಕೊಳ್ಳುವ ಅನಿವಾರ್ಯತೆಯನ್ನೂ ಬಿಡಿಸಿ ಹೇಳಬೇಕಾಗಿದೆ. ಸಹಿಷ್ಣುಗಳು ಎಂಬ ಹಣೆಪಟ್ಟಿಯೊಂದಿಗೆ ಜೀವಿಸುವ ರೂಢಿಯನ್ನು ಬಿಡದಿದ್ದಲ್ಲಿ ನಮ್ಮ ಧರ್ಮಕ್ಕೆ ನಾವೇ ಮಾರಕವಾಗುವ ದಿನಗಳು ದೂರವಿಲ್ಲ.

ತಂಟೆ ಮಾಡುತ್ತಿರುವ ಈ ಲವ್ ಜಿಹಾದ್ ಎಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

1 comment:

  1. ಹಿಂದೂಗಳು ಷಂಡತನವನ್ನು ಬಿಟ್ಟಾಗ, ಧರ್ಮದ್ರೋಹಿಗಳ ಸಖ್ಯ ಮತ್ತು ಓಲೈಕೆ ತೊರೆದಾಗ, ಧರ್ಮ ರಕ್ಷಕನು ಬಂದಾಗ ಮಾತ್ರ, ಇದನ್ನು ತಡೆಯಬಹುದು

    ReplyDelete